<p><strong>ಮಂಡ್ಯ:</strong> ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವನ್ನು ಮೇ 1ರಿಂದ ಎರಡು ಪಟ್ಟು ಹೆಚ್ಚಿಸಲಾಗಿದ್ದು, ಪ್ರವಾಸಿಗರಿಗೆ ದುಬಾರಿಯಾಗಿ ಪರಿಣಮಿಸಿದೆ.</p>.<p>ಕಾವೇರಿ ನೀರಾವರಿ ನಿಗಮದಿಂದ ಬೃಂದಾವನ ಪ್ರವೇಶದ್ವಾರದ ದರ, ವಾಹನ ಪಾರ್ಕಿಂಗ್ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್ ಸಂಗ್ರಹಿಸಲು ಟೆಂಡರ್ ಕರೆಯಲಾಗಿತ್ತು. ಕರ್ನಾಟಕ ಕಮರ್ಷಿಯಲ್ ಆ್ಯಂಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ (ಕೆಸಿಐಸಿ) 3 ವರ್ಷಗಳಿಗೆ ಗುತ್ತಿಗೆ ಪಡೆದಿದೆ.</p>.<p>ಆರು ವರ್ಷ ಮೇಲ್ಪಟ್ಟ ಪ್ರವಾಸಿಗರಿಗೆ ₹50ರಿಂದ ₹100, 3ರಿಂದ 6 ವರ್ಷದವರಿಗೆ ₹10ರಿಂದ ₹50ಕ್ಕೆ ಪ್ರವೇಶ ದರವನ್ನು ಹೆಚ್ಚಳ ಮಾಡಲಾಗಿದೆ. ಶಾಲಾ ಮಕ್ಕಳಿಗೆ ₹5, ಕ್ಯಾಮೆರಾಗೆ ₹100 ಶುಲ್ಕ ನಿಗದಿಪಡಿಸಲಾಗಿದೆ. </p>.<p>ದ್ವಿಚಕ್ರವಾಹನಕ್ಕೆ ₹10ರಿಂದ ₹20, ತ್ರಿಚಕ್ರವಾಹನಕ್ಕೆ ₹40ರಿಂದ ₹50, ನಾಲ್ಕುಚಕ್ರಗಳ (ಕಾರು, ಜೀಪು) ವಾಹನಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್ ಮತ್ತು ಮಿನಿ ಬಸ್ಗಳಿಗೆ ₹70ರಿಂದ ₹100 ಹಾಗೂ ಬಸ್ಗಳಿಗೆ ₹100ರಿಂದ ₹200 ಪಾರ್ಕಿಂಗ್ ದರವನ್ನು ಹೆಚ್ಚಿಸಿರುವುದಕ್ಕೆ ಪ್ರವಾಸಿಗರಾದ ಶಿವಮೊಗ್ಗದ ಕಾರ್ತಿಕ್, ಮುರಳೀಧರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಬೃಂದಾವನ ಮೇಲ್ಸೇತುವೆ ಟೋಲ್ ದರವನ್ನು ತ್ರಿಚಕ್ರ ವಾಹನಗಳಿಗೆ ₹20ರಿಂದ ₹50, ಕಾರು, ಜೀಪುಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್, ಮಿನಿ ಬಸ್ಗಳಿಗೆ ₹50ರಿಂದ ₹100, ಬಸ್ಗೆ ₹100ರಿಂದ ₹200, ಆರು ಚಕ್ರಗಳ ವಾಹನಕ್ಕೆ ₹150ರಿಂದ ₹200 ಹಾಗೂ ಹತ್ತು ಚಕ್ರಗಳ ಲಾರಿಗೆ ₹200ರಿಂದ ₹300ಕ್ಕೆ ಶುಲ್ಕವನ್ನು ಹೆಚ್ಚಿಸಿರುವುದು ಚಾಲಕರ ಬೇಸರಕ್ಕೆ ಕಾರಣವಾಗಿದೆ. </p>.<p>ವಾರ್ಷಿಕ ₹5 ಕೋಟಿ ಸಂಗ್ರಹ: ಕೆಆರ್ಎಸ್ ಅಣೆಕಟ್ಟೆ ತಳಭಾಗದಲ್ಲಿರುವ ಬೃಂದಾವನವು ವರ್ಣರಂಜಿತ ಹೂವುಗಳು, ಕಣ್ಣು ಕೋರೈಸುವ ದೀಪಾಲಂಕಾರ, ಸಂಗೀತ ಕಾರಂಜಿ, ಬೋಟಿಂಗ್ ಆಕರ್ಷಣೆಗಳನ್ನು ಒಳಗೊಂಡಿದೆ. ಈ ಸುಂದರ ಸಸ್ಯೋದ್ಯಾನವನ್ನು ಕಣ್ತುಂಬಿಕೊಳ್ಳಲು ದೇಶ–ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ ಪ್ರವೇಶ ಶುಲ್ಕದಿಂದ ಸರಾಸರಿ ₹5 ಕೋಟಿ ಮತ್ತು ವಾಹನ ಪಾರ್ಕಿಂಗ್ನಿಂದ ಸರಾಸರಿ ₹75 ಲಕ್ಷ ಸಂಗ್ರಹವಾಗುತ್ತಿದೆ. </p>.<p>2021–22ನೇ ಸಾಲಿನಲ್ಲಿ ₹2.75 ಕೋಟಿ, 2022–23ನೇ ಸಾಲಿನಲ್ಲಿ ₹3.05 ಕೋಟಿ ಹಾಗೂ 2023–24ನೇ ಸಾಲಿನಲ್ಲಿ ₹3.66 ಕೋಟಿ ವಾರ್ಷಿಕ ನಿರ್ವಹಣಾ ವೆಚ್ಚ ತಗುಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.</p>.<blockquote>ಆರು ವರ್ಷಗಳ ನಂತರ ಪರಿಷ್ಕರಣೆ 3 ವರ್ಷಗಳಿಗೆ ಗುತ್ತಿಗೆ</blockquote>.<div><blockquote>ಕೆಆರ್ಎಸ್ ಬೃಂದಾವನ ಪ್ರವೇಶ ಶುಲ್ಕವು ಆರು ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಈಗ ಹೊಸ ಟೆಂಡರ್ ಪ್ರಕಾರ ದರ ಏರಿಕೆ ಮಾಡಲಾಗಿದೆ</blockquote><span class="attribution">ಫಾರೂಕ್ ಅಹಮದ್ ಅಬು ಎಇಇ ಕಾವೇರಿ ನೀರಾವರಿ ನಿಗಮ</span></div>.<div><blockquote>ಬೃಂದಾವನ ಪ್ರವೇಶ ದರ ವಾಹನ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಿ ಪ್ರವಾಸಿಗರಿಗೆ ಬರೆ ಹಾಕಿದ್ದಾರೆ. ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ</blockquote><span class="attribution">ಎಂ.ಬಿ. ನಾಗಣ್ಣಗೌಡ ಮುಖಂಡ ಕರುನಾಡು ಸೇವಕರ ಸಂಘಟನೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವನ್ನು ಮೇ 1ರಿಂದ ಎರಡು ಪಟ್ಟು ಹೆಚ್ಚಿಸಲಾಗಿದ್ದು, ಪ್ರವಾಸಿಗರಿಗೆ ದುಬಾರಿಯಾಗಿ ಪರಿಣಮಿಸಿದೆ.</p>.<p>ಕಾವೇರಿ ನೀರಾವರಿ ನಿಗಮದಿಂದ ಬೃಂದಾವನ ಪ್ರವೇಶದ್ವಾರದ ದರ, ವಾಹನ ಪಾರ್ಕಿಂಗ್ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್ ಸಂಗ್ರಹಿಸಲು ಟೆಂಡರ್ ಕರೆಯಲಾಗಿತ್ತು. ಕರ್ನಾಟಕ ಕಮರ್ಷಿಯಲ್ ಆ್ಯಂಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ (ಕೆಸಿಐಸಿ) 3 ವರ್ಷಗಳಿಗೆ ಗುತ್ತಿಗೆ ಪಡೆದಿದೆ.</p>.<p>ಆರು ವರ್ಷ ಮೇಲ್ಪಟ್ಟ ಪ್ರವಾಸಿಗರಿಗೆ ₹50ರಿಂದ ₹100, 3ರಿಂದ 6 ವರ್ಷದವರಿಗೆ ₹10ರಿಂದ ₹50ಕ್ಕೆ ಪ್ರವೇಶ ದರವನ್ನು ಹೆಚ್ಚಳ ಮಾಡಲಾಗಿದೆ. ಶಾಲಾ ಮಕ್ಕಳಿಗೆ ₹5, ಕ್ಯಾಮೆರಾಗೆ ₹100 ಶುಲ್ಕ ನಿಗದಿಪಡಿಸಲಾಗಿದೆ. </p>.<p>ದ್ವಿಚಕ್ರವಾಹನಕ್ಕೆ ₹10ರಿಂದ ₹20, ತ್ರಿಚಕ್ರವಾಹನಕ್ಕೆ ₹40ರಿಂದ ₹50, ನಾಲ್ಕುಚಕ್ರಗಳ (ಕಾರು, ಜೀಪು) ವಾಹನಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್ ಮತ್ತು ಮಿನಿ ಬಸ್ಗಳಿಗೆ ₹70ರಿಂದ ₹100 ಹಾಗೂ ಬಸ್ಗಳಿಗೆ ₹100ರಿಂದ ₹200 ಪಾರ್ಕಿಂಗ್ ದರವನ್ನು ಹೆಚ್ಚಿಸಿರುವುದಕ್ಕೆ ಪ್ರವಾಸಿಗರಾದ ಶಿವಮೊಗ್ಗದ ಕಾರ್ತಿಕ್, ಮುರಳೀಧರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಬೃಂದಾವನ ಮೇಲ್ಸೇತುವೆ ಟೋಲ್ ದರವನ್ನು ತ್ರಿಚಕ್ರ ವಾಹನಗಳಿಗೆ ₹20ರಿಂದ ₹50, ಕಾರು, ಜೀಪುಗಳಿಗೆ ₹50ರಿಂದ ₹100, ಟೆಂಪೊ ಟ್ರಾವಲರ್, ಮಿನಿ ಬಸ್ಗಳಿಗೆ ₹50ರಿಂದ ₹100, ಬಸ್ಗೆ ₹100ರಿಂದ ₹200, ಆರು ಚಕ್ರಗಳ ವಾಹನಕ್ಕೆ ₹150ರಿಂದ ₹200 ಹಾಗೂ ಹತ್ತು ಚಕ್ರಗಳ ಲಾರಿಗೆ ₹200ರಿಂದ ₹300ಕ್ಕೆ ಶುಲ್ಕವನ್ನು ಹೆಚ್ಚಿಸಿರುವುದು ಚಾಲಕರ ಬೇಸರಕ್ಕೆ ಕಾರಣವಾಗಿದೆ. </p>.<p>ವಾರ್ಷಿಕ ₹5 ಕೋಟಿ ಸಂಗ್ರಹ: ಕೆಆರ್ಎಸ್ ಅಣೆಕಟ್ಟೆ ತಳಭಾಗದಲ್ಲಿರುವ ಬೃಂದಾವನವು ವರ್ಣರಂಜಿತ ಹೂವುಗಳು, ಕಣ್ಣು ಕೋರೈಸುವ ದೀಪಾಲಂಕಾರ, ಸಂಗೀತ ಕಾರಂಜಿ, ಬೋಟಿಂಗ್ ಆಕರ್ಷಣೆಗಳನ್ನು ಒಳಗೊಂಡಿದೆ. ಈ ಸುಂದರ ಸಸ್ಯೋದ್ಯಾನವನ್ನು ಕಣ್ತುಂಬಿಕೊಳ್ಳಲು ದೇಶ–ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ ಪ್ರವೇಶ ಶುಲ್ಕದಿಂದ ಸರಾಸರಿ ₹5 ಕೋಟಿ ಮತ್ತು ವಾಹನ ಪಾರ್ಕಿಂಗ್ನಿಂದ ಸರಾಸರಿ ₹75 ಲಕ್ಷ ಸಂಗ್ರಹವಾಗುತ್ತಿದೆ. </p>.<p>2021–22ನೇ ಸಾಲಿನಲ್ಲಿ ₹2.75 ಕೋಟಿ, 2022–23ನೇ ಸಾಲಿನಲ್ಲಿ ₹3.05 ಕೋಟಿ ಹಾಗೂ 2023–24ನೇ ಸಾಲಿನಲ್ಲಿ ₹3.66 ಕೋಟಿ ವಾರ್ಷಿಕ ನಿರ್ವಹಣಾ ವೆಚ್ಚ ತಗುಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.</p>.<blockquote>ಆರು ವರ್ಷಗಳ ನಂತರ ಪರಿಷ್ಕರಣೆ 3 ವರ್ಷಗಳಿಗೆ ಗುತ್ತಿಗೆ</blockquote>.<div><blockquote>ಕೆಆರ್ಎಸ್ ಬೃಂದಾವನ ಪ್ರವೇಶ ಶುಲ್ಕವು ಆರು ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಈಗ ಹೊಸ ಟೆಂಡರ್ ಪ್ರಕಾರ ದರ ಏರಿಕೆ ಮಾಡಲಾಗಿದೆ</blockquote><span class="attribution">ಫಾರೂಕ್ ಅಹಮದ್ ಅಬು ಎಇಇ ಕಾವೇರಿ ನೀರಾವರಿ ನಿಗಮ</span></div>.<div><blockquote>ಬೃಂದಾವನ ಪ್ರವೇಶ ದರ ವಾಹನ ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಿ ಪ್ರವಾಸಿಗರಿಗೆ ಬರೆ ಹಾಕಿದ್ದಾರೆ. ಜಿಲ್ಲಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ</blockquote><span class="attribution">ಎಂ.ಬಿ. ನಾಗಣ್ಣಗೌಡ ಮುಖಂಡ ಕರುನಾಡು ಸೇವಕರ ಸಂಘಟನೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>