<p><strong>ಕನಕಗಿರಿ</strong>: ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು.</p>.<p>ಮಕರ ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಹಾಗೂ ಹಬ್ಬದ ವಿಶೇಷತೆಯಾಗಿರುವ ಧಾನ್ಯಗಳ ಪೂಜೆ, ಎಳ್ಳು ಬೆಲ್ಲ ಹಂಚುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಕೊರವಂಜಿ, ದಾಸಯ್ಯ ಹಾಗೂ ಹಳ್ಳಿ ಸೊಗಡಿನ ವೇಷ ಧರಿಸಿ ಗಮನ ಸೆಳೆದರು.</p>.<p>ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ‘ಸುಗ್ಗಿ ಹಬ್ಬ’ ಕಾರ್ಯಕ್ರಮ ನಡೆಸಲಾಗಿದೆ ಎಂದು ಮುಖ್ಯಶಿಕ್ಷಕ ಹರೀಶ ನಾಯಕ ತಿಳಿಸಿದರು.</p>.<p>ಸಹ ಮುಖ್ಯಶಿಕ್ಷಕಿ ಸವಿತಾ ನಾಯ್ಕ, ಶಿಕ್ಷಕರಾದ ಬೀಬಿ ಫಾತಿಮಾ, ಮಂಜುನಾಥ ಮಾಲಿಪಾಟೀಲ, ಮಂಜುನಾಥ ಮಿಟ್ಲಕೋಡ, ತ್ರಿವೇಣಿ ರಾಮ್ ಜಿ., ಪಿ.ಮೇಘಶ್ರೀ, ವೆಂಕಟೇಶ ಕಂಠಿ, ಮರಿಯಮ್ಮ ಚಲುವಾದಿ, ರಿಯಾನಾ ಬೇಗಂ, ಸುನೀತಾ.ಸಿ, ರಾಜೇಶ್ವರಿ.ವಿ, ನೀಲಾ, ರೋಜಾ , ವೆಂಕಟೇಶ , ಜುಬೇದಾ ಬೇಗಂ, ಜಡೇಶ.ವಿ, ಭೀಮೇಶ, ಹನುಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು.</p>.<p>ಮಕರ ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಹಾಗೂ ಹಬ್ಬದ ವಿಶೇಷತೆಯಾಗಿರುವ ಧಾನ್ಯಗಳ ಪೂಜೆ, ಎಳ್ಳು ಬೆಲ್ಲ ಹಂಚುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಕೊರವಂಜಿ, ದಾಸಯ್ಯ ಹಾಗೂ ಹಳ್ಳಿ ಸೊಗಡಿನ ವೇಷ ಧರಿಸಿ ಗಮನ ಸೆಳೆದರು.</p>.<p>ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ‘ಸುಗ್ಗಿ ಹಬ್ಬ’ ಕಾರ್ಯಕ್ರಮ ನಡೆಸಲಾಗಿದೆ ಎಂದು ಮುಖ್ಯಶಿಕ್ಷಕ ಹರೀಶ ನಾಯಕ ತಿಳಿಸಿದರು.</p>.<p>ಸಹ ಮುಖ್ಯಶಿಕ್ಷಕಿ ಸವಿತಾ ನಾಯ್ಕ, ಶಿಕ್ಷಕರಾದ ಬೀಬಿ ಫಾತಿಮಾ, ಮಂಜುನಾಥ ಮಾಲಿಪಾಟೀಲ, ಮಂಜುನಾಥ ಮಿಟ್ಲಕೋಡ, ತ್ರಿವೇಣಿ ರಾಮ್ ಜಿ., ಪಿ.ಮೇಘಶ್ರೀ, ವೆಂಕಟೇಶ ಕಂಠಿ, ಮರಿಯಮ್ಮ ಚಲುವಾದಿ, ರಿಯಾನಾ ಬೇಗಂ, ಸುನೀತಾ.ಸಿ, ರಾಜೇಶ್ವರಿ.ವಿ, ನೀಲಾ, ರೋಜಾ , ವೆಂಕಟೇಶ , ಜುಬೇದಾ ಬೇಗಂ, ಜಡೇಶ.ವಿ, ಭೀಮೇಶ, ಹನುಮೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>