<p><strong>ಪಾಂಡವಪುರ (ಮಂಡ್ಯ): </strong>ಕೆಆರ್ಎಸ್ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಬೇಬಿ ಬೆಟ್ಟದ ಸರ್ವೇ ನಂ.1ರಲ್ಲಿ ಗಣಿಗಾರಿಕೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದರೂ ಶುಕ್ರವಾರ ಸ್ಫೋಟಕಗಳು ಪತ್ತೆಯಾಗಿವೆ.</p>.<p>ಬೇಬಿಬೆಟ್ಟದಲ್ಲಿನ ಆಶೀರ್ವಾದ ಕ್ರಷರ್ ಮಾಲೀಕರಿಗೆ ಸೇರಿದ ಕ್ವಾರಿಯೊಂದರ ಸಮೀಪ ಕಂಡು ಬಂದ ಸುಮಾರು 40 ಜಿಲಿಟನ್, ಡಿಟೋನೇಟರ್ ಹಾಗೂ ಮೆಗ್ಗರ್ ಬ್ಲಾಸ್ಟ್ಗೆ ಬಳಸಲಾಗುವ ವಾಹಕ (ವೈರ್)ಗಳನ್ನು ಕುರಿಗಾಹಿಗಳು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ಕ್ವಾರಿ ಸ್ಥಳಕ್ಕೇ ಸುಮಲತಾ ಇತ್ತೀಚೆಗೆ ಭೇಟಿ ನೀಡಿದ್ದರು.</p>.<p>ಅವರ ಭೇಟಿ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ಎಸೆದಿರಬಹುದು ಅಥವಾ ಅಕ್ರಮವಾಗಿ ಗಣಿಗಾರಿಕೆ ನಡೆಸುವ ಸಲುವಾಗಿ ಬಚ್ಚಿಟ್ಟಿರಬಹುದು. ನಾಲ್ಕೈದು ದಿನಗಳಿಂದ ಮಳೆಯಲ್ಲಿ ತೊಯ್ದಿರುವ ಎಲ್ಲಾ ಸ್ಫೋಟಕಗಳು ಜೀವಂತವಾಗಿದ್ದು ದನಕುರಿ ಮೇಯಿಸುವವರು ಬೀಡಿ, ಸಿಗರೇಟು ಸೇದಿ ಎಸೆದ ಬೆಂಕಿ ತಗುಲಿದ್ದರೆ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.</p>.<p><strong>ಗಣಿ ಸ್ಫೋಟದ ಶಬ್ದ: </strong>’ಶುಕ್ರವಾರ ಸಂಜೆ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಸ್ಫೋಟದ ಶಬ್ದ ಕೇಳಿ ಬಂದಿತು’ ಎಂದು ಬೇಬಿ ಗ್ರಾಮದ ಜನರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ (ಮಂಡ್ಯ): </strong>ಕೆಆರ್ಎಸ್ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಬೇಬಿ ಬೆಟ್ಟದ ಸರ್ವೇ ನಂ.1ರಲ್ಲಿ ಗಣಿಗಾರಿಕೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದರೂ ಶುಕ್ರವಾರ ಸ್ಫೋಟಕಗಳು ಪತ್ತೆಯಾಗಿವೆ.</p>.<p>ಬೇಬಿಬೆಟ್ಟದಲ್ಲಿನ ಆಶೀರ್ವಾದ ಕ್ರಷರ್ ಮಾಲೀಕರಿಗೆ ಸೇರಿದ ಕ್ವಾರಿಯೊಂದರ ಸಮೀಪ ಕಂಡು ಬಂದ ಸುಮಾರು 40 ಜಿಲಿಟನ್, ಡಿಟೋನೇಟರ್ ಹಾಗೂ ಮೆಗ್ಗರ್ ಬ್ಲಾಸ್ಟ್ಗೆ ಬಳಸಲಾಗುವ ವಾಹಕ (ವೈರ್)ಗಳನ್ನು ಕುರಿಗಾಹಿಗಳು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ಕ್ವಾರಿ ಸ್ಥಳಕ್ಕೇ ಸುಮಲತಾ ಇತ್ತೀಚೆಗೆ ಭೇಟಿ ನೀಡಿದ್ದರು.</p>.<p>ಅವರ ಭೇಟಿ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ಎಸೆದಿರಬಹುದು ಅಥವಾ ಅಕ್ರಮವಾಗಿ ಗಣಿಗಾರಿಕೆ ನಡೆಸುವ ಸಲುವಾಗಿ ಬಚ್ಚಿಟ್ಟಿರಬಹುದು. ನಾಲ್ಕೈದು ದಿನಗಳಿಂದ ಮಳೆಯಲ್ಲಿ ತೊಯ್ದಿರುವ ಎಲ್ಲಾ ಸ್ಫೋಟಕಗಳು ಜೀವಂತವಾಗಿದ್ದು ದನಕುರಿ ಮೇಯಿಸುವವರು ಬೀಡಿ, ಸಿಗರೇಟು ಸೇದಿ ಎಸೆದ ಬೆಂಕಿ ತಗುಲಿದ್ದರೆ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.</p>.<p><strong>ಗಣಿ ಸ್ಫೋಟದ ಶಬ್ದ: </strong>’ಶುಕ್ರವಾರ ಸಂಜೆ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಸ್ಫೋಟದ ಶಬ್ದ ಕೇಳಿ ಬಂದಿತು’ ಎಂದು ಬೇಬಿ ಗ್ರಾಮದ ಜನರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>