<p>ಮದ್ದೂರು: ತಾಲ್ಲೂಕಿನ ಕೆ. ಹೊನ್ನಲಗೆರೆ ಬಳಿಯ ರಾಜೇಗೌಡನದೊಡ್ಡಿ ಗ್ರಾಮದಲ್ಲಿ ಮಣ್ಣಿನಿಂದ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಆರ್.ಸಿ ನಂಜುಂಡಸ್ವಾಮಿ ಅವರು ಸುಮಾರು 17 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬರುತ್ತಿದ್ದಾರೆ.</p>.<p>ಇದಕ್ಕಾಗಿ ತಮ್ಮ ಗ್ರಾಮದ ಬಾಣಂಜಿ ಕೆರೆಯಿಂದ ಜೇಡಿ ಮಣ್ಣನ್ನು ತಂದು ಅದನ್ನು ಚೆನ್ನಾಗಿ ಹದಗೊಳಿಸಿ ವರ್ಷಕ್ಕೆ ಸುಮಾರು 150 ಗಣೇಶ ಮೂರ್ತಿಗಳನ್ನು ತಯಾರಿಸುವ ಇವರು ಅಕ್ಕಪಕ್ಕದ ಗ್ರಾಮಗಳೂ ಸೇರಿದಂತೆ ಮದ್ದೂರು ಪಟ್ಟಣದಲ್ಲಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಹೆಸರಾಗಿದ್ದಾರೆ.</p>.<p>1 ಅಡಿಯಿಂದ 4.5 ಅಡಿಗಳವರೆಗೆ ಜೇಡಿ ಮಣ್ಣಿನಿಂದ ಮೂರ್ತಿಯನ್ನು ತಯಾರು ಮಾಡುವ ನಂಜುಂಡಸ್ವಾಮಿ, ಇದಕ್ಕಾಗಿ 6-7 ತಿಂಗಳು ಪರಿಶ್ರಮ ಪಡುತ್ತಾರೆ. ಇವರ ಈ ಮೂರ್ತಿಗಳ ತಯಾರಿಕೆಗೆ ಇವರ ಪತ್ನಿ ಹಾಗೂ ಮಕ್ಕಳು ಸಹಾಯ ಮಾಡುತ್ತಾರೆ.</p>.<p>ನೂರಾರು ಮೂರ್ತಿಗಳನ್ನು ತಯಾರು ಮಾಡುವ ಇವರು ಗಣೇಶ ಚತುರ್ಥಿ ಹಬ್ಬ ಸಮೀಪಸುತ್ತಿದ್ದಂತೆಯೇ ಮದ್ದೂರು ಪಟ್ಟಣದಲ್ಲಿ ರಸ್ತೆ ಬದಿಯ ಅಂಗಡಿಯನ್ನು ಕೆಲ ದಿನಗಳು ತೆರೆದು ಮಾರಾಟ ಮಾಡುತ್ತಾರೆ. ಇವರು ತಮ್ಮ ವೃತ್ತಿಯಿಂದ ₹1ರಿಂದ 1.3 ಲಕ್ಷ ಲಾಭವನ್ನು ಪಡೆದು ತಮ್ಮ ಜೀವನಕ್ಕೆ ಈ ವೃತ್ತಿಯನ್ನು ಆಸರೆ ಮಾಡಿಕೊಂಡಿದ್ದಾರೆ.</p>.<p> <strong>17 ವರ್ಷಗಳಿಂದ ತಯಾರಿಕೆ</strong> </p><p>ಸುಮಾರು 17 ವರ್ಷಗಳಿಂದ ಪರಿಸರ ಸ್ನೇಹಿಯಾದ ಗೌರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇನೆ. ಸಾರ್ವಜನಿಕರು ಪಿಒಪಿ ಹಾಗೂ ರಾಸಾಯನಿಕ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿಯಾದ ಮಣ್ಣಿನಿಂದ ಮಾಡಿದ ಶ್ರೇಷ್ಠ ಹಾಗೂ ಮೂಲ ಪರಂಪರೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಬೇಕು – ಆರ್.ಸಿ. ನಂಜುಂಡಸ್ವಾಮಿ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಕ ರಾಜೇಗೌಡನ ದೊಡ್ಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮದ್ದೂರು: ತಾಲ್ಲೂಕಿನ ಕೆ. ಹೊನ್ನಲಗೆರೆ ಬಳಿಯ ರಾಜೇಗೌಡನದೊಡ್ಡಿ ಗ್ರಾಮದಲ್ಲಿ ಮಣ್ಣಿನಿಂದ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಆರ್.ಸಿ ನಂಜುಂಡಸ್ವಾಮಿ ಅವರು ಸುಮಾರು 17 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬರುತ್ತಿದ್ದಾರೆ.</p>.<p>ಇದಕ್ಕಾಗಿ ತಮ್ಮ ಗ್ರಾಮದ ಬಾಣಂಜಿ ಕೆರೆಯಿಂದ ಜೇಡಿ ಮಣ್ಣನ್ನು ತಂದು ಅದನ್ನು ಚೆನ್ನಾಗಿ ಹದಗೊಳಿಸಿ ವರ್ಷಕ್ಕೆ ಸುಮಾರು 150 ಗಣೇಶ ಮೂರ್ತಿಗಳನ್ನು ತಯಾರಿಸುವ ಇವರು ಅಕ್ಕಪಕ್ಕದ ಗ್ರಾಮಗಳೂ ಸೇರಿದಂತೆ ಮದ್ದೂರು ಪಟ್ಟಣದಲ್ಲಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಹೆಸರಾಗಿದ್ದಾರೆ.</p>.<p>1 ಅಡಿಯಿಂದ 4.5 ಅಡಿಗಳವರೆಗೆ ಜೇಡಿ ಮಣ್ಣಿನಿಂದ ಮೂರ್ತಿಯನ್ನು ತಯಾರು ಮಾಡುವ ನಂಜುಂಡಸ್ವಾಮಿ, ಇದಕ್ಕಾಗಿ 6-7 ತಿಂಗಳು ಪರಿಶ್ರಮ ಪಡುತ್ತಾರೆ. ಇವರ ಈ ಮೂರ್ತಿಗಳ ತಯಾರಿಕೆಗೆ ಇವರ ಪತ್ನಿ ಹಾಗೂ ಮಕ್ಕಳು ಸಹಾಯ ಮಾಡುತ್ತಾರೆ.</p>.<p>ನೂರಾರು ಮೂರ್ತಿಗಳನ್ನು ತಯಾರು ಮಾಡುವ ಇವರು ಗಣೇಶ ಚತುರ್ಥಿ ಹಬ್ಬ ಸಮೀಪಸುತ್ತಿದ್ದಂತೆಯೇ ಮದ್ದೂರು ಪಟ್ಟಣದಲ್ಲಿ ರಸ್ತೆ ಬದಿಯ ಅಂಗಡಿಯನ್ನು ಕೆಲ ದಿನಗಳು ತೆರೆದು ಮಾರಾಟ ಮಾಡುತ್ತಾರೆ. ಇವರು ತಮ್ಮ ವೃತ್ತಿಯಿಂದ ₹1ರಿಂದ 1.3 ಲಕ್ಷ ಲಾಭವನ್ನು ಪಡೆದು ತಮ್ಮ ಜೀವನಕ್ಕೆ ಈ ವೃತ್ತಿಯನ್ನು ಆಸರೆ ಮಾಡಿಕೊಂಡಿದ್ದಾರೆ.</p>.<p> <strong>17 ವರ್ಷಗಳಿಂದ ತಯಾರಿಕೆ</strong> </p><p>ಸುಮಾರು 17 ವರ್ಷಗಳಿಂದ ಪರಿಸರ ಸ್ನೇಹಿಯಾದ ಗೌರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇನೆ. ಸಾರ್ವಜನಿಕರು ಪಿಒಪಿ ಹಾಗೂ ರಾಸಾಯನಿಕ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿಯಾದ ಮಣ್ಣಿನಿಂದ ಮಾಡಿದ ಶ್ರೇಷ್ಠ ಹಾಗೂ ಮೂಲ ಪರಂಪರೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಬೇಕು – ಆರ್.ಸಿ. ನಂಜುಂಡಸ್ವಾಮಿ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಕ ರಾಜೇಗೌಡನ ದೊಡ್ಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>