‘ಸ್ತಂಭಕ್ಕೆ ರಾಷ್ಟ್ರಧ್ವಜ ಸರಿಯಾಗಿ ಅಳವಡಿಕೆಯಾಗಿಲ್ಲ, ಕೊಂಚ ಕೆಳಗೆ ಇಳಿದಂತೆ ಹಾರುತ್ತಿದೆ, ಧ್ವಜ ಹಳೆಯದಾಗಿದೆ’ ಎಂದು ಆರೋಪಿಸಿ ಕೆಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದರಿಂದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ತಹಶೀಲ್ದಾರ್ ಶಿವಕುಮಾರ್ ಬಿರಾದರ, ಎಎಸ್ಪಿ ತಿಮ್ಮಯ್ಯ ನೇತೃತ್ವದಲ್ಲಿ ಹಳೆಯ ಧ್ವಜ ತೆಗೆದು ಹೊಸ ಧ್ವಜ ಆರೋಹಣ ಮಾಡಲಾಯಿತು.