<p><strong>ಮೇಲುಕೋಟೆ</strong>: ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜನವರಿ 5ರಿಂದ ಆರಂಭವಾಗಿರುವ ಕೊಠಾರೋತ್ಸವ( ಅಧ್ಯಯನೋತ್ಸವ) ಜ.15ರವರೆಗೆ ವೈಭವದಿಂದ ಪ್ರತಿನಿತ್ಯ ನೆರವೇರಲಿದೆ.</p>.<p>ವೈಷ್ಣವಪಂಥದಲ್ಲಿ ನಾರಾಯಣನ ಸಾಕ್ಷಾತ್ಕಾರ ಪಡೆದು ದೈವತ್ವಕ್ಕೇರಿದ 12ಮಂದಿ ಆಳ್ವಾರುಗಳಿಗೆ ಧನುರ್ಮಾಸ ವೇಳೆ ವಿಶೇಷ ಮಾಲೆ, ಮರ್ಯಾದೆ ಸಮರ್ಪಿಸುವ ಹಾಗೂ ಅವರನ್ನು ನೆನೆಯುವ ಮಹೋತ್ಸವವಾಗಿದ್ದು ಕೊಠಾರಮಂಟಪದಲ್ಲಿ ಪ್ರತಿಸಂಜೆ ಆಳ್ವಾರುಗಳು ಮತ್ತು ರಾಮಾನುಜಾರ್ಯರಿಗೆ ಮಾಲೆಮರ್ಯಾದೆ ಜರುಗುತ್ತಿದೆ.</p>.<p>ನಿತ್ಯ ಸಂಗೀತರಾಮಾಯಣ, ಅರೆಯರ್ ಪಾಟ್ಟು ಹಾಗೂ ದಿವ್ಯ ಪ್ರಬಂಧಪಾರಾಯಣದೊಂದಿಗೆ ಚೆಲುವನಾರಾಯಣನಿಗೆ ಪ್ರತಿದಿನ ಸಂಜೆ ಉತ್ಸವಗಳು ನಡೆಯುತ್ತಿದೆ.</p>.<p>ಪ್ರತಿದಿನ ಸಂಜೆ ರಾಜಬೀದಿಯಲ್ಲಿ ವಿವಿಧ ಕೈಂಕರ್ಯಪರರಿಂದ ದೇವಾಲಯದ ಕೈಪಿಡಿ ಸಂಪ್ರದಾಯದಂತೆ ಸ್ವಾಮಿಗೆ ಪುಷ್ಪಕೈಂಕರ್ಯ ನಂತರ ದೇವಾಲಯದಲ್ಲಿ ಸೇವೆಗಳು ನಡೆಯಲಿದೆ. ಪ್ರತಿದಿನ ವೈವಿಧ್ಯಮಯ ಪುಷ್ಪಾಲಂಕಾರದೊಂದಿಗೆ, ಪಾರಂಪರಿಕ ನೈವೇದ್ಯಗಳು ಸ್ವಾಮಿಗೆ ಅರ್ಪಣೆಯಾಗುವುದು ಕೊಠಾರೋತ್ಸವದ ವಿಶೇಷವಾಗಿದೆ.</p>.<p>ಕೊಠಾರೋತ್ಸವವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಜನವರಿ 5ರಿಂದ ಆರಂಭವಾಗಿರುವ ಕೊಠಾರೋತ್ಸವ( ಅಧ್ಯಯನೋತ್ಸವ) ಜ.15ರವರೆಗೆ ವೈಭವದಿಂದ ಪ್ರತಿನಿತ್ಯ ನೆರವೇರಲಿದೆ.</p>.<p>ವೈಷ್ಣವಪಂಥದಲ್ಲಿ ನಾರಾಯಣನ ಸಾಕ್ಷಾತ್ಕಾರ ಪಡೆದು ದೈವತ್ವಕ್ಕೇರಿದ 12ಮಂದಿ ಆಳ್ವಾರುಗಳಿಗೆ ಧನುರ್ಮಾಸ ವೇಳೆ ವಿಶೇಷ ಮಾಲೆ, ಮರ್ಯಾದೆ ಸಮರ್ಪಿಸುವ ಹಾಗೂ ಅವರನ್ನು ನೆನೆಯುವ ಮಹೋತ್ಸವವಾಗಿದ್ದು ಕೊಠಾರಮಂಟಪದಲ್ಲಿ ಪ್ರತಿಸಂಜೆ ಆಳ್ವಾರುಗಳು ಮತ್ತು ರಾಮಾನುಜಾರ್ಯರಿಗೆ ಮಾಲೆಮರ್ಯಾದೆ ಜರುಗುತ್ತಿದೆ.</p>.<p>ನಿತ್ಯ ಸಂಗೀತರಾಮಾಯಣ, ಅರೆಯರ್ ಪಾಟ್ಟು ಹಾಗೂ ದಿವ್ಯ ಪ್ರಬಂಧಪಾರಾಯಣದೊಂದಿಗೆ ಚೆಲುವನಾರಾಯಣನಿಗೆ ಪ್ರತಿದಿನ ಸಂಜೆ ಉತ್ಸವಗಳು ನಡೆಯುತ್ತಿದೆ.</p>.<p>ಪ್ರತಿದಿನ ಸಂಜೆ ರಾಜಬೀದಿಯಲ್ಲಿ ವಿವಿಧ ಕೈಂಕರ್ಯಪರರಿಂದ ದೇವಾಲಯದ ಕೈಪಿಡಿ ಸಂಪ್ರದಾಯದಂತೆ ಸ್ವಾಮಿಗೆ ಪುಷ್ಪಕೈಂಕರ್ಯ ನಂತರ ದೇವಾಲಯದಲ್ಲಿ ಸೇವೆಗಳು ನಡೆಯಲಿದೆ. ಪ್ರತಿದಿನ ವೈವಿಧ್ಯಮಯ ಪುಷ್ಪಾಲಂಕಾರದೊಂದಿಗೆ, ಪಾರಂಪರಿಕ ನೈವೇದ್ಯಗಳು ಸ್ವಾಮಿಗೆ ಅರ್ಪಣೆಯಾಗುವುದು ಕೊಠಾರೋತ್ಸವದ ವಿಶೇಷವಾಗಿದೆ.</p>.<p>ಕೊಠಾರೋತ್ಸವವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>