ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಹೂ–ಕಾಯಿ ಭಾರ: ಬಾಗಿ ಬಳುಕುವ ತೊಗರಿ: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತರು

Published : 29 ಅಕ್ಟೋಬರ್ 2025, 7:16 IST
Last Updated : 29 ಅಕ್ಟೋಬರ್ 2025, 7:16 IST
ಫಾಲೋ ಮಾಡಿ
Comments
ತೊಗರಿ ಬೆಳೆ ಸದ್ಯ ಅತ್ಯುತ್ತಮವಾಗಿದೆ. ಕೀಟಬಾಧೆಯೂ ನಿಯಂತ್ರಣದಲ್ಲಿದೆ. ಆದರೆ ಅತಿಯಾದ ಮಳೆಯಿಂದ ತಾವರಗೇರಾ ಹಾಗೂ ಇತರೆ ಭಾಗದಲ್ಲಿ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ
ಅಂತರಬೆಳೆಯಾಗಿ ಹೆಸರು ಬೆಳೆದಿದ್ದೆ ಮುಖ್ಯ ಬೆಳೆಯಾಗಿರುವ ತೊಗರಿ ಉತ್ತಮವಾಗಿ ಬೆಳೆದಿದ್ದು ಈ ಬಾರಿ ಉತ್ತಮ ಇಳುವರಿ ಬರುವ ಆಶಾಭಾವನೆ ಇದೆ
ಹನುಮಂತ ಗದ್ದಿ ರೈತ
ತೊಗರಿಗೆ ಎರೆ ರೈತರ ಮೊರೆ
ಕೃಷಿ ಇಲಾಖೆ ಮೂಲಗಳ ಪ್ರಕಾರ ತೊಗರಿ ಬೆಳೆ ಕ್ಷೇತ್ರ ತಾಲ್ಲೂಕಿನಲ್ಲಿ ಸುಮಾರು 17800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ದ್ವಿದಳ ಧಾನ್ಯವಾಗಿ ಗುರುತಿಸಿಕೊಂಡಿದ್ದರೂ ಈಗ ವಾಣಿಜ್ಯ ಬೆಳೆಗಳ ಸಾಲಿನಲ್ಲಿ ನಿಂತಿದೆ. ಈ ಹಿಂದೆ ಎರೆ (ಕಪ್ಪು) ಜಮೀನಿನ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯುತ್ತಿದ್ದರೆ ಈಗ ಅದರ ಬದಲಿಗೆ ತೊಗರಿಗೆ ಮೊರೆ ಹೋಗುತ್ತಿರುವುದು ಮತ್ತೊಂದು ವಿಶೇಷ. ದೀರ್ಘಾವಧಿ ಬೆಳೆಯಾಗಿರುವುದರಿಂದ ಹಿಂಗಾರು ಅವಧಿಯಲ್ಲಿ ಬೆಳೆಯುತ್ತಿದ್ದ ಪ್ರಮುಖ ದ್ವಿದಳಧಾನ್ಯ ಕಡಲೆ ಬಿತ್ತನೆ ಕ್ಷೇತ್ರವೂ ಕಡಿಮೆಯಾಗಿದೆ ಎಂಬುದು ಕೃಷಿ ಇಲಾಖೆಯ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT