<p><strong>ಕೊಪ್ಪಳ</strong>: ‘ಕೊರೊನಾದಿಂದ ಮಕ್ಕಳ ಕಲಿಕೆಯಲ್ಲಿ ಉಂಟಾದ ಕಲಿಕಾ ಅಂತರ ಸರಿದೂಗಿಸಲು ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ಕ್ರಿಯಾ ಯೋಜನೆ ರೂಪಿಸಿಕೊಂಡು ಮಕ್ಕಳನ್ನು ಕಲಿಕಾ ವಾತಾವರಣಕ್ಕೆ ತರಲು ಪ್ರಯತ್ನಿಸೋಣ’ ಎಂದು ಬಹದ್ದೂರಬಂಡಿ ಸಿಆರ್ಪಿ ಹನುಮಂತಪ್ಪ ಕುರಿ ಹೇಳಿದರು.</p>.<p>2021-22 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಕುರಿತು ಬಹದ್ದೂರಬಂಡಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಮುಖ್ಯಶಿಕ್ಷಕರ ಪೂರ್ವಭಾವಿ ಸಭೆ ಹಾಗೂ ಹೊಸ ಗೊಂಡಬಾಳ ಶಾಲೆ ತಯಾರಿಸಿದ ಇಲಾಖೆ ಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಶಿಕ್ಷಣ ಇಲಾಖೆಯ ಆದೇಶದಂತೆ ಯೋಜನೆ-1 ಹಾಗೂ ಯೋಜನೆ -2 ರಂತೆ ಮಕ್ಕಳ ಪಟ್ಟಿಯನ್ನು ಪ್ರತಿಯೊಂದು ಶಾಲೆಯಲ್ಲಿ ತಯಾರಿಸಿ 30 ಮಕ್ಕಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನಿಯುಕ್ತಿಗೊಳಿಸಿ ಮಕ್ಕಳಿಗೆ ಸೇತುಬಂಧ ಹಾಗೂ ಸಾಮರ್ಥ್ಯಗಳನ್ನು ನೀಡಲು ಪ್ರತಿಯೊಬ್ಬರೂ ಕ್ರಿಯಾಯೋಜನೆ ತಯಾರಿಸಬೇಕು ಎಂದರು.</p>.<p>ಅನುಪಾಲನೆ ಮಾಡುವುದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುವ ಸಂವಾದ ಹಾಗೂ ರೇಡಿಯೊ ಪಾಠಗಳನ್ನು ಇಲಾಖೆಯ ವೇಳಾಪಟ್ಟಿಯಂತೆ ಪಾಠ ವೀಕ್ಷಿಸಲು ತಿಳಿಸುವುದರ ಜತೆಗೆ ಪಾಲಕರಿಗೆ ಈ ಕಾರ್ಯಕ್ರಮದ ಕುರಿತಾಗಿ ಜಾಗೃತಿ ಮೂಡಿಸಿ ಸಮುದಾಯದ ಸಹಕಾರದಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಗೊಂಡಬಾಳ ಶಾಲೆಯು ತಯಾರಿಸಿದ ಇಲಾಖೆ ಯೋಜನೆಗಳ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಶಾಲೆಗಳಿಗೆ ತಳಿರು ತಿರಣಗಳಿಂದ ಶೃಂಗಾರಗೊಳಿಸಿ ಶಾಲಾ ಪ್ರಾರಂಭೋತ್ಸವ ಮಾಡಲು ತಿಳಿಸಿದರು.</p>.<p>ನೌಕರರ ಸಂಘದ ನಿರ್ದೇಶಕ ರವೀಂದ್ರ ಜೋಶಿ, ಮುಖ್ಯಶಿಕ್ಷಕ ಜೆ.ಡಿ.ಲಮಾಣಿ, ಭೀಮಪ್ಪ ಹೂಗಾರ್, ಟಿ.ಗೋವಿಂದಪ್ಪ, ವಿಶ್ವೇಶ್ವರಯ್ಯ, ವೆಂಕಟೇಶ್, ಓಂ ಪ್ರಕಾಶ್, ವಿಜಯಕುಮಾರ್, ಲೀಲಾವತಿ, ಬಸವರಾಜ್,ರಿಜ್ವಾನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ‘ಕೊರೊನಾದಿಂದ ಮಕ್ಕಳ ಕಲಿಕೆಯಲ್ಲಿ ಉಂಟಾದ ಕಲಿಕಾ ಅಂತರ ಸರಿದೂಗಿಸಲು ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ಕ್ರಿಯಾ ಯೋಜನೆ ರೂಪಿಸಿಕೊಂಡು ಮಕ್ಕಳನ್ನು ಕಲಿಕಾ ವಾತಾವರಣಕ್ಕೆ ತರಲು ಪ್ರಯತ್ನಿಸೋಣ’ ಎಂದು ಬಹದ್ದೂರಬಂಡಿ ಸಿಆರ್ಪಿ ಹನುಮಂತಪ್ಪ ಕುರಿ ಹೇಳಿದರು.</p>.<p>2021-22 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಕುರಿತು ಬಹದ್ದೂರಬಂಡಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಮುಖ್ಯಶಿಕ್ಷಕರ ಪೂರ್ವಭಾವಿ ಸಭೆ ಹಾಗೂ ಹೊಸ ಗೊಂಡಬಾಳ ಶಾಲೆ ತಯಾರಿಸಿದ ಇಲಾಖೆ ಯೋಜನೆಗಳನ್ನು ಒಳಗೊಂಡ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಶಿಕ್ಷಣ ಇಲಾಖೆಯ ಆದೇಶದಂತೆ ಯೋಜನೆ-1 ಹಾಗೂ ಯೋಜನೆ -2 ರಂತೆ ಮಕ್ಕಳ ಪಟ್ಟಿಯನ್ನು ಪ್ರತಿಯೊಂದು ಶಾಲೆಯಲ್ಲಿ ತಯಾರಿಸಿ 30 ಮಕ್ಕಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನಿಯುಕ್ತಿಗೊಳಿಸಿ ಮಕ್ಕಳಿಗೆ ಸೇತುಬಂಧ ಹಾಗೂ ಸಾಮರ್ಥ್ಯಗಳನ್ನು ನೀಡಲು ಪ್ರತಿಯೊಬ್ಬರೂ ಕ್ರಿಯಾಯೋಜನೆ ತಯಾರಿಸಬೇಕು ಎಂದರು.</p>.<p>ಅನುಪಾಲನೆ ಮಾಡುವುದರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುವ ಸಂವಾದ ಹಾಗೂ ರೇಡಿಯೊ ಪಾಠಗಳನ್ನು ಇಲಾಖೆಯ ವೇಳಾಪಟ್ಟಿಯಂತೆ ಪಾಠ ವೀಕ್ಷಿಸಲು ತಿಳಿಸುವುದರ ಜತೆಗೆ ಪಾಲಕರಿಗೆ ಈ ಕಾರ್ಯಕ್ರಮದ ಕುರಿತಾಗಿ ಜಾಗೃತಿ ಮೂಡಿಸಿ ಸಮುದಾಯದ ಸಹಕಾರದಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಗೊಂಡಬಾಳ ಶಾಲೆಯು ತಯಾರಿಸಿದ ಇಲಾಖೆ ಯೋಜನೆಗಳ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಶಾಲೆಗಳಿಗೆ ತಳಿರು ತಿರಣಗಳಿಂದ ಶೃಂಗಾರಗೊಳಿಸಿ ಶಾಲಾ ಪ್ರಾರಂಭೋತ್ಸವ ಮಾಡಲು ತಿಳಿಸಿದರು.</p>.<p>ನೌಕರರ ಸಂಘದ ನಿರ್ದೇಶಕ ರವೀಂದ್ರ ಜೋಶಿ, ಮುಖ್ಯಶಿಕ್ಷಕ ಜೆ.ಡಿ.ಲಮಾಣಿ, ಭೀಮಪ್ಪ ಹೂಗಾರ್, ಟಿ.ಗೋವಿಂದಪ್ಪ, ವಿಶ್ವೇಶ್ವರಯ್ಯ, ವೆಂಕಟೇಶ್, ಓಂ ಪ್ರಕಾಶ್, ವಿಜಯಕುಮಾರ್, ಲೀಲಾವತಿ, ಬಸವರಾಜ್,ರಿಜ್ವಾನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>