ಕಳೆದ ಒಂದುವರೆ ದಶಕದಿಂದ ಗಂಗಾವತಿಯೊಂದಿಗೆ ನಂಟು ಇಟ್ಟುಕೊಂಡಿರುವ ಶಾಸಕ ಆನಂದ್ ಸಿಂಗ್, ಇಲ್ಲಿನ ಕರ್ನೂಲುಬಾಬಾ ದರ್ಗಾಕ್ಕೆ ಆಗಾಗ ಭೇಟಿ ನೀಡಿ, ದೇಣಿಗೆ ಸಲ್ಲಿಸಿದ್ದಾರೆ. ಅಲ್ಲದೇ ಮಲ್ಲಾಪುರದ ಕುಟುಂಬವೊಂದಕ್ಕೆ ಪ್ರತಿ ವರ್ಷ ಸಹಾಯ ಮಾಡುವ ಮೂಲಕ ಕ್ಷೇತ್ರದೊಂದಿಗೆ ನಂಟಿಟ್ಟುಕೊಂಡಿದ್ದಾರೆ. ಆದರೆ ಬದಲಾಗುತ್ತಿರುವ ರಾಜಕೀಯ ವಿದ್ಯಾಮನಗಳಲ್ಲಿ ಆನಂದ್ ಸಿಂಗ್ ಅವರಿಗೆ ಹೊಸಪೇಟೆಯಲ್ಲಿ ಅನುಕೂಲಕರ ವಾತಾವರಣ ಇಲ್ಲ ಎನ್ನಲಾಗುತ್ತಿದ್ದು, ಗಂಗಾವತಿಯತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಗಂಗಾವತಿಯ ತಂಡವೊಂದು ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.