ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯ ದಕ್ಷಿಣ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಣ್ಣನ್ನು ತೆಗೆಯಲಾಗುತ್ತಿದೆ. ಮಣ್ಣು ತೆಗೆಯುತ್ತಿರುವವರು 10ರಿಂದ 12 ಅಡಿ ಆಳದ ಗುಂಡಿಗಳನ್ನು ತೋಡುತ್ತಿದ್ದಾರೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬಟ್ಟೆ ತೊಳೆಯಲು, ದನ, ಕರುಗಳನ್ನು ತೊಳೆಯಲು ಅಥವಾ ನೀರು ಕುಡಿಸಲು ಕೆರೆಗೆ ಇಳಿದರೆ ಮುಳುಗುವ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.