ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಹಾಲಪ್ಪ ಅವರು ‘ತಳಕಲ್ ಎಂಜಿನಿಯರಿಂಗ್ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸದೇ, ಒಂದೂ ನೇಮಕಾತಿ ಮಾಡದೆ ಕಟ್ಟಡ ಮಾತ್ರ ಕಟ್ಟಿ ಹೋದವರಿಂದ ಹೇಳಿಸಿಕೊಳ್ಳುವುದು ಅಗತ್ಯವಿಲ್ಲ. ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರಾತಿ ಆಗಬೇಕೆಂಬುದು ನನ್ನ ಆಸೆಯಾಗಿತ್ತು. ನನ್ನ ತಾಲ್ಲೂಕಿಗೇ ಕೊಡಿ ಎಂದು ಯಾವತ್ತೂ ಕೇಳಿರಲಿಲ್ಲ’ ಎಂದರು.