ಮಂಡ್ಯ: ಕಾಂಗ್ರೆಸ್ ಪಕ್ಷ ಶನಿವಾರ ಬಿಡುಗಡೆ ಮಾಡಿರುವ 3ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಮದ್ದೂರು ಕ್ಷೇತ್ರದಿಂದ ಉದ್ಯಮಿ ಕದಲೂರು ಉದಯ್ ಸ್ಥಾನ ಪಡೆದಿದ್ದಾರೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಹೆಸರು ಮೊದಲೇ ಘೋಷಣೆ ಮಾಡಲಾಗುತ್ತು. ಮದ್ದೂರು ಕ್ಷೇತ್ರದಿಂದ ಎಸ್.ಎಂ.ಕೃಷ್ಣ ಅಣ್ಣನ ಮಗ ಎಸ್.ಗುರುಚರಣ್ ಹಾಗೂ ಕದಲೂರು ಉದಯ್ ನಡುವೆ ಪೈಪೋಟಿ ಇತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಉದಯ್ ಹೆಸರು ಪರಿಗಣಿಸಿದೆ