‘ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಸಾಮಾನ್ಯ. ಆದರೆ ಅವರ ಮಾತುಗಳು ಮರ್ಯಾದೆಯ ಮಿತಿ ಮೀರಬಾರದು. ರಾಜಕಾರಣದಲ್ಲಿ ವಿರೋಧವಿದ್ದರೂ ವೈಯಕ್ತಿಕವಾಗಿ ವಿಶ್ವಾಸ, ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಮಗೆ ವೋಟು ಹಾಕಿ ಗೆಲ್ಲಿಸಿದ ಮತದಾರರ ಮರ್ಯಾದೆ ಕಳೆಯುವ ಮಾತುಳನ್ನಾಡಬಾರದು. ಮಾತಿಗೊಂದು ಲಕ್ಷ್ಮಣ ರೇಖೆ ಇರಬೇಕು’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಎಂ.ಎಸ್.ಆತ್ಮಾನಂದ ಹೇಳಿದರು.