<p><strong>ಮದ್ದೂರು:</strong> ಇಲ್ಲಿನ ಟಿಎಪಿಸಿಎಂಎಸ್ ಪ್ರಸಕ್ತ ಸಾಲಿನಲ್ಲಿ ₹25,11,425 ಲಾಭದಲ್ಲಿದ್ದು, ಮುಂದಿನ ವರ್ಷ ಹೆಚ್ಚುವರಿ ₹ 18 ಲಕ್ಷ ಲಾಭ ಹೆಚ್ಚಿಸಿಕೊಳ್ಳಲಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಬಿ. ಮಹದೇವು ತಿಳಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುಂದಿನ ದಿನಗಳಲ್ಲಿ ರೈತ ಸಮುದಾಯ ಭವನ ನಿರ್ಮಿಸಲು ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ. ಇದರಿಂದಾಗಿ ಸಂಘದ ಸದಸ್ಯರಾದ ರೈತರಿಗೆ ಅನುಕೂಲವಾಗಲಿದೆ ಎಂದರು.</p>.<p>ಸಹಕಾರ ಸಂಘವು ಆರ್ಥಿಕವಾಗಿ ಪ್ರಗತಿ ಹಂತದಲ್ಲಿದೆ. ಸಂಘದ ವಜ್ರ ಮಹೋತ್ಸವದ ಅಂಗವಾಗಿ ಏಳು ಅಂಗಡಿ ಮಳಿಗೆಗಳನ್ನು ನೂತನವಾಗಿ ನಿರ್ಮಿಸಿರುವುದರ ಜೊತೆಗೆ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿರುವುದಾಗಿ ತಿಳಿಸಿದರು.</p>.<p>ಸಂಘವು ಹೋಟೆಲ್ಗೆ ನೀಡಿರುವ ನೆಲಬಾಡಿಗೆ ಮತ್ತು ಹೊಸ ಮಳಿಗೆಗಳಿಂದ ಮುಂದಿನ ವರ್ಷದಿಂದ ₹18 ಲಕ್ಷ ಹೆಚ್ಚುವರಿ ಆದಾಯ ಬರಲಿದೆ. ಹಲವೆಡೆ ಸಂಘದ ಆಸ್ತಿಗಳನ್ನು ಹದ್ದು ಬಸ್ತು ಮಾಡಿಸಿ ತಂತಿ ಬೇಲಿ ಹಾಕಿಸಿ ರಕ್ಷಣೆ ಮಾಡಿರುವುದಾಗಿ ತಿಳಿಸಿದರು.</p>.<p>ಸರ್ವ ಸದಸ್ಯರ ಆಹ್ವಾನ ಪತ್ರಿಕೆ ಕೆಲ ಸದಸ್ಯರಿಗೆ ತಲುಪದೆ ಸಭೆ ಆರಂಭಕ್ಕೂ ಮುನ್ನ ಆಡಳಿತ ಮಂಡಳಿ ಸದಸ್ಯರೊಂದಿಗೆ ಷೇರುದಾರರು ಮಾತಿನ ಚಕಮಕಿ ನಡೆಸಿದರು. ಮಾಹಿತಿ ನೀಡುವವರೆಗೂ ಸಭೆ ನಡೆಸದಂತೆ ಕೆಲ ಸದಸ್ಯರು ಆಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಸರ್ವ ಸದಸ್ಯರ ಆಹ್ವಾನ ಪತ್ರಿಕೆಯನ್ನು ಅಂಚೆ ಮೂಲಕ ವಾರ ಮುಂಚಿತವಾಗಿ ತಲುಪಿಸಲು ಕ್ರಮ ವಹಿಸಲಾಗಿತ್ತು. ಕೆಲ ಸದಸ್ಯರ ವಿಳಾಸ ತಪ್ಪಾಗಿ ಆಹ್ವಾನ ಪತ್ರಿಕೆ ತಲುಪಿಲ್ಲ. ಸಭೆ ಬಗ್ಗೆ ಕೆಲವು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಲಾಗಿದೆ ಎಂದರು.</p>.<p>ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳನ್ನು ಅಭಿನಂದಿಸಲಾಯಿತು. ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕರಾದ ಕೆ.ಟಿ.ಶೇಖರ್, ಎಚ್.ಕೆ.ಕರಿಯಪ್ಪ, ಸಿ.ಪಿ.ಸುಧಾ, ಕೆ.ಎಂ.ಅಮೂಲ್ಯ, ಕೆ.ಎಚ್.ಇಂದಿರಾ, ಚಂದ್ರನಾಯಕ್, ಜಯಕೃಷ್ಣ, ಟಿ.ಗೋಪಿ, ಕೆ.ಅನಿತ, ಕಾರ್ಯದರ್ಶಿ ಸಿ.ಪಿ.ಯೋಗಾನಂದ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಇಲ್ಲಿನ ಟಿಎಪಿಸಿಎಂಎಸ್ ಪ್ರಸಕ್ತ ಸಾಲಿನಲ್ಲಿ ₹25,11,425 ಲಾಭದಲ್ಲಿದ್ದು, ಮುಂದಿನ ವರ್ಷ ಹೆಚ್ಚುವರಿ ₹ 18 ಲಕ್ಷ ಲಾಭ ಹೆಚ್ಚಿಸಿಕೊಳ್ಳಲಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಬಿ. ಮಹದೇವು ತಿಳಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುಂದಿನ ದಿನಗಳಲ್ಲಿ ರೈತ ಸಮುದಾಯ ಭವನ ನಿರ್ಮಿಸಲು ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ. ಇದರಿಂದಾಗಿ ಸಂಘದ ಸದಸ್ಯರಾದ ರೈತರಿಗೆ ಅನುಕೂಲವಾಗಲಿದೆ ಎಂದರು.</p>.<p>ಸಹಕಾರ ಸಂಘವು ಆರ್ಥಿಕವಾಗಿ ಪ್ರಗತಿ ಹಂತದಲ್ಲಿದೆ. ಸಂಘದ ವಜ್ರ ಮಹೋತ್ಸವದ ಅಂಗವಾಗಿ ಏಳು ಅಂಗಡಿ ಮಳಿಗೆಗಳನ್ನು ನೂತನವಾಗಿ ನಿರ್ಮಿಸಿರುವುದರ ಜೊತೆಗೆ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿರುವುದಾಗಿ ತಿಳಿಸಿದರು.</p>.<p>ಸಂಘವು ಹೋಟೆಲ್ಗೆ ನೀಡಿರುವ ನೆಲಬಾಡಿಗೆ ಮತ್ತು ಹೊಸ ಮಳಿಗೆಗಳಿಂದ ಮುಂದಿನ ವರ್ಷದಿಂದ ₹18 ಲಕ್ಷ ಹೆಚ್ಚುವರಿ ಆದಾಯ ಬರಲಿದೆ. ಹಲವೆಡೆ ಸಂಘದ ಆಸ್ತಿಗಳನ್ನು ಹದ್ದು ಬಸ್ತು ಮಾಡಿಸಿ ತಂತಿ ಬೇಲಿ ಹಾಕಿಸಿ ರಕ್ಷಣೆ ಮಾಡಿರುವುದಾಗಿ ತಿಳಿಸಿದರು.</p>.<p>ಸರ್ವ ಸದಸ್ಯರ ಆಹ್ವಾನ ಪತ್ರಿಕೆ ಕೆಲ ಸದಸ್ಯರಿಗೆ ತಲುಪದೆ ಸಭೆ ಆರಂಭಕ್ಕೂ ಮುನ್ನ ಆಡಳಿತ ಮಂಡಳಿ ಸದಸ್ಯರೊಂದಿಗೆ ಷೇರುದಾರರು ಮಾತಿನ ಚಕಮಕಿ ನಡೆಸಿದರು. ಮಾಹಿತಿ ನೀಡುವವರೆಗೂ ಸಭೆ ನಡೆಸದಂತೆ ಕೆಲ ಸದಸ್ಯರು ಆಧಿಕಾರಿಗಳು ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.</p>.<p>ಸರ್ವ ಸದಸ್ಯರ ಆಹ್ವಾನ ಪತ್ರಿಕೆಯನ್ನು ಅಂಚೆ ಮೂಲಕ ವಾರ ಮುಂಚಿತವಾಗಿ ತಲುಪಿಸಲು ಕ್ರಮ ವಹಿಸಲಾಗಿತ್ತು. ಕೆಲ ಸದಸ್ಯರ ವಿಳಾಸ ತಪ್ಪಾಗಿ ಆಹ್ವಾನ ಪತ್ರಿಕೆ ತಲುಪಿಲ್ಲ. ಸಭೆ ಬಗ್ಗೆ ಕೆಲವು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಲಾಗಿದೆ ಎಂದರು.</p>.<p>ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳನ್ನು ಅಭಿನಂದಿಸಲಾಯಿತು. ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕರಾದ ಕೆ.ಟಿ.ಶೇಖರ್, ಎಚ್.ಕೆ.ಕರಿಯಪ್ಪ, ಸಿ.ಪಿ.ಸುಧಾ, ಕೆ.ಎಂ.ಅಮೂಲ್ಯ, ಕೆ.ಎಚ್.ಇಂದಿರಾ, ಚಂದ್ರನಾಯಕ್, ಜಯಕೃಷ್ಣ, ಟಿ.ಗೋಪಿ, ಕೆ.ಅನಿತ, ಕಾರ್ಯದರ್ಶಿ ಸಿ.ಪಿ.ಯೋಗಾನಂದ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>