<p><strong>ಭಾರತೀನಗರ:</strong> ಸಮೀಪದ ಅಣ್ಣೂರು ಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ಗ್ರಾಮ ದೇವತೆಗಳೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.</p>.<p>ಗ್ರಾಮದೇವತೆಗಳಾದ ಮಹಾಕಾಳಮ್ಮ, ಮಾರಮ್ಮ, ಅಟ್ಟಿಮಾರಮ್ಮ ಪೂಜೆಗಳು, ಸಿದ್ದೇಶ್ವರಸ್ವಾಮಿ ಸತ್ತಿಗೆ, ಈಶ್ವರ ಹಾಗೂ ತಿಮ್ಮಪ್ಪನ ವಾಹನ, ಮಹಾಕಾಳಿ ದೇವಿ ನಂದಿಕಂಭ, ಕೊರವಂಜಿ ಬುಟ್ಟಿ ಸಮೇತ ಗ್ರಾಮದಲ್ಲಿನ ಪುಟ್ಟಕಟ್ಟೆಗೆ ತೆರಳಿ ಅಗ್ನಿಪೂಜೆ ನೆರವೇರಿಸಿ, ಹೂವು-ಹೊಂಬಾಳೆ ಮುಡಿಸಿ ನಂತರ ವಿವಿಧ ಚರ್ಮವಾದ್ಯ ಮೇಳ, ಕೊಂಬು, ಕಹಳೆ, ಕತ್ತಿಗಳೊಂದಿಗೆ ಬಾಯಿಬೀಗ ಹಾಕಿಸಿಕೊಂಡ ಭಕ್ತರನ್ನು ಕರೆದುಕೊಂಡು ಬನ್ನಿಮಂಟಪಕ್ಕೆ ಗ್ರಾಮದ ಎಲ್ಲಾ ಜನರೊಂದಿಗೆ ತೆರಳಿದವು.</p>.<p>ಗ್ರಾಮದ ಬನ್ನಿಮಂಟಪದ ಬಳಿ ಪೂಜೆ ಮಗಿದ ನಂತರ ಭಕ್ತರು ಹಾಕಿಸಿಕೊಂಡ ಬಾಯಿಬೀಗ ತೆರವುಗೊಳಿಸಲಾಯಿತು. ಎಲ್ಲಾ ಜನರಿಗೆ ಹಸಕ್ಕಿ ತಂಬಿಟ್ಟು ಪ್ರಸಾದ ವಿತರಿಸಲಾಯಿತು.</p>.<p>ಮಂಟಪ ಪೂಜೆ ಮುಗಿದ ನಂತರ ಮಾರಮ್ಮದೇವಿ ರಂಗಕ್ಕೆ ಬಂದು ಎಲ್ಲಾ ದೇವರು ಮೆರವಣಿಗೆ ನಡೆಸಿದವು. ಮೆರವಣಿಗೆ ಮುಗಿದ ಮೇಲೆ ಇಡೀ ಗ್ರಾಮದ ಎಲ್ಲಾ ಬೀದಿಗಳಿಗೆ ತೆರಳಿ ಆರತಿ ಪಡೆಯಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀನಗರ:</strong> ಸಮೀಪದ ಅಣ್ಣೂರು ಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ಗ್ರಾಮ ದೇವತೆಗಳೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.</p>.<p>ಗ್ರಾಮದೇವತೆಗಳಾದ ಮಹಾಕಾಳಮ್ಮ, ಮಾರಮ್ಮ, ಅಟ್ಟಿಮಾರಮ್ಮ ಪೂಜೆಗಳು, ಸಿದ್ದೇಶ್ವರಸ್ವಾಮಿ ಸತ್ತಿಗೆ, ಈಶ್ವರ ಹಾಗೂ ತಿಮ್ಮಪ್ಪನ ವಾಹನ, ಮಹಾಕಾಳಿ ದೇವಿ ನಂದಿಕಂಭ, ಕೊರವಂಜಿ ಬುಟ್ಟಿ ಸಮೇತ ಗ್ರಾಮದಲ್ಲಿನ ಪುಟ್ಟಕಟ್ಟೆಗೆ ತೆರಳಿ ಅಗ್ನಿಪೂಜೆ ನೆರವೇರಿಸಿ, ಹೂವು-ಹೊಂಬಾಳೆ ಮುಡಿಸಿ ನಂತರ ವಿವಿಧ ಚರ್ಮವಾದ್ಯ ಮೇಳ, ಕೊಂಬು, ಕಹಳೆ, ಕತ್ತಿಗಳೊಂದಿಗೆ ಬಾಯಿಬೀಗ ಹಾಕಿಸಿಕೊಂಡ ಭಕ್ತರನ್ನು ಕರೆದುಕೊಂಡು ಬನ್ನಿಮಂಟಪಕ್ಕೆ ಗ್ರಾಮದ ಎಲ್ಲಾ ಜನರೊಂದಿಗೆ ತೆರಳಿದವು.</p>.<p>ಗ್ರಾಮದ ಬನ್ನಿಮಂಟಪದ ಬಳಿ ಪೂಜೆ ಮಗಿದ ನಂತರ ಭಕ್ತರು ಹಾಕಿಸಿಕೊಂಡ ಬಾಯಿಬೀಗ ತೆರವುಗೊಳಿಸಲಾಯಿತು. ಎಲ್ಲಾ ಜನರಿಗೆ ಹಸಕ್ಕಿ ತಂಬಿಟ್ಟು ಪ್ರಸಾದ ವಿತರಿಸಲಾಯಿತು.</p>.<p>ಮಂಟಪ ಪೂಜೆ ಮುಗಿದ ನಂತರ ಮಾರಮ್ಮದೇವಿ ರಂಗಕ್ಕೆ ಬಂದು ಎಲ್ಲಾ ದೇವರು ಮೆರವಣಿಗೆ ನಡೆಸಿದವು. ಮೆರವಣಿಗೆ ಮುಗಿದ ಮೇಲೆ ಇಡೀ ಗ್ರಾಮದ ಎಲ್ಲಾ ಬೀದಿಗಳಿಗೆ ತೆರಳಿ ಆರತಿ ಪಡೆಯಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>