<p><strong>ಮೇಲುಕೋಟೆ: </strong>ಇಲ್ಲಿಯ ಯದುಗಿರಿ ಬೆಟ್ಟದಲ್ಲಿ ಮುಂಜಾನೆ ಮಂಜಿನ ನರ್ತನದ ದೃಶ್ಯವೈಭವ ನೋಡುಗರ ಕಣ್ಣಿಗೆ ಕಟ್ಟುತ್ತಿದೆ. ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಪಟ್ಟಣದ ರಸ್ತೆಗಳ ಮೇಲೂ ಮಂಜು ಚಾಚಿಕೊಳ್ಳುತ್ತಿದ್ದು, ಚುಮುಚುಮು ಚಳಿ ಕಚಗುಳಿ ನೀಡುತ್ತಿದೆ.</p>.<p>ಪ್ರತಿದಿನ ಹತ್ತು ಅಡಿ ದೂರದ ವಸ್ತುವೂ ಕಾಣದಂತೆ ಮಂಜು ಮುಸುಕುತ್ತದೆ. ಇನ್ನು ಸಂಜೆಯಾಗುತ್ತಿದ್ದಂತೆ ಮಲೆನಾಡಿನಂತೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಗುರುವಾರ ಮುಂಜಾನೆ 6ರಿಂದ 9-30 ಗಂಟೆಯವರೆಗೂ ಮಂಜು ಹಾಗೆಯೇ ಇತ್ತು.</p>.<p>ಸಾಮಾನ್ಯವಾಗಿ ನವೆಂಬರ್ ಅಂತ್ಯ, ಡಿಸೆಂಬರ್, ಜನವರಿ ತಿಂಗಳಲ್ಲಿ ಆರಂಭವಾಗುತ್ತಿದ್ದ ಚಳಿ ಈ ವರ್ಷ ಅಕ್ಟೋಬರ್ನಲ್ಲೇ ಆರಂಭವಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ, ನರಸಿಂಹಸ್ವಾಮಿ ಬೆಟ್ಟದ ಮಧ್ಯೆ ಮಂಜಿನಾಟ ನೋಡುವುದೇ ವಿಶಿಷ್ಟ ಅನುಭವ.</p>.<p>ಭಕ್ತರಿಗಂತೂ ಈ ದೃಶ್ಯಗಳು ನಯನಮನೋಹರವಾಗಿದೆ. ಬೆಳಗಿನ ವಾಕಿಂಗ್ ಮಾಡುವವರು, ಹಾಲು, ತರಕಾರಿ, ಮಾರುವರರು, ಪತ್ರಿಕಾ ವಿತರಕರು, ದೇವಾಲಯದ ಕೈಂಕರ್ಯಪರರು ಬೆಳ್ಳಂಬೆಳಿಗ್ಗೆ ವಿಶಿಷ್ಟ ಅನುಭವ ಪಡೆಯುತ್ತಿದ್ದಾರೆ.</p>.<p>ಮಂಡ್ಯ ಜಿಲ್ಲೆಯಲ್ಲೇ ಮೇಲುಕೋಟೆಯಲ್ಲಿ ಅತೀ ಹೆಚ್ಚು ಚಳಿ ದಾಖಲಾಗುತ್ತದೆ. ಚಳಿಯ ತೀವ್ರತೆ ಗರಿಷ್ಠ 21 ರಿಂದ ಕನಿಷ್ಠ 18 ಡಿಗ್ರಿಯವರೆಗೂ ತಲುಪುತ್ತದೆ. ಇದಕ್ಕಿಂತಲೂ ಕಡಿಮೆಯಾದ ನಿದರ್ಶನವೂ ಇದೆ. ಧನುರ್ಮಾಸದ ಪೂಜೆಗೆ ಬರುವ ಭಕ್ತರಿಗೆ ಭಕ್ತಿಯ ನಡುವೆ ಚಳಿ ಏನೂ ಇಲ್ಲ ಎನಿಸುತ್ತದೆ.</p>.<p>‘ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆ, ಕಟ್ಟೆ ಕೊಳ ಮತ್ತು ಕಲ್ಯಾಣಿಯಲ್ಲಿ ಹೆಚ್ಚಿನ ನೀರು ತುಂಬಿದೆ. ತೊಟ್ಟಲಮಡು ಸಹ ತುಂಬಿ ಹರಿಯುತ್ತಿದೆ. ಇದು ಭಕ್ತರಿಗೆ ಉಲ್ಲಾಸ ನೀಡುತ್ತಿದೆ’ ಎಂದು ಪಟ್ಟಣದ ನಾಗರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ: </strong>ಇಲ್ಲಿಯ ಯದುಗಿರಿ ಬೆಟ್ಟದಲ್ಲಿ ಮುಂಜಾನೆ ಮಂಜಿನ ನರ್ತನದ ದೃಶ್ಯವೈಭವ ನೋಡುಗರ ಕಣ್ಣಿಗೆ ಕಟ್ಟುತ್ತಿದೆ. ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಪಟ್ಟಣದ ರಸ್ತೆಗಳ ಮೇಲೂ ಮಂಜು ಚಾಚಿಕೊಳ್ಳುತ್ತಿದ್ದು, ಚುಮುಚುಮು ಚಳಿ ಕಚಗುಳಿ ನೀಡುತ್ತಿದೆ.</p>.<p>ಪ್ರತಿದಿನ ಹತ್ತು ಅಡಿ ದೂರದ ವಸ್ತುವೂ ಕಾಣದಂತೆ ಮಂಜು ಮುಸುಕುತ್ತದೆ. ಇನ್ನು ಸಂಜೆಯಾಗುತ್ತಿದ್ದಂತೆ ಮಲೆನಾಡಿನಂತೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಗುರುವಾರ ಮುಂಜಾನೆ 6ರಿಂದ 9-30 ಗಂಟೆಯವರೆಗೂ ಮಂಜು ಹಾಗೆಯೇ ಇತ್ತು.</p>.<p>ಸಾಮಾನ್ಯವಾಗಿ ನವೆಂಬರ್ ಅಂತ್ಯ, ಡಿಸೆಂಬರ್, ಜನವರಿ ತಿಂಗಳಲ್ಲಿ ಆರಂಭವಾಗುತ್ತಿದ್ದ ಚಳಿ ಈ ವರ್ಷ ಅಕ್ಟೋಬರ್ನಲ್ಲೇ ಆರಂಭವಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ರಾಜಗೋಪುರ, ನರಸಿಂಹಸ್ವಾಮಿ ಬೆಟ್ಟದ ಮಧ್ಯೆ ಮಂಜಿನಾಟ ನೋಡುವುದೇ ವಿಶಿಷ್ಟ ಅನುಭವ.</p>.<p>ಭಕ್ತರಿಗಂತೂ ಈ ದೃಶ್ಯಗಳು ನಯನಮನೋಹರವಾಗಿದೆ. ಬೆಳಗಿನ ವಾಕಿಂಗ್ ಮಾಡುವವರು, ಹಾಲು, ತರಕಾರಿ, ಮಾರುವರರು, ಪತ್ರಿಕಾ ವಿತರಕರು, ದೇವಾಲಯದ ಕೈಂಕರ್ಯಪರರು ಬೆಳ್ಳಂಬೆಳಿಗ್ಗೆ ವಿಶಿಷ್ಟ ಅನುಭವ ಪಡೆಯುತ್ತಿದ್ದಾರೆ.</p>.<p>ಮಂಡ್ಯ ಜಿಲ್ಲೆಯಲ್ಲೇ ಮೇಲುಕೋಟೆಯಲ್ಲಿ ಅತೀ ಹೆಚ್ಚು ಚಳಿ ದಾಖಲಾಗುತ್ತದೆ. ಚಳಿಯ ತೀವ್ರತೆ ಗರಿಷ್ಠ 21 ರಿಂದ ಕನಿಷ್ಠ 18 ಡಿಗ್ರಿಯವರೆಗೂ ತಲುಪುತ್ತದೆ. ಇದಕ್ಕಿಂತಲೂ ಕಡಿಮೆಯಾದ ನಿದರ್ಶನವೂ ಇದೆ. ಧನುರ್ಮಾಸದ ಪೂಜೆಗೆ ಬರುವ ಭಕ್ತರಿಗೆ ಭಕ್ತಿಯ ನಡುವೆ ಚಳಿ ಏನೂ ಇಲ್ಲ ಎನಿಸುತ್ತದೆ.</p>.<p>‘ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆ, ಕಟ್ಟೆ ಕೊಳ ಮತ್ತು ಕಲ್ಯಾಣಿಯಲ್ಲಿ ಹೆಚ್ಚಿನ ನೀರು ತುಂಬಿದೆ. ತೊಟ್ಟಲಮಡು ಸಹ ತುಂಬಿ ಹರಿಯುತ್ತಿದೆ. ಇದು ಭಕ್ತರಿಗೆ ಉಲ್ಲಾಸ ನೀಡುತ್ತಿದೆ’ ಎಂದು ಪಟ್ಟಣದ ನಾಗರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>