ಕರ್ನಾಟಕದಲ್ಲಿ ಹುಟ್ಟಿದ್ದ ನಾರಾಯಣಗೌಡ ಮುಂಬೈಗೆ ಹೋಗಿದ್ದರು. ನಂತರ, ವಾಪಸ್ ಆಗಿ ಶಾಸಕರಾಗಿ, ಸಚಿವರಾಗಿದ್ದಾರೆ. ಕನ್ನಡ ನಾಡು, ನುಡಿ, ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳದೇ, ಮಹಾರಾಷ್ಟ್ರಕ್ಕೆ ಜೈ, ಮರಾಠಿಗರಿಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ನಾರಾಯಣಗೌಡರು ಶಾಸಕರಾಗಲು, ಸಚಿವರಾಗಲು ಅನರ್ಹರು ಎಂದು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಕುಮಾರ್ ದೂರಿದರು.