<p><strong>ಮಳವಳ್ಳಿ</strong>: ‘ಮದ್ಯಪಾನ ವಿಚಾರದಲ್ಲಿ ಪತಿಗೆ ಬುದ್ಧಿವಾದ ಹೇಳಿ’ ಎಂದು ಕೋರಿದ್ದ ಮಹಿಳೆ ಹಾಗೂ ಆಕೆ ಪತಿಗೆ ತಲಾ ₹ 5 ಸಾವಿರ ದಂಡ ವಿಧಿಸಿ, ತಲೆ ಬೋಳಿಸಿದ ಆರೋಪದ ಮೇರೆಗೆ ತಾಲ್ಲೂಕಿನ ದ್ಯಾವಪಟ್ಟಣ ಗ್ರಾಮದ ಐವರು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಬೆಳಕವಾಡಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ದಂಪತಿ ನಡುವೆ ಆ. 17ರಂದು ಕಲಹ ನಡೆದಿತ್ತು. ಅದನ್ನು ಮುಖಂಡರ ಗಮನಕ್ಕೆ ತಂದ ಮಹಿಳೆಯು ಪತಿಗೆ ಬುದ್ಧಿವಾದ ಹೇಳಿಸಿದ್ದರು.</p>.<p>‘ಯಾರದೋ ಮಾತು ಕೇಳಿ ನಿನಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಇಬ್ಬರೂ ದಂಡ ಕಟ್ಟಿ, ತಲೆ ಬೋಳಿಸಿಕೊಳ್ಳಿ ಎಂದು ಮುಖಂಡರಾದ ನಾಗಣ್ಣ, ಮಹದೇವ, ಕುಮಾರ, ಸೋಮಣ್ಣ, ಮಲ್ಲಯ್ಯ ಗ್ರಾಮದ ನ್ಯಾಯದ ಕಟ್ಟೆಯಲ್ಲಿ ತಿಳಿಸಿದ್ದರು’ ಎಂದು ಮಹಿಳೆ ಆರೋಪಿಸಿದ್ದಾರೆ.</p>.<p>‘ಒತ್ತಡ ಹಾಕಿ ಇಬ್ಬರ ತಲೆ ಕೂದಲು ತೆಗೆಸಿದರು. ಗ್ರಾಮದಲ್ಲಿ ಓಡಾಡಲಾಗದೇ ತೊಂದರೆ ಅನುಭವಿಸುತ್ತಿದ್ದೇನೆ. ಪತಿಗೆ ಬುದ್ಧಿ ಹೇಳಲಿ ಎಂದು ಕೋರಿದರೆ ನಮಗೆ ಅಪಮಾನ ಮಾಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ದೂರಿನಲ್ಲಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಳವಳ್ಳಿ</strong>: ‘ಮದ್ಯಪಾನ ವಿಚಾರದಲ್ಲಿ ಪತಿಗೆ ಬುದ್ಧಿವಾದ ಹೇಳಿ’ ಎಂದು ಕೋರಿದ್ದ ಮಹಿಳೆ ಹಾಗೂ ಆಕೆ ಪತಿಗೆ ತಲಾ ₹ 5 ಸಾವಿರ ದಂಡ ವಿಧಿಸಿ, ತಲೆ ಬೋಳಿಸಿದ ಆರೋಪದ ಮೇರೆಗೆ ತಾಲ್ಲೂಕಿನ ದ್ಯಾವಪಟ್ಟಣ ಗ್ರಾಮದ ಐವರು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಬೆಳಕವಾಡಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ದಂಪತಿ ನಡುವೆ ಆ. 17ರಂದು ಕಲಹ ನಡೆದಿತ್ತು. ಅದನ್ನು ಮುಖಂಡರ ಗಮನಕ್ಕೆ ತಂದ ಮಹಿಳೆಯು ಪತಿಗೆ ಬುದ್ಧಿವಾದ ಹೇಳಿಸಿದ್ದರು.</p>.<p>‘ಯಾರದೋ ಮಾತು ಕೇಳಿ ನಿನಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಇಬ್ಬರೂ ದಂಡ ಕಟ್ಟಿ, ತಲೆ ಬೋಳಿಸಿಕೊಳ್ಳಿ ಎಂದು ಮುಖಂಡರಾದ ನಾಗಣ್ಣ, ಮಹದೇವ, ಕುಮಾರ, ಸೋಮಣ್ಣ, ಮಲ್ಲಯ್ಯ ಗ್ರಾಮದ ನ್ಯಾಯದ ಕಟ್ಟೆಯಲ್ಲಿ ತಿಳಿಸಿದ್ದರು’ ಎಂದು ಮಹಿಳೆ ಆರೋಪಿಸಿದ್ದಾರೆ.</p>.<p>‘ಒತ್ತಡ ಹಾಕಿ ಇಬ್ಬರ ತಲೆ ಕೂದಲು ತೆಗೆಸಿದರು. ಗ್ರಾಮದಲ್ಲಿ ಓಡಾಡಲಾಗದೇ ತೊಂದರೆ ಅನುಭವಿಸುತ್ತಿದ್ದೇನೆ. ಪತಿಗೆ ಬುದ್ಧಿ ಹೇಳಲಿ ಎಂದು ಕೋರಿದರೆ ನಮಗೆ ಅಪಮಾನ ಮಾಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ದೂರಿನಲ್ಲಿ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>