<p><strong>ಕೊಪ್ಪಳ:</strong> ‘ಸಮಾಜದ ಅಭಿವೃದ್ಧಿ ಇಬ್ಬರು ಸ್ವಾಮೀಜಿಗಳಿಂದ ಸಾಧ್ಯವಾಗದು. ನಮ್ಮ ಸಮುದಾಯದ ಸ್ವಾಮೀಜಿಗಳ ಸಂಖ್ಯೆ ಹೆಚ್ಚಾದರೆ ಧಾರ್ಮಿಕ ಕೆಲಸಗಳು ಹೆಚ್ಚಾಗುತ್ತವೆ’ ಎಂದು ಹರಿಹರ್ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.</p>.<p>‘ಮತಾಂತರಗೊಳ್ಳುತ್ತಿರುವುದು ವ್ಯಾಪಕ ಆಗುತ್ತಿರುವ ಹೊತ್ತಿನಲ್ಲಿ ಸಮಾಜದ ಪ್ರಗತಿ ಅಗತ್ಯ. ಇದಕ್ಕೆ ಪೂರಕವಾಗಿ ಪಂಚಮಸಾಲಿ ಲಿಂಗಾಯತ ಸ್ವಾಮೀಜಿಗಳ ಸಂಖ್ಯೆಯೂ ಹೆಚ್ಚಬೇಕಿದೆ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.</p>.<p>‘ನಾನು ಹಾಗೂ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇರೆ ಅಲ್ಲ. ನಮ್ಮಲ್ಲಿ ತಾರತಮ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದ ಅವರು, ‘ನಾವೆಲ್ಲರೂ ಕಿತ್ತೂರುರಾಣಿ ಚನ್ನಮ್ಮನ ವಂಶಸ್ಥರು. ಇಬ್ಬರನ್ನು ಒಪ್ಪಿಕೊಂಡು ಸಮಾಜ ಖುಷಿಯಾಗಿದೆ. ನಮಗೆ ಯಾವಾಗ ಬೇಕೋ ಆವಾಗ ಸೇರುತ್ತೇವೆ. ನಾವು ಜಾಣರಿದ್ದೇವೆ’ ಎಂದು ಹೇಳಿದರು.</p>.<p>ಸಮುದಾಯಕ್ಕೆ ಮೀಸಲಾತಿ ಕುರಿತ ಪ್ರಶ್ನೆಗೆ ‘ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತೇವೆ. ಯಾವ ರಾಜಕಾರಣಿ ಈ ಕುರಿತು ಏನೇ ಹೇಳಿಕೆಯನ್ನು ನೀಡಿದರೂ ನಮಗೆ ಬೇಕಾಗಿದ್ದನ್ನು ಪಡೆದುಕೊಂಡೇ ತೀರುತ್ತೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ‘ಸಮಾಜದ ಅಭಿವೃದ್ಧಿ ಇಬ್ಬರು ಸ್ವಾಮೀಜಿಗಳಿಂದ ಸಾಧ್ಯವಾಗದು. ನಮ್ಮ ಸಮುದಾಯದ ಸ್ವಾಮೀಜಿಗಳ ಸಂಖ್ಯೆ ಹೆಚ್ಚಾದರೆ ಧಾರ್ಮಿಕ ಕೆಲಸಗಳು ಹೆಚ್ಚಾಗುತ್ತವೆ’ ಎಂದು ಹರಿಹರ್ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.</p>.<p>‘ಮತಾಂತರಗೊಳ್ಳುತ್ತಿರುವುದು ವ್ಯಾಪಕ ಆಗುತ್ತಿರುವ ಹೊತ್ತಿನಲ್ಲಿ ಸಮಾಜದ ಪ್ರಗತಿ ಅಗತ್ಯ. ಇದಕ್ಕೆ ಪೂರಕವಾಗಿ ಪಂಚಮಸಾಲಿ ಲಿಂಗಾಯತ ಸ್ವಾಮೀಜಿಗಳ ಸಂಖ್ಯೆಯೂ ಹೆಚ್ಚಬೇಕಿದೆ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.</p>.<p>‘ನಾನು ಹಾಗೂ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇರೆ ಅಲ್ಲ. ನಮ್ಮಲ್ಲಿ ತಾರತಮ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದ ಅವರು, ‘ನಾವೆಲ್ಲರೂ ಕಿತ್ತೂರುರಾಣಿ ಚನ್ನಮ್ಮನ ವಂಶಸ್ಥರು. ಇಬ್ಬರನ್ನು ಒಪ್ಪಿಕೊಂಡು ಸಮಾಜ ಖುಷಿಯಾಗಿದೆ. ನಮಗೆ ಯಾವಾಗ ಬೇಕೋ ಆವಾಗ ಸೇರುತ್ತೇವೆ. ನಾವು ಜಾಣರಿದ್ದೇವೆ’ ಎಂದು ಹೇಳಿದರು.</p>.<p>ಸಮುದಾಯಕ್ಕೆ ಮೀಸಲಾತಿ ಕುರಿತ ಪ್ರಶ್ನೆಗೆ ‘ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತೇವೆ. ಯಾವ ರಾಜಕಾರಣಿ ಈ ಕುರಿತು ಏನೇ ಹೇಳಿಕೆಯನ್ನು ನೀಡಿದರೂ ನಮಗೆ ಬೇಕಾಗಿದ್ದನ್ನು ಪಡೆದುಕೊಂಡೇ ತೀರುತ್ತೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>