ಶಿವಮೊಗ್ಗ:ಹೂಡಿಕೆಗೆ ಉತ್ತೇಜನ ನೀಡಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಭೂಮಿ ಖರೀದಿ ಸೆಕ್ಷನ್ 79 ‘ಎ’ ಮತ್ತು ‘ಬಿ’ ರದ್ದುಪಡಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಖಂಡಿಸಿದೆ.
ಕಂದಾಯ ಸಚಿವ ಆರ್.ಅಶೋಕ್ ಅಧಿವೇಶನದಲ್ಲಿ ಮಸೂದೆ ಮಂಡಿಸುವಸುಳಿವು ನೀಡಿದ್ದಾರೆ. ಕೃಷಿ ಭೂಮಿ ಖರೀದಿ ನಿಯಮ ರದ್ದುಪಡಿಸಿದರೆರೈತರಬಳಿ ಭೂಮಿ ಉಳಿಯುವುದಿಲ್ಲ. ರೈತರು ಹೆಚ್ಚಿನ ಬೆಲೆಯ ಆಸೆಗೆ ಭೂಮಿ ಮಾರಾಟ ಮಾಡುತ್ತಾರೆ. ನಂತರ ಅವರ ಬದುಕುಬೀದಿಗೆಬೀಳುತ್ತದೆ.ನಗರದತ್ತ ವಲಸೆ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ, ನಿಯಮ ಬದಲಿಸಬಾರದು ಎಂದು ಸಂಘದಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಬಮಂಗಳವಾರ ಪತ್ರಿಕಾಗೋಷ್ಠಿಯಲ್ಲಿಒತ್ತಾಯಿಸಿದರು.
ದೇವರಾಜು ಅರಸುಅವರು ಕೃಷಿ ಭೂಮಿ ಖರೀದಿಗೆ ಮಿತಿ ಹಾಕಿದ್ದರು. ವಾರ್ಷಿಕ ₨ 2 ಲಕ್ಷಕ್ಕಿಂತಹೆಚ್ಚಿಗೆ ಕೃಷಿಯೇತರ ಆದಾಯ ಇರುವವರು ಭೂಮಿ ಖರೀದಿಸದಂತೆ ನಿರ್ಬಂಧಿಸಿದ್ದರು.ಪರಿಣಾಮ ರೈತರಲ್ಲದವರು, ಉದ್ಯಮಿಗಳು, ವ್ಯಾಪಾರಸ್ಥರು ಭೂಮಿ ಖರೀದಿಸಲು ಸಾಧ್ಯವಾಗಲಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರ್ಷಿಕಆದಾಯ ಮಿತಿ₨ 25 ಲಕ್ಷಕ್ಕೆ ಏರಿಸಿದರು.ಈಗ ಯಾರು ಬೇಕಾದರೂ ಭೂಮಿ ಖರೀಸುವ ಅವಕಾಶ ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ 70ರಷ್ಟಿರುವ ರೈತರು ಅನಕ್ಷರಸ್ಥರಿಗೂ ಸೇರಿ ಶೇ 80ರಷ್ಟು ಉದ್ಯೋಗ ನೀಡಿದ್ದಾರೆ. ಉದ್ಯಮಿಗಳಿಂದ ಕೇವಲ ಶೇ 20ರಷ್ಟು ಜನರಿಗೆ ಉದ್ಯೋಗ ದೊರೆತಿದೆ. ಒಂದು ಸಾವಿರ ಎಕರೆ ಕೃಷಿ ಭೂಮಿಯಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ.ಒಂದು ಸಾವಿರ ಎಕರೆಯಲ್ಲಿ ಕೈಗಾರಿಕೆ ಸ್ಥಾಪಿಸಿದರೆ 200 ಉದ್ಯೋಗ ದೊರಕುವುದಿಲ್ಲ ಎಂದರು.
ನಿರಾವರಿ, ರಸ್ತೆ, ರೈಲುಮಾರ್ಗ, ಕೈಗಾರಿಕೆ ಸ್ಥಾಪನೆ ಹೀಗೆ ಹಲವಾರು ಯೋಜನೆಗಳಿಗೆ ಕೃಷಿ ಭೂಮಿ ನಾಶವಾಗಿದೆ. ಇದೇ ರೀತಿ ಮುಂದುವರಿದರೆ ಆಹಾರ ಉತ್ಪಾದನೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಕೈಗಾರಿಕೆಗಳಿಗೆ ನೀಡಿರುವ ಭೂಮಿಯಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಕುರಿತು ಸರ್ಕಾರ ಭೂಮಿಯಆಡಿಟ್ ಮಾಡಿಸಬೇಕು.ಬಳಸದ ಭೂಮಿ ವಾಪಸ್ ಪಡೆದು ಮತ್ತೆ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.