ತೊಗರಿ ಬೆಳೆ ಸದ್ಯ ಅತ್ಯುತ್ತಮವಾಗಿದೆ. ಕೀಟಬಾಧೆಯೂ ನಿಯಂತ್ರಣದಲ್ಲಿದೆ. ಆದರೆ ಅತಿಯಾದ ಮಳೆಯಿಂದ ತಾವರಗೇರಾ ಹಾಗೂ ಇತರೆ ಭಾಗದಲ್ಲಿ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ
ಅಂತರಬೆಳೆಯಾಗಿ ಹೆಸರು ಬೆಳೆದಿದ್ದೆ ಮುಖ್ಯ ಬೆಳೆಯಾಗಿರುವ ತೊಗರಿ ಉತ್ತಮವಾಗಿ ಬೆಳೆದಿದ್ದು ಈ ಬಾರಿ ಉತ್ತಮ ಇಳುವರಿ ಬರುವ ಆಶಾಭಾವನೆ ಇದೆ
ಹನುಮಂತ ಗದ್ದಿ ರೈತ
ತೊಗರಿಗೆ ಎರೆ ರೈತರ ಮೊರೆ
ಕೃಷಿ ಇಲಾಖೆ ಮೂಲಗಳ ಪ್ರಕಾರ ತೊಗರಿ ಬೆಳೆ ಕ್ಷೇತ್ರ ತಾಲ್ಲೂಕಿನಲ್ಲಿ ಸುಮಾರು 17800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ದ್ವಿದಳ ಧಾನ್ಯವಾಗಿ ಗುರುತಿಸಿಕೊಂಡಿದ್ದರೂ ಈಗ ವಾಣಿಜ್ಯ ಬೆಳೆಗಳ ಸಾಲಿನಲ್ಲಿ ನಿಂತಿದೆ. ಈ ಹಿಂದೆ ಎರೆ (ಕಪ್ಪು) ಜಮೀನಿನ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯುತ್ತಿದ್ದರೆ ಈಗ ಅದರ ಬದಲಿಗೆ ತೊಗರಿಗೆ ಮೊರೆ ಹೋಗುತ್ತಿರುವುದು ಮತ್ತೊಂದು ವಿಶೇಷ. ದೀರ್ಘಾವಧಿ ಬೆಳೆಯಾಗಿರುವುದರಿಂದ ಹಿಂಗಾರು ಅವಧಿಯಲ್ಲಿ ಬೆಳೆಯುತ್ತಿದ್ದ ಪ್ರಮುಖ ದ್ವಿದಳಧಾನ್ಯ ಕಡಲೆ ಬಿತ್ತನೆ ಕ್ಷೇತ್ರವೂ ಕಡಿಮೆಯಾಗಿದೆ ಎಂಬುದು ಕೃಷಿ ಇಲಾಖೆಯ ಮಾಹಿತಿ.