<p><strong>ಕಿಕ್ಕೇರಿ:</strong>ಸಮೀಪದ ಮಂದಗೆರೆ ಗ್ರಾಮದ ಆಸುಪಾಸಿನ ಗ್ರಾಮದ ಬಳಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಲಿದ್ದು, ನದಿಯ ಬಳಿ ಜನ, ಜಾನುವಾರುಗಳು ತೆರಳದಂತೆ ತಹಶೀಲ್ದಾರ್ ಎಂ. ಶಿವಮೂರ್ತಿ ಎಚ್ಚರಿಕೆ ನೀಡಿದರು.</p>.<p>ಮಂದಗೆರೆ, ಚಿಕ್ಕಮಂದಗೆರೆ, ಗದ್ದೆಹೊಸೂರು, ಬೇವಿನಹಳ್ಳಿ ಮತ್ತಿತರ ಗ್ರಾಮಗಳಿಗೆ ತೆರಳಿದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಮಾತನಾಡಿದರು.</p>.<p>ಬಿಡದ ಸುರಿಯುತ್ತಿರುವ ಮಳೆ, ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಗೊರೂರು ಅಣೆಕಟ್ಟಿನಿಂದ 50ರಿಂದ 60ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹೊರಬಿಡುವ ಸೂಚನೆ ಇದೆ. ಈ ಕುರಿತು ಈಗಾಗಲೇ ಇಲಾಖೆಯಿಂದ ನದಿಪಾತ್ರದ ಗ್ರಾಮಗಳಿಗೆ ತೆರಳಿ ಟಾಂಟಾಂ ಹೊಡಿಸಲಾಗಿದೆ. ನದಿಗೆ ಇಳಿಯುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸು<br />ವುದು, ಈಜುವಂತಹ ದುಸ್ಸಾಹ ಸಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.</p>.<p>ಸಾರ್ವಜನಿಕರು ಪ್ರವಾಹ ಹೆಚ್ಚಾಗಿ ಯಾವುದೇ ಅಪಾಯ ಸೂಚನೆ ಕಂಡು ಬಂದಲ್ಲಿ ಕೂಡಲೇ ವಾಟ್ಸ್ ಆ್ಯಪ್ ಫೇಸ್ಬುಕ್ ಮೂಲಕ ಮಾಹಿತಿಯಲ್ಲಿ ಹಂಚಿಕೊಳ್ಳಬಹುದಾಗಿದೆ. <strong>ಮಾಹಿತಿಗಾಗಿ 08230-262989, 88845 04666</strong> ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p><strong>ನದಿಪಾತ್ರದ ಹೊಲಗದ್ದೆಗಳಿಗೆ ನುಗ್ಗಿದ ಹೇಮೆ:</strong> ಉಕ್ಕಿ ಹರಿಯುತ್ತಿರುವ ಹೇಮೆಯಿಂದ ನದಿಪಾತ್ರದಲ್ಲಿರುವ ಹಲವು ಹೊಲಗದ್ದೆಗಳು ಜಲಾವೃತಗೊಂಡಿವೆ. ಬೇವಿನಹಳ್ಳಿ ಗ್ರಾಮದ ಅಂಕನಾಥೇಶ್ವರ, ಮಂದಗೆರೆಯ ಕಟ್ಟೆಪರಮೇಶ್ವರಿ ಗುಡಿಯ ಪ್ರಾಂಗಣದವರಿಗೆ ನೀರು ಪ್ರವೇಶಿಸಿದ್ದು ಯಾವುದೇ ಅಪಾಯಕರ ಸನ್ನಿವೇಶ ಉಂಟಾಗಿಲ್ಲ.</p>.<p>ಹೇಮಾವತಿ ಜಲಾಶಯ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಈರಣ್ಣ, ಸಿಪಿಐ ಕೆ.ಎನ್. ಸುಧಾಕರ್, ಪಿಎಸ್ಐ ಚಂದ್ರಶೇಖರ್, ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong>ಸಮೀಪದ ಮಂದಗೆರೆ ಗ್ರಾಮದ ಆಸುಪಾಸಿನ ಗ್ರಾಮದ ಬಳಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಲಿದ್ದು, ನದಿಯ ಬಳಿ ಜನ, ಜಾನುವಾರುಗಳು ತೆರಳದಂತೆ ತಹಶೀಲ್ದಾರ್ ಎಂ. ಶಿವಮೂರ್ತಿ ಎಚ್ಚರಿಕೆ ನೀಡಿದರು.</p>.<p>ಮಂದಗೆರೆ, ಚಿಕ್ಕಮಂದಗೆರೆ, ಗದ್ದೆಹೊಸೂರು, ಬೇವಿನಹಳ್ಳಿ ಮತ್ತಿತರ ಗ್ರಾಮಗಳಿಗೆ ತೆರಳಿದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಮಾತನಾಡಿದರು.</p>.<p>ಬಿಡದ ಸುರಿಯುತ್ತಿರುವ ಮಳೆ, ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಗೊರೂರು ಅಣೆಕಟ್ಟಿನಿಂದ 50ರಿಂದ 60ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹೊರಬಿಡುವ ಸೂಚನೆ ಇದೆ. ಈ ಕುರಿತು ಈಗಾಗಲೇ ಇಲಾಖೆಯಿಂದ ನದಿಪಾತ್ರದ ಗ್ರಾಮಗಳಿಗೆ ತೆರಳಿ ಟಾಂಟಾಂ ಹೊಡಿಸಲಾಗಿದೆ. ನದಿಗೆ ಇಳಿಯುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸು<br />ವುದು, ಈಜುವಂತಹ ದುಸ್ಸಾಹ ಸಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.</p>.<p>ಸಾರ್ವಜನಿಕರು ಪ್ರವಾಹ ಹೆಚ್ಚಾಗಿ ಯಾವುದೇ ಅಪಾಯ ಸೂಚನೆ ಕಂಡು ಬಂದಲ್ಲಿ ಕೂಡಲೇ ವಾಟ್ಸ್ ಆ್ಯಪ್ ಫೇಸ್ಬುಕ್ ಮೂಲಕ ಮಾಹಿತಿಯಲ್ಲಿ ಹಂಚಿಕೊಳ್ಳಬಹುದಾಗಿದೆ. <strong>ಮಾಹಿತಿಗಾಗಿ 08230-262989, 88845 04666</strong> ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p><strong>ನದಿಪಾತ್ರದ ಹೊಲಗದ್ದೆಗಳಿಗೆ ನುಗ್ಗಿದ ಹೇಮೆ:</strong> ಉಕ್ಕಿ ಹರಿಯುತ್ತಿರುವ ಹೇಮೆಯಿಂದ ನದಿಪಾತ್ರದಲ್ಲಿರುವ ಹಲವು ಹೊಲಗದ್ದೆಗಳು ಜಲಾವೃತಗೊಂಡಿವೆ. ಬೇವಿನಹಳ್ಳಿ ಗ್ರಾಮದ ಅಂಕನಾಥೇಶ್ವರ, ಮಂದಗೆರೆಯ ಕಟ್ಟೆಪರಮೇಶ್ವರಿ ಗುಡಿಯ ಪ್ರಾಂಗಣದವರಿಗೆ ನೀರು ಪ್ರವೇಶಿಸಿದ್ದು ಯಾವುದೇ ಅಪಾಯಕರ ಸನ್ನಿವೇಶ ಉಂಟಾಗಿಲ್ಲ.</p>.<p>ಹೇಮಾವತಿ ಜಲಾಶಯ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಈರಣ್ಣ, ಸಿಪಿಐ ಕೆ.ಎನ್. ಸುಧಾಕರ್, ಪಿಎಸ್ಐ ಚಂದ್ರಶೇಖರ್, ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>