ರಥೋತ್ಸವ ಆರಂಭಕ್ಕೂ ಮುನ್ನ ವೈದ್ಯನಾಥಪುರ ಗ್ರಾಮಸ್ಥರಿಂದ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೀಸಲು ನೀರು ತರಲಾಯಿತು. ವೈದ್ಯನಾಥೇಶ್ವರ ಸ್ವಾಮಿಯ ಬಸಪ್ಪನ ಜೊತೆಗೆ ಮದ್ದೂರಿನ ಗ್ರಾಮ ದೇವತೆ ಮದ್ದೂರಮ್ಮ, ಆಲೂರಿನ ಆಲೂರಮ್ಮ, ಉಪ್ಪಿನಕೆರೆ ಪಟ್ಟಲದಮ್ಮ, ಹಳೇ ಬೂದನೂರಿನ ಅಂಕನಾಥೇಶ್ವರಸ್ವಾಮಿ ವೀರಗಾಸೆ ಪೂಜಾ ಉತ್ಸವಗಳು ನೆರವೇರಿದವು.