ಕಟ್ಟಡ ನಿರ್ಮಾಣ, ಹೋಟೆಲ್ ಇತರ ಕಡೆ ಕೆಲಸ ಮಾಡಿ ಹೊಟ್ಟೆ ತುಂಬ ಉನ್ನುತ್ತಿದ್ದ ಜೀವಗಳಿಗೆ ನೂರಿನ್ನೂರು ಗ್ರಾಂ ಲೆಕ್ಕದಲ್ಲಿ ಕೊಡುತ್ತಿರುವ ಅನ್ನ ಸಾಲುತ್ತಿಲ್ಲ. ಹಾಲುಣ್ಣುವ ಮಕ್ಕಳಿಗೆ ಕೊಡುವಂತೆ ಎರಡು ತುತ್ತು ಅನ್ನವನ್ನು ಪೊಟ್ಟಣಕ್ಕೆ ಹಾಕಿ ಕೊಡುತ್ತಿದ್ದಾರೆ. ಇಲ್ಲಿ ಕೊಡುವ ಮುಷ್ಠಿಯಷ್ಟು ಅನ್ನಕ್ಕೂ ಬೇಕಾ ಬಿಟ್ಟಿ ಉಪ್ಪು, ಖಾರ ಹಾಕಲಾಗುತ್ತಿದೆ. ಮೂರೂ ಹೊತ್ತು ಬಾತ್ ಹೆಸರಿನಲ್ಲಿ ಅನ್ನ ಕೊಡುತ್ತಿದ್ದು, ತಿನ್ನಲು ಆಗುತ್ತಿಲ್ಲ ಎಂದು ನಿರಾಶ್ರಿತರು ದೂರಿದ್ದಾರೆ.