<p><strong>ಮಂಡ್ಯ:</strong> ತಾಲ್ಲೂಕಿನ ಹಲ್ಲೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎನ್.ಕೃಷ್ಣ (53) ಅವರು ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡರು.</p><p>ಪಂಚಾಯಿತಿ ಮಾಜಿ ಸದಸ್ಯೆ ಪುಟ್ಟಮಣಿ ಹಾಗೂ ವನಜಾಕ್ಷಿ, ಚಂದ್ರಶೇಖರ್, ಮುರಳಿ ಎಂಬುವರು ಪೊಲೀಸರಿಗೆ ಸುಳ್ಳು ದೂರು ನೀಡಿ, ಕಿರುಕುಳ ಕೊಟ್ಟಿರುವುದೇ ಆತ್ಮಹತ್ಯೆಗೆ ಕಾರಣ’ ಎಂದು ಮೃತರ ಪತ್ನಿ ಎಂ.ಎಸ್. ಶೋಭಾ ದೂರು ನೀಡಿದ್ದು, ಕೆರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p><p>‘ಸಂಬಂಧಿಕರ ಆಸ್ತಿ ವಿಚಾರದಲ್ಲಿ ಪಂಚಾಯ್ತಿಯಲ್ಲಿ ನನ್ನ ಪರವಾಗಿ ಸಹಕರಿಸದೇ ಎದುರುದಾರರ ಪರ ಸಹಕರಿಸಿದ್ದಾರೆ’ ಎಂದು ಪುಟ್ಟಮಣಿ ಅವರು ಕೃಷ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದಾರೆ.</p><p>‘ಡಿ.29ರಂದು ರಾತ್ರಿ ಕೃಷ್ಣ ಅವರು ಮನೆಯ ಬಾಗಿಲು ಬಡಿದರೆಂದು ಆರೋಪಿಸಿ, ಪುಟ್ಟಮಣಿ ಅವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ಅವಮಾನಿಸಿದ್ದರು’ ಎಂದೂ ದೂರಿದ್ದಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ತಾಲ್ಲೂಕಿನ ಹಲ್ಲೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎನ್.ಕೃಷ್ಣ (53) ಅವರು ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡರು.</p><p>ಪಂಚಾಯಿತಿ ಮಾಜಿ ಸದಸ್ಯೆ ಪುಟ್ಟಮಣಿ ಹಾಗೂ ವನಜಾಕ್ಷಿ, ಚಂದ್ರಶೇಖರ್, ಮುರಳಿ ಎಂಬುವರು ಪೊಲೀಸರಿಗೆ ಸುಳ್ಳು ದೂರು ನೀಡಿ, ಕಿರುಕುಳ ಕೊಟ್ಟಿರುವುದೇ ಆತ್ಮಹತ್ಯೆಗೆ ಕಾರಣ’ ಎಂದು ಮೃತರ ಪತ್ನಿ ಎಂ.ಎಸ್. ಶೋಭಾ ದೂರು ನೀಡಿದ್ದು, ಕೆರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p><p>‘ಸಂಬಂಧಿಕರ ಆಸ್ತಿ ವಿಚಾರದಲ್ಲಿ ಪಂಚಾಯ್ತಿಯಲ್ಲಿ ನನ್ನ ಪರವಾಗಿ ಸಹಕರಿಸದೇ ಎದುರುದಾರರ ಪರ ಸಹಕರಿಸಿದ್ದಾರೆ’ ಎಂದು ಪುಟ್ಟಮಣಿ ಅವರು ಕೃಷ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದಾರೆ.</p><p>‘ಡಿ.29ರಂದು ರಾತ್ರಿ ಕೃಷ್ಣ ಅವರು ಮನೆಯ ಬಾಗಿಲು ಬಡಿದರೆಂದು ಆರೋಪಿಸಿ, ಪುಟ್ಟಮಣಿ ಅವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ಅವಮಾನಿಸಿದ್ದರು’ ಎಂದೂ ದೂರಿದ್ದಾರೆ.<br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>