<p><strong>ಮಂಡ್ಯ</strong>: ಸಕ್ಕರೆ ಜಿಲ್ಲೆಯ ಗೌರವದ ಪ್ರತೀಕವಾಗಿದ್ದ ನಗರದ ರೈತಸಭಾಂಗಣದ ಪುನಶ್ಚೇತನ ಕಾರ್ಯ ನನೆಗುದಿಗೆ ಬಿದ್ದಿದ್ದು ಸಂಘಟನೆಗಳ ಮುಖಂಡರು, ಕಲಾವಿದರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಮಂಡ್ಯ ನಿರ್ಮಾಪಕ ಎಂದೇ ಪ್ರಸಿದ್ಧಿ ಪಡೆದಿರುವ ಕೆ.ವಿ.ಶಂಕರಗೌಡರ ಕನಸಿನ ಕೂಸಾಗಿರುವ ರೈತ ಸಭಾಂಗಣ ಹಲವು ದಶಕಗಳ ಕಾಲ ರಾಜ್ಯದ ಪ್ರಮುಖ ಹಾಗೂ ಸುಂದರ ಸಭಾಂಗಣಗಳಲ್ಲಿ ಒಂದಾಗಿತ್ತು. ಕುವೆಂಪು ಅವರ ಮಂತ್ರಮಾಂಗಲ್ಯ ಸೇರಿದಂತೆ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಭಾಂಗಣ ಹೆಸರುವಾಸಿಯಾಗಿತ್ತು.</p>.<p>ಏಷ್ಯಾ ಖಂಡದಲ್ಲೇ ಅತೀ ದೊಡ್ಡ ರೈತರ ಸೊಸೈಟಿ ಎಂಬ ಹೆಸರು ಗಳಿಸಿದ್ದ ಆರ್ಎಪಿಸಿಎಂಎಸ್ ( ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ಹಾಗೂ ರೈತ ಸಭಾಂಗಣ ಜಿಲ್ಲೆಯ ಕಳಶಪ್ರಾಯದಂತಿದ್ದವು. ಆದರೀಗ ಆರ್ಎಪಿಸಿಎಂಎಸ್ ಹಾಗೂ ರೈತ ಸಭಾಂಗಣ ಎರಡೂ ಪಾಳು ಕೊಂಪೆಯಾಗಿದ್ದು ಐತಿಹಾಸಿಕ ಪರಂಪರೆ ಮಾಸಿ ಹೋಗಿದೆ.</p>.<p>ಆರ್ಎಪಿಸಿಎಂಎಸ್ ಗೋದಾಮುಗಳು ಖಾಸಗಿಯವರ ಪಾಲಾಗಿದ್ದು ರೈತರ ತಾಣವಾಗಿದ್ದ ಸೊಸೈಟಿ ಈಗ ರೈತರ ಸೇವೆಯಿಂದ ವಿಮುಖಗೊಂಡಿದೆ. ಮುರಿದ ಕುರ್ಚಿ, ಒಡೆದ ಕಿಟಕಿ, ಹರಿದ ಪರದೆ, ಬಣ್ಣಕಳೆದುಕೊಂಡ ವೇದಿಕೆ, ಚೆಲ್ಲಾಡುತ್ತಿರುವ ಕಸದಿಂದಾಗಿ ರೈತ ಸಭಾಂಗಣ ಅವ್ಯವಸ್ಥೆಯ ಆಗರವಾಗಿದೆ.</p>.<p>‘ದೇಶ, ವಿದೇಶಗಳಿಂದ ಬರುತ್ತಿದ್ದ ಗಣ್ಯ ವ್ಯಕ್ತಿಗಳು ರೈತ ಸಭಾಂಗಣದ ಸುಂದರ ವಿನ್ಯಾಸವನ್ನು ಮೆಚ್ಚಿಕೊಂಡಿದ್ದರು. ಮಂಡ್ಯ ಎಂದರೆ ರೈತ ಸಭಾಂಗಣದ ಎನ್ನುವ ಮಾತಿತ್ತು. ಆದರೆ ಈಗ ಆರ್ಎಪಿಸಿಎಂಎಸ್ ಆಡಳಿತ ಮಂಡಳಿಯ ನಿಲಕ್ಷ್ಯದಿಂದಾಗಿ ರೈತಸಭಾಂಗಣ ಭೂತಬಂಗಲೆಯಾಗಿದೆ’ ಎಂದು ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.</p>.<p>ಇದ್ದೂ ಇಲ್ಲದಂತಿರು ಆಡಳಿತ ಮಂಡಳಿ: ನೂತನ ಆಡಳಿತ ಮಂಡಳಿ ರಚನೆಯಾಗಿ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿವೆ. ಆದರೂ ಈವರೆಗೂ ರೈತಸಭಾಂಗಣಕ್ಕೆ ಕಾಯಕಲ್ಪ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>‘ಆಡಳಿತ ಮಂಡಳಿ ಆರ್ಎಪಿಸಿಎಂಎಸ್ ಮಳಿಗೆಗಳ ಬಾಡಿಗೆ ವಸೂಲಿಗಷ್ಟೇ ಸೀಮಿತವಾಗಿದೆ. ರೈತರ ಸೊಸೈಟಿಯ ಮಳಿಗೆಗಳನ್ನು ಚಿನ್ನದ ಅಂಗಡಿ, ಐಷಾರಾಮಿ ಹೋಟೆಲ್, ಶೋರೂಂಗಳಿಗೆ ಬಾಡಿಗೆ ನೀಡಲಾಗಿದೆ. ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿಯಾಗುತ್ತಿದ್ದು ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಒಂದೆಡೆ ರೈತ ಸಭಾಂಗಣವೂ ಪಾಳು ಬಿದ್ದಿದೆ, ಸಂಘದ ಚಟುಟಿಕೆಗಳೂ ರೈತ ಪರವಾಗಿಲ್ಲ’ ಎಂದು ಸಂಘಟನೆಯೊಂದರ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದರು.</p>.<p>ರೈತಸಭಾಂಗಣ ನವೀಕರಣಕ್ಕೆ ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆರ್ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಅವರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಭಾಂಗಣದ ಪುನಶ್ಚೇತನದ ಭರವಸೆ ನೀಡಿದ್ದರು.</p>.<p>‘ರೈತ ಸಭಾಂಗಣ ನವೀಕರಣಕ್ಕೆ ₹ 61.50 ಲಕ್ಷ ವೆಚ್ಚ ಮಾಡಲಾಗುವುದು. ಸದ್ಯ ₹ 17 ಲಕ್ಷ ಅನುದಾನ ಲಭ್ಯವಿದ್ದು, ಉಳಿದ ಅನುದಾನವನ್ನು ಕ್ರೋಡೀಕರಣ ಮಾಡಲಾಗುವುದು’ ಎಂದು ಭರವಸೆ ನೀಡಿದ್ದರು. ಇದಾಗಿ ವರ್ಷ ಕಳೆದಿದ್ದರೂ ರೈತಸಭಾಂಗಣ ಸ್ಥಿತಿ ಬದಲಾಗಿಲ್ಲ.</p>.<p>‘ಸಭಾಂಗಣದ ಮುಂದಿರುವ ಕುವೆಂಪು ಪ್ರತಿಮೆಯ ಬಣ್ಣವೂ ಮಾಸಿ ಹೋಗಿದೆ, ಮುಖದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸಭಾಂಗಣದ ಜೊತೆಗೆ ಪ್ರತಿಮೆಗೂ ಹೊಸ ರೂಪ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜು ಒತ್ತಾಯಿಸಿದರು.</p>.<p><strong>ಸಂಬಳಕ್ಕೂ ಸಾಲಲ್ಲ ಬಾಡಿಗೆ..</strong></p><p>‘ರೈತಸಭಾಂಗಣ ಪುನಶ್ಚೇತನಕ್ಕೆ ₹ 65 ಲಕ್ಷದ ಅವಶ್ಯಕತೆ ಇದೆ. ನಮ್ಮ ಕೈಯಲ್ಲಿ ಈಗ ₹ 20 ಲಕ್ಷವಿದ್ದು ಇನ್ನೂ ₹ 45 ಲಕ್ಷ ಬೇಕಾಗಿದೆ. ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ಧನ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ’ ಎಂದು ಆರ್ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಹೇಳಿದರು. ‘ಸೊಸೈಟಿಯ ಮಳಿಗೆಗಳಿಂದ ಕೇವಲ ₹ 12 ಲಕ್ಷ ಬಾಡಿಗೆ ಸಂಗ್ರಹವಾಗುತ್ತದೆ ₹ 14 ಲಕ್ಷ ವೇತನವನ್ನೇ ನೀಡಬೇಕು. ಜೊತೆಗೆ ₹ 3.5 ಕೋಟಿ ಸಾಲವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಸೊಸೈಟಿಯನ್ನು ಮುನ್ನೆಡೆಸಲು ಸರ್ಕಾರದ ಸಹಾಯ ಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಸಕ್ಕರೆ ಜಿಲ್ಲೆಯ ಗೌರವದ ಪ್ರತೀಕವಾಗಿದ್ದ ನಗರದ ರೈತಸಭಾಂಗಣದ ಪುನಶ್ಚೇತನ ಕಾರ್ಯ ನನೆಗುದಿಗೆ ಬಿದ್ದಿದ್ದು ಸಂಘಟನೆಗಳ ಮುಖಂಡರು, ಕಲಾವಿದರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಮಂಡ್ಯ ನಿರ್ಮಾಪಕ ಎಂದೇ ಪ್ರಸಿದ್ಧಿ ಪಡೆದಿರುವ ಕೆ.ವಿ.ಶಂಕರಗೌಡರ ಕನಸಿನ ಕೂಸಾಗಿರುವ ರೈತ ಸಭಾಂಗಣ ಹಲವು ದಶಕಗಳ ಕಾಲ ರಾಜ್ಯದ ಪ್ರಮುಖ ಹಾಗೂ ಸುಂದರ ಸಭಾಂಗಣಗಳಲ್ಲಿ ಒಂದಾಗಿತ್ತು. ಕುವೆಂಪು ಅವರ ಮಂತ್ರಮಾಂಗಲ್ಯ ಸೇರಿದಂತೆ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಭಾಂಗಣ ಹೆಸರುವಾಸಿಯಾಗಿತ್ತು.</p>.<p>ಏಷ್ಯಾ ಖಂಡದಲ್ಲೇ ಅತೀ ದೊಡ್ಡ ರೈತರ ಸೊಸೈಟಿ ಎಂಬ ಹೆಸರು ಗಳಿಸಿದ್ದ ಆರ್ಎಪಿಸಿಎಂಎಸ್ ( ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ಹಾಗೂ ರೈತ ಸಭಾಂಗಣ ಜಿಲ್ಲೆಯ ಕಳಶಪ್ರಾಯದಂತಿದ್ದವು. ಆದರೀಗ ಆರ್ಎಪಿಸಿಎಂಎಸ್ ಹಾಗೂ ರೈತ ಸಭಾಂಗಣ ಎರಡೂ ಪಾಳು ಕೊಂಪೆಯಾಗಿದ್ದು ಐತಿಹಾಸಿಕ ಪರಂಪರೆ ಮಾಸಿ ಹೋಗಿದೆ.</p>.<p>ಆರ್ಎಪಿಸಿಎಂಎಸ್ ಗೋದಾಮುಗಳು ಖಾಸಗಿಯವರ ಪಾಲಾಗಿದ್ದು ರೈತರ ತಾಣವಾಗಿದ್ದ ಸೊಸೈಟಿ ಈಗ ರೈತರ ಸೇವೆಯಿಂದ ವಿಮುಖಗೊಂಡಿದೆ. ಮುರಿದ ಕುರ್ಚಿ, ಒಡೆದ ಕಿಟಕಿ, ಹರಿದ ಪರದೆ, ಬಣ್ಣಕಳೆದುಕೊಂಡ ವೇದಿಕೆ, ಚೆಲ್ಲಾಡುತ್ತಿರುವ ಕಸದಿಂದಾಗಿ ರೈತ ಸಭಾಂಗಣ ಅವ್ಯವಸ್ಥೆಯ ಆಗರವಾಗಿದೆ.</p>.<p>‘ದೇಶ, ವಿದೇಶಗಳಿಂದ ಬರುತ್ತಿದ್ದ ಗಣ್ಯ ವ್ಯಕ್ತಿಗಳು ರೈತ ಸಭಾಂಗಣದ ಸುಂದರ ವಿನ್ಯಾಸವನ್ನು ಮೆಚ್ಚಿಕೊಂಡಿದ್ದರು. ಮಂಡ್ಯ ಎಂದರೆ ರೈತ ಸಭಾಂಗಣದ ಎನ್ನುವ ಮಾತಿತ್ತು. ಆದರೆ ಈಗ ಆರ್ಎಪಿಸಿಎಂಎಸ್ ಆಡಳಿತ ಮಂಡಳಿಯ ನಿಲಕ್ಷ್ಯದಿಂದಾಗಿ ರೈತಸಭಾಂಗಣ ಭೂತಬಂಗಲೆಯಾಗಿದೆ’ ಎಂದು ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.</p>.<p>ಇದ್ದೂ ಇಲ್ಲದಂತಿರು ಆಡಳಿತ ಮಂಡಳಿ: ನೂತನ ಆಡಳಿತ ಮಂಡಳಿ ರಚನೆಯಾಗಿ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು 2 ವರ್ಷಗಳಾಗಿವೆ. ಆದರೂ ಈವರೆಗೂ ರೈತಸಭಾಂಗಣಕ್ಕೆ ಕಾಯಕಲ್ಪ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>‘ಆಡಳಿತ ಮಂಡಳಿ ಆರ್ಎಪಿಸಿಎಂಎಸ್ ಮಳಿಗೆಗಳ ಬಾಡಿಗೆ ವಸೂಲಿಗಷ್ಟೇ ಸೀಮಿತವಾಗಿದೆ. ರೈತರ ಸೊಸೈಟಿಯ ಮಳಿಗೆಗಳನ್ನು ಚಿನ್ನದ ಅಂಗಡಿ, ಐಷಾರಾಮಿ ಹೋಟೆಲ್, ಶೋರೂಂಗಳಿಗೆ ಬಾಡಿಗೆ ನೀಡಲಾಗಿದೆ. ಲಕ್ಷಾಂತರ ರೂಪಾಯಿ ಬಾಡಿಗೆ ವಸೂಲಿಯಾಗುತ್ತಿದ್ದು ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಒಂದೆಡೆ ರೈತ ಸಭಾಂಗಣವೂ ಪಾಳು ಬಿದ್ದಿದೆ, ಸಂಘದ ಚಟುಟಿಕೆಗಳೂ ರೈತ ಪರವಾಗಿಲ್ಲ’ ಎಂದು ಸಂಘಟನೆಯೊಂದರ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದರು.</p>.<p>ರೈತಸಭಾಂಗಣ ನವೀಕರಣಕ್ಕೆ ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆರ್ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಅವರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಭಾಂಗಣದ ಪುನಶ್ಚೇತನದ ಭರವಸೆ ನೀಡಿದ್ದರು.</p>.<p>‘ರೈತ ಸಭಾಂಗಣ ನವೀಕರಣಕ್ಕೆ ₹ 61.50 ಲಕ್ಷ ವೆಚ್ಚ ಮಾಡಲಾಗುವುದು. ಸದ್ಯ ₹ 17 ಲಕ್ಷ ಅನುದಾನ ಲಭ್ಯವಿದ್ದು, ಉಳಿದ ಅನುದಾನವನ್ನು ಕ್ರೋಡೀಕರಣ ಮಾಡಲಾಗುವುದು’ ಎಂದು ಭರವಸೆ ನೀಡಿದ್ದರು. ಇದಾಗಿ ವರ್ಷ ಕಳೆದಿದ್ದರೂ ರೈತಸಭಾಂಗಣ ಸ್ಥಿತಿ ಬದಲಾಗಿಲ್ಲ.</p>.<p>‘ಸಭಾಂಗಣದ ಮುಂದಿರುವ ಕುವೆಂಪು ಪ್ರತಿಮೆಯ ಬಣ್ಣವೂ ಮಾಸಿ ಹೋಗಿದೆ, ಮುಖದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸಭಾಂಗಣದ ಜೊತೆಗೆ ಪ್ರತಿಮೆಗೂ ಹೊಸ ರೂಪ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜು ಒತ್ತಾಯಿಸಿದರು.</p>.<p><strong>ಸಂಬಳಕ್ಕೂ ಸಾಲಲ್ಲ ಬಾಡಿಗೆ..</strong></p><p>‘ರೈತಸಭಾಂಗಣ ಪುನಶ್ಚೇತನಕ್ಕೆ ₹ 65 ಲಕ್ಷದ ಅವಶ್ಯಕತೆ ಇದೆ. ನಮ್ಮ ಕೈಯಲ್ಲಿ ಈಗ ₹ 20 ಲಕ್ಷವಿದ್ದು ಇನ್ನೂ ₹ 45 ಲಕ್ಷ ಬೇಕಾಗಿದೆ. ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಅಧಿಕಾರಿಗಳನ್ನು ಭೇಟಿಯಾಗಿ ಧನ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ’ ಎಂದು ಆರ್ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಹೇಳಿದರು. ‘ಸೊಸೈಟಿಯ ಮಳಿಗೆಗಳಿಂದ ಕೇವಲ ₹ 12 ಲಕ್ಷ ಬಾಡಿಗೆ ಸಂಗ್ರಹವಾಗುತ್ತದೆ ₹ 14 ಲಕ್ಷ ವೇತನವನ್ನೇ ನೀಡಬೇಕು. ಜೊತೆಗೆ ₹ 3.5 ಕೋಟಿ ಸಾಲವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಸೊಸೈಟಿಯನ್ನು ಮುನ್ನೆಡೆಸಲು ಸರ್ಕಾರದ ಸಹಾಯ ಬೇಕಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>