‘ವೈಜ್ಞಾನಿಕ ಚಿಂತನೆ ಎಂದರೆ ಸತ್ಯ ಶೋಧನೆಯಾಗಿರಬೇಕು. ಆದರೆ, ಮೂಢನಂಬಿಕೆ ಅಂಧಶ್ರದ್ಧೆಯ ಭಾವನೆಗಳಿಂದ ಜನಸಾಮಾನ್ಯರು ಗೊಂದಲಕ್ಕೆ ಒಳಗಾಗಿ ಪಟ್ಟಭದ್ರರ ಹಿಡಿತಕ್ಕೆ ಸಿಲುಕಿ ನಲುಗುವಂತಾಗಿದೆ. ಮಾನವಕೋಟಿಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ತಿಳಿಸಿದ್ದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು, ಎಚ್.ಎನ್ ರಂಥವರು ನಮಗೆ ನಿತ್ಯ ಮಾರ್ಗದರ್ಶಕರಾಗಬೇಕು’ ಎಂದರು.