ಮಳವಳ್ಳಿ ತಾಲ್ಲೂಕಿನ ‘ತಳಗವಾದಿ’ ಗ್ರಾಮದ ಹೆಸರನ್ನು ‘ಥಲ್ಲೋರಿ’ ಎಂದು ಅಳವಡಿಸಿರುವುದು.
ರಾಜ್ಯ ಹೆದ್ದಾರಿಯ ನಾಮಫಲಕಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ಕೂಡಲೇ ಹೊಸ ನಾಮಫಲಕಗಳ ಅಳವಡಿಕೆಗೆ ಮುಂದಾಗುತ್ತೇವೆ
ಅವಿನಾಶ್ ಕೆಶಿಪ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್
‘ನಾಮಫಲಕಗಳ ದೋಷ ಸರಿಪಡಿಸಿ’
ಅತಿ ಹೆಚ್ಚು ಕನ್ನಡ ಮಾತಾಡುವ ಮಂಡ್ಯ ಜಿಲ್ಲೆಯಲ್ಲಿ ನಾಮಫಲಕಗಳು ತಪ್ಪಾಗಿರುವುದನ್ನು ಕನ್ನಡ ಸೇನೆ ಖಂಡಿಸುತ್ತದೆ. ಮಳವಳ್ಳಿಯ ಹಲವೆಡೆ ಹೆದ್ದಾರಿಗಳಲ್ಲಿ ಇಂಥ ತಪ್ಪುಗಳು ಕಂಡು ಬರುತ್ತಿವೆ. ಕೆಲವೇ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತ ತಕ್ಷಣ ಗ್ರಾಮಗಳ ಹೆಸರಿನ ನಾಮಫಲಕಗಳನ್ನು ಸರಿಪಡಿಸಬೇಕು. ಸರ್ಕಾರದಿಂದ ಅಳವಡಿಸುವ ನಾಮಫಲಕಗಳ ಗತಿಯೇ ಹೀಗಾದರೆ ಕನ್ನಡ ಭಾಷೆಯ ಗತಿಯೇನು? ಎಚ್.ಸಿ. ಮಂಜುನಾಥ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಸೇನೆ ಸಂಘಟನೆ