<p><strong>ಕೆ.ಆರ್.ಪೇಟೆ:</strong> ‘ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಜನ್ಮ ಕೊಟ್ಟ ಊರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.</p>.<p>ತಾಲ್ಲೂಕಿನ ತಮ್ಮ ಸ್ವಗ್ರಾಮ ಬೂಕನಕೆರೆಗೆ ಬುಧವಾರ ಸಂಜೆ ಭೇಟಿ ನೀಡಿ ತಮ್ಮ ಮನೆದೇವರಾದ ಅಕ್ಕಯ್ಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನನ್ನ ಕುಟುಂಬದ ಹಿರಿಯರಿಗೆ ನಮಿಸುವ, ಮನೆ ದೇವತೆಯಾದ ಅಕ್ಕಯ್ಯಮ್ಮನಿಗೆ ಪೂಜೆ ಸಲ್ಲಿಸುವ ಕಾರ್ಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಬಾರಿ ಗ್ರಾಮಸ್ಥರು ಬರಲೇ ಬೇಕೆಂದು ಒತ್ತಾಯ ಮಾಡಿದ ಹಿನ್ನೆಲೆ ಯಲ್ಲಿ ಬರಲೇಬೇಕಾಯಿತು’ ಎಂದರು.</p>.<p>‘ಸ್ವರ್ಗಸ್ಥರಾಗಿರುವ ತಂದೆಯವರು ನನ್ನನ್ನು ತೋಟಕ್ಕೆ ಕರೆದೊಯ್ಯುವಾಗ, ಮನೆ ದೇವರಾದ ಗವಿಮಠ ಸಿದ್ದಲಿಂಗೇಶ್ವರರ ದೇವಸ್ಥಾನಕ್ಕೆ ಕರೆದೊಯ್ಯುವಾಗ, ತೆಂಡೇಕೆರೆಯ ಸಂತೆಗೆ ಗಾಡಿಯಲ್ಲಿ ಹೋಗುವಾಗಲೆಲ್ಲಾ ನಿನಗೆ ಯೋಗವಿದೆ. ಇಲ್ಲಿಯ ಆಲೋಚನೆ ಬೇಡ. ದೈವತ್ವ ನಿನ್ನನ್ನು ಕರೆದೊಯ್ದಂತೆ ಹೋಗು ಎಂದಿದ್ದರು’ ಎಂದು ನೆನಪು ಮಾಡಿಕೊಂಡರು.</p>.<p>‘ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಜೀವನ ನಡೆಯಿತು. ನನ್ನ ಕರ್ಮ ಭೂಮಿ ಶಿಕಾರಿಪುರದಲ್ಲಿ ಏಳು ಬಾರಿ ನನ್ನನ್ನು ಗೆಲ್ಲಿಸಿದರು. ನಾಲ್ಕು ಬಾರಿ ಮುಖ್ಯಮಂತ್ರಿ ಯಾದೆ. ಬೂಕನಕೆರೆ ಹಾಗೂ ಶಿಕಾರಿಪುರ ಎರಡೂ ಊರುಗಳು ನನ್ನ ಎರಡು ಕಣ್ಣುಗಳಿದ್ದಂತೆ’ ಎಂದರು.</p>.<p>‘ಕೆ.ಆರ್.ಪೇಟೆಯಲ್ಲಿ ನಾನು ಕಟ್ಟಿ ಬೆಳೆಸಿದ ಪಕ್ಷ ಖಾತೆ ತೆರೆಯಲಿಲ್ಲವಲ್ಲ ಎಂಬ ಕೊರಗು ನನಗಿತ್ತು. ಕಳೆದ ಚುನಾವಣೆಯಲ್ಲಿ ನನ್ನ ಕೈಹಿಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ನನ್ನನ್ನು ಸಿಎಂ ಸ್ಥಾನದಲ್ಲಿ ಉಳಿಯಲು ತಾಲ್ಲೂಕಿನ ಮತದಾರರು ಸಹಾಯ ಮಾಡಿದರು’ ಎಂದು ಹೇಳಿದರು.</p>.<p>ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ ಅರವಿಂದ್, ಗ್ರಾ.ಪಂ ಅಧ್ಯಕ್ಷೆ ಸುನಂದಾ, ಮುಖಂಡರಾದ ಬೂಕನಕೆರೆ ಮಧುಸೂದನ್, ಚೋಕನಹಳ್ಳಿ ಪ್ರಕಾಶ್, ಮೀನಾಕ್ಷಮ್ಮ ಪುಟ್ಟರಾಜು, ಶ್ಯಾಮಸುಂದರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ:</strong> ‘ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಜನ್ಮ ಕೊಟ್ಟ ಊರನ್ನು ಮರೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.</p>.<p>ತಾಲ್ಲೂಕಿನ ತಮ್ಮ ಸ್ವಗ್ರಾಮ ಬೂಕನಕೆರೆಗೆ ಬುಧವಾರ ಸಂಜೆ ಭೇಟಿ ನೀಡಿ ತಮ್ಮ ಮನೆದೇವರಾದ ಅಕ್ಕಯ್ಯಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನನ್ನ ಕುಟುಂಬದ ಹಿರಿಯರಿಗೆ ನಮಿಸುವ, ಮನೆ ದೇವತೆಯಾದ ಅಕ್ಕಯ್ಯಮ್ಮನಿಗೆ ಪೂಜೆ ಸಲ್ಲಿಸುವ ಕಾರ್ಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಬಾರಿ ಗ್ರಾಮಸ್ಥರು ಬರಲೇ ಬೇಕೆಂದು ಒತ್ತಾಯ ಮಾಡಿದ ಹಿನ್ನೆಲೆ ಯಲ್ಲಿ ಬರಲೇಬೇಕಾಯಿತು’ ಎಂದರು.</p>.<p>‘ಸ್ವರ್ಗಸ್ಥರಾಗಿರುವ ತಂದೆಯವರು ನನ್ನನ್ನು ತೋಟಕ್ಕೆ ಕರೆದೊಯ್ಯುವಾಗ, ಮನೆ ದೇವರಾದ ಗವಿಮಠ ಸಿದ್ದಲಿಂಗೇಶ್ವರರ ದೇವಸ್ಥಾನಕ್ಕೆ ಕರೆದೊಯ್ಯುವಾಗ, ತೆಂಡೇಕೆರೆಯ ಸಂತೆಗೆ ಗಾಡಿಯಲ್ಲಿ ಹೋಗುವಾಗಲೆಲ್ಲಾ ನಿನಗೆ ಯೋಗವಿದೆ. ಇಲ್ಲಿಯ ಆಲೋಚನೆ ಬೇಡ. ದೈವತ್ವ ನಿನ್ನನ್ನು ಕರೆದೊಯ್ದಂತೆ ಹೋಗು ಎಂದಿದ್ದರು’ ಎಂದು ನೆನಪು ಮಾಡಿಕೊಂಡರು.</p>.<p>‘ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಜೀವನ ನಡೆಯಿತು. ನನ್ನ ಕರ್ಮ ಭೂಮಿ ಶಿಕಾರಿಪುರದಲ್ಲಿ ಏಳು ಬಾರಿ ನನ್ನನ್ನು ಗೆಲ್ಲಿಸಿದರು. ನಾಲ್ಕು ಬಾರಿ ಮುಖ್ಯಮಂತ್ರಿ ಯಾದೆ. ಬೂಕನಕೆರೆ ಹಾಗೂ ಶಿಕಾರಿಪುರ ಎರಡೂ ಊರುಗಳು ನನ್ನ ಎರಡು ಕಣ್ಣುಗಳಿದ್ದಂತೆ’ ಎಂದರು.</p>.<p>‘ಕೆ.ಆರ್.ಪೇಟೆಯಲ್ಲಿ ನಾನು ಕಟ್ಟಿ ಬೆಳೆಸಿದ ಪಕ್ಷ ಖಾತೆ ತೆರೆಯಲಿಲ್ಲವಲ್ಲ ಎಂಬ ಕೊರಗು ನನಗಿತ್ತು. ಕಳೆದ ಚುನಾವಣೆಯಲ್ಲಿ ನನ್ನ ಕೈಹಿಡಿದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ನನ್ನನ್ನು ಸಿಎಂ ಸ್ಥಾನದಲ್ಲಿ ಉಳಿಯಲು ತಾಲ್ಲೂಕಿನ ಮತದಾರರು ಸಹಾಯ ಮಾಡಿದರು’ ಎಂದು ಹೇಳಿದರು.</p>.<p>ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ ಅರವಿಂದ್, ಗ್ರಾ.ಪಂ ಅಧ್ಯಕ್ಷೆ ಸುನಂದಾ, ಮುಖಂಡರಾದ ಬೂಕನಕೆರೆ ಮಧುಸೂದನ್, ಚೋಕನಹಳ್ಳಿ ಪ್ರಕಾಶ್, ಮೀನಾಕ್ಷಮ್ಮ ಪುಟ್ಟರಾಜು, ಶ್ಯಾಮಸುಂದರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>