<p><strong>ಮಂಡ್ಯ:</strong> ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದರೂ ಖರೀದಿ ಜೋರಾಗಿಯೇ ನಡೆಯಿತು. </p><p>ನಗರದ ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ಸರ್ಕಲ್, ಗುತ್ತಲು ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ರಸ್ತೆ ಬದಿಯಲ್ಲಿ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂಗಳ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಒಂದು ಬಾಳೆ ಕಂದಿಗೆ ₹40ರಿಂದ ₹80, ಮಾವಿನ ಸೊಪ್ಪು ಕಟ್ಟಿಗೆ ₹30, ಎರಡು ತಾವರೆ ಹೂ ₹80ರಂತೆ ಮಾರಾಟವಾಯಿತು. </p><p>ಮನೆಯಲ್ಲಿ ಲಕ್ಷ್ಮಿ ಮೂರ್ತಿಗಳನ್ನಿಟ್ಟು ಪೂಜಿಸಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಗೆಂದೇ ವಿಶೇಷವಾಗಿ ತಾವರೆ ಹೂಗಳನ್ನು ಬಳಸಲಾಗುತ್ತದೆ. ಹಾಗಾಗಿ ತಾವರೆ ಹೂವುಗಳಿಗೆ ಭಾರಿ ಬೇಡಿಕೆಯಿತ್ತು. </p><p>‘ಯಾವುದೇ ಹಬ್ಬ ಬಂದರೆ ಸಾಕು ಹೂವು, ಹಣ್ಣುಗಳ ಬೆಲೆಯನ್ನು ಕೇಳುವುದಕ್ಕೇ ಆಗುವುದಿಲ್ಲ, ಜೊತೆಗೆ ಬೆಲೆ ಹೆಚ್ಚಳವಾಗಿದ್ದರೂ ಅನಿವಾರ್ಯವಾಗಿ ಖರೀದಿ ಮಾಡಲೇಬೇಕಾಗಿದೆ. ಈ ಬೆಲೆ ಹೆಚ್ಚಳದಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಬಹುತೇಕ ಮಧ್ಯವರ್ತಿಗಳಿಗೇ ಲಾಭವಾಗುತ್ತದೆ’ ಎಂದು ಗೃಹಿಣಿಯರಾದ ಬಿ.ರಶ್ಮಿ, ಹೇಮಾಮಾಲಿನಿ, ಸುನೀತಾ ಹೇಳಿದರು.</p><p>ತರಕಾರಿ (ಕೆ.ಜಿ.ಗೆ) ಸಿಹಿಗೆಣಸು ₹25, ಮೂಲಂಗಿ, ಮಂಗಳೂರು ಸೌತೆ, ಹೂಕೋಸು, ಎಲೆಕೋಸು ₹30, ಈರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಬೂದುಗುಂಬಳ, ಆಲೂಗೆಡ್ಡೆ, ಬೀಟ್ರೂ ಟ್, ಮರಗೆಣಸು ₹40, ಹಾಗಲಕಾಯಿ, ಅವರೆಕಾಯಿ, ಸಿಹಿಗುಂಬಳ ₹50, ಗೆಡ್ಡೆಕೋಸು, ಹಸಿರು ಮೆಣಸಿನಕಾಯಿ ₹60, ಕ್ಯಾರೆಟ್, ಬೀನ್ಸ್, ದಪ್ಪಮೆಣಸಿನಕಾಯಿ ₹80, ಸುಂಠಿ ₹120, ರಾಜ್ ಈರುಳ್ಳಿ ₹100, ಹಸಿಬಟಾಣಿ ₹200 ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾದರೆ ಒಂದು ನಿಂಬೆಹಣ್ಣಿಗೆ ₹5ರಿಂದ ₹6ರಂತೆ ಮಾರಾಟ ಮಾಡಲಾಗುತ್ತಿತ್ತು.</p><p>ಪಪ್ಪಾಯಿ, ಕಲ್ಲಂಗಡಿ ₹36, ಪಚ್ಚಬಾಳೆ ₹44, ಏಲಕ್ಕಿಬಾಳೆ, ಸೀಬೆ ₹100, ಮೂಸಿಂಬೆ ₹80, ಕಪ್ಪು ದ್ರಾಕ್ಷಿ ₹120, ಡ್ರ್ಯಾಗನ್ ಫ್ರೂಟ್ ₹140, ಕಿವಿಹಣ್ಣು (ಬಾಕ್ಸ್)₹160, ಕಿತ್ತಳೆ ₹220, ದಾಳಿಂಬೆ ₹280, ಆಸ್ಟ್ರೇಲಿಯಾ ಸೇಬು ₹300, ರಾಯಲ್ ಗಾಲ ಸೇಬು ₹360 ರಂತೆ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.</p><p><strong>ಹೂವಿಗೆ ಭರ್ಜರಿ ಬೇಡಿಕೆ</strong></p><p>ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಕನಕಾಂಬರ, ಮಲ್ಲಿಗೆ, ಮರಳೆ, ಕಾಕಡ ಹೂವುಗಳ ಬೆಲೆಯು ಹೆಚ್ಚಳವಾಗಿದೆ. ಹಳದಿ ಮತ್ತು ಕೆಂಪು ಚೆಂಡು ಹೂವು ₹60ರಿಂದ ₹70, ಸಣ್ಣಗುಲಾಬಿ ₹300, ಸುಗಂಧರಾಜ, ಸೇವಂತಿಗೆ ₹350, ಬಟನ್ಸ್, ಬಿಳಿ ಸೇವಂತಿಗೆ ₹400, ಗಣಗಲೆ ₹450, ಕಲ್ಕತ್ತಾ ಮಲ್ಲಿಗೆ ₹600, ಕಾಕಡ ₹1000, ಮರಳೆ ₹1500, ಮಲ್ಲಿಗೆ ₹2,000, ಕನಕಾಂಬರ ₹2,500ರಂತೆ ಕೆ.ಜಿ.ಗೆ ಮಾರಾಟವಾದವು.</p><p>ತುಳಸಿ ₹50, ಹಳದಿ ಮತ್ತು ಕೆಂಪು ಚೆಂಡು ಹೂವು ₹80, ಸೇವಂತಿಗೆ, ಗಣಗಲೆ ₹100, ಬಟನ್ಸ್, ಬಿಳಿಸೇವಂತಿಗೆ, ಕಾಕಡ. ಮರಳೆ ₹150, ಕನಕಾಂಬರ ₹200, ಮಲ್ಲಿಗೆ ₹300ರಂತೆ ಪ್ರತಿ ಮಾರಿಗೆ ಮಾರಾಟವಾದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದರೂ ಖರೀದಿ ಜೋರಾಗಿಯೇ ನಡೆಯಿತು. </p><p>ನಗರದ ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ಸರ್ಕಲ್, ಗುತ್ತಲು ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ರಸ್ತೆ ಬದಿಯಲ್ಲಿ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂಗಳ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಒಂದು ಬಾಳೆ ಕಂದಿಗೆ ₹40ರಿಂದ ₹80, ಮಾವಿನ ಸೊಪ್ಪು ಕಟ್ಟಿಗೆ ₹30, ಎರಡು ತಾವರೆ ಹೂ ₹80ರಂತೆ ಮಾರಾಟವಾಯಿತು. </p><p>ಮನೆಯಲ್ಲಿ ಲಕ್ಷ್ಮಿ ಮೂರ್ತಿಗಳನ್ನಿಟ್ಟು ಪೂಜಿಸಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಗೆಂದೇ ವಿಶೇಷವಾಗಿ ತಾವರೆ ಹೂಗಳನ್ನು ಬಳಸಲಾಗುತ್ತದೆ. ಹಾಗಾಗಿ ತಾವರೆ ಹೂವುಗಳಿಗೆ ಭಾರಿ ಬೇಡಿಕೆಯಿತ್ತು. </p><p>‘ಯಾವುದೇ ಹಬ್ಬ ಬಂದರೆ ಸಾಕು ಹೂವು, ಹಣ್ಣುಗಳ ಬೆಲೆಯನ್ನು ಕೇಳುವುದಕ್ಕೇ ಆಗುವುದಿಲ್ಲ, ಜೊತೆಗೆ ಬೆಲೆ ಹೆಚ್ಚಳವಾಗಿದ್ದರೂ ಅನಿವಾರ್ಯವಾಗಿ ಖರೀದಿ ಮಾಡಲೇಬೇಕಾಗಿದೆ. ಈ ಬೆಲೆ ಹೆಚ್ಚಳದಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಬಹುತೇಕ ಮಧ್ಯವರ್ತಿಗಳಿಗೇ ಲಾಭವಾಗುತ್ತದೆ’ ಎಂದು ಗೃಹಿಣಿಯರಾದ ಬಿ.ರಶ್ಮಿ, ಹೇಮಾಮಾಲಿನಿ, ಸುನೀತಾ ಹೇಳಿದರು.</p><p>ತರಕಾರಿ (ಕೆ.ಜಿ.ಗೆ) ಸಿಹಿಗೆಣಸು ₹25, ಮೂಲಂಗಿ, ಮಂಗಳೂರು ಸೌತೆ, ಹೂಕೋಸು, ಎಲೆಕೋಸು ₹30, ಈರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಬೂದುಗುಂಬಳ, ಆಲೂಗೆಡ್ಡೆ, ಬೀಟ್ರೂ ಟ್, ಮರಗೆಣಸು ₹40, ಹಾಗಲಕಾಯಿ, ಅವರೆಕಾಯಿ, ಸಿಹಿಗುಂಬಳ ₹50, ಗೆಡ್ಡೆಕೋಸು, ಹಸಿರು ಮೆಣಸಿನಕಾಯಿ ₹60, ಕ್ಯಾರೆಟ್, ಬೀನ್ಸ್, ದಪ್ಪಮೆಣಸಿನಕಾಯಿ ₹80, ಸುಂಠಿ ₹120, ರಾಜ್ ಈರುಳ್ಳಿ ₹100, ಹಸಿಬಟಾಣಿ ₹200 ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾದರೆ ಒಂದು ನಿಂಬೆಹಣ್ಣಿಗೆ ₹5ರಿಂದ ₹6ರಂತೆ ಮಾರಾಟ ಮಾಡಲಾಗುತ್ತಿತ್ತು.</p><p>ಪಪ್ಪಾಯಿ, ಕಲ್ಲಂಗಡಿ ₹36, ಪಚ್ಚಬಾಳೆ ₹44, ಏಲಕ್ಕಿಬಾಳೆ, ಸೀಬೆ ₹100, ಮೂಸಿಂಬೆ ₹80, ಕಪ್ಪು ದ್ರಾಕ್ಷಿ ₹120, ಡ್ರ್ಯಾಗನ್ ಫ್ರೂಟ್ ₹140, ಕಿವಿಹಣ್ಣು (ಬಾಕ್ಸ್)₹160, ಕಿತ್ತಳೆ ₹220, ದಾಳಿಂಬೆ ₹280, ಆಸ್ಟ್ರೇಲಿಯಾ ಸೇಬು ₹300, ರಾಯಲ್ ಗಾಲ ಸೇಬು ₹360 ರಂತೆ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.</p><p><strong>ಹೂವಿಗೆ ಭರ್ಜರಿ ಬೇಡಿಕೆ</strong></p><p>ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಕನಕಾಂಬರ, ಮಲ್ಲಿಗೆ, ಮರಳೆ, ಕಾಕಡ ಹೂವುಗಳ ಬೆಲೆಯು ಹೆಚ್ಚಳವಾಗಿದೆ. ಹಳದಿ ಮತ್ತು ಕೆಂಪು ಚೆಂಡು ಹೂವು ₹60ರಿಂದ ₹70, ಸಣ್ಣಗುಲಾಬಿ ₹300, ಸುಗಂಧರಾಜ, ಸೇವಂತಿಗೆ ₹350, ಬಟನ್ಸ್, ಬಿಳಿ ಸೇವಂತಿಗೆ ₹400, ಗಣಗಲೆ ₹450, ಕಲ್ಕತ್ತಾ ಮಲ್ಲಿಗೆ ₹600, ಕಾಕಡ ₹1000, ಮರಳೆ ₹1500, ಮಲ್ಲಿಗೆ ₹2,000, ಕನಕಾಂಬರ ₹2,500ರಂತೆ ಕೆ.ಜಿ.ಗೆ ಮಾರಾಟವಾದವು.</p><p>ತುಳಸಿ ₹50, ಹಳದಿ ಮತ್ತು ಕೆಂಪು ಚೆಂಡು ಹೂವು ₹80, ಸೇವಂತಿಗೆ, ಗಣಗಲೆ ₹100, ಬಟನ್ಸ್, ಬಿಳಿಸೇವಂತಿಗೆ, ಕಾಕಡ. ಮರಳೆ ₹150, ಕನಕಾಂಬರ ₹200, ಮಲ್ಲಿಗೆ ₹300ರಂತೆ ಪ್ರತಿ ಮಾರಿಗೆ ಮಾರಾಟವಾದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>