<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ಕರ್ನಾಟಕದ ಬಾಲಕಿಯರ ತಂಡವು ಇಲ್ಲಿನ ಆದಿಚುಂಚನಗಿರಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 19 ವರ್ಷದೊಳಗಿನ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು. ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ 34-20ರಿಂದ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿದರು.</p>.<p>ಮತ್ತೊಂದು ಪಂದ್ಯದಲ್ಲಿ ಛತ್ತೀಸ್ಗಡ ತಂಡ 34-33ರಿಂದ ಹಿಮಾಚಲ ಪ್ರದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದರೆ, ರಾಜಸ್ಥಾನ ತಂಡವು 33-23 ಅಂತರದಲ್ಲಿ ದೆಹಲಿ ವಿರುದ್ಧ, ಹರಿಯಾಣ ತಂಡವು 43-20 ಅಂತರದಲ್ಲಿ ತಮಿಳುನಾಡು ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.</p>.<p>ಬಾಲಕರ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದೆಹಲಿ ತಂಡವು 41-28 ಅಂತರದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ, ವಿದ್ಯಾಭಾರತಿ ತಂಡವು 40-25 ಅಂತರದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಗೆಲುವು ಪಡೆಯಿತು.</p>.<p>ಹರಿಯಾಣ ತಂಡವು 53-31 ಅಂತರದಲ್ಲಿ ಕರ್ನಾಟಕದ ವಿರುದ್ಧ, ರಾಜಸ್ಥಾನ ತಂಡವು 40-27 ಅಂತರದಲ್ಲಿ ಸಿ.ಬಿ.ಎಸ್.ಇ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ (ಮಂಡ್ಯ ಜಿಲ್ಲೆ):</strong> ಕರ್ನಾಟಕದ ಬಾಲಕಿಯರ ತಂಡವು ಇಲ್ಲಿನ ಆದಿಚುಂಚನಗಿರಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 19 ವರ್ಷದೊಳಗಿನ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದರು. ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ 34-20ರಿಂದ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿದರು.</p>.<p>ಮತ್ತೊಂದು ಪಂದ್ಯದಲ್ಲಿ ಛತ್ತೀಸ್ಗಡ ತಂಡ 34-33ರಿಂದ ಹಿಮಾಚಲ ಪ್ರದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದರೆ, ರಾಜಸ್ಥಾನ ತಂಡವು 33-23 ಅಂತರದಲ್ಲಿ ದೆಹಲಿ ವಿರುದ್ಧ, ಹರಿಯಾಣ ತಂಡವು 43-20 ಅಂತರದಲ್ಲಿ ತಮಿಳುನಾಡು ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.</p>.<p>ಬಾಲಕರ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದೆಹಲಿ ತಂಡವು 41-28 ಅಂತರದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ, ವಿದ್ಯಾಭಾರತಿ ತಂಡವು 40-25 ಅಂತರದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಗೆಲುವು ಪಡೆಯಿತು.</p>.<p>ಹರಿಯಾಣ ತಂಡವು 53-31 ಅಂತರದಲ್ಲಿ ಕರ್ನಾಟಕದ ವಿರುದ್ಧ, ರಾಜಸ್ಥಾನ ತಂಡವು 40-27 ಅಂತರದಲ್ಲಿ ಸಿ.ಬಿ.ಎಸ್.ಇ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>