ಗುತ್ತಿಗೆ ಕರಾರು ವೇಳೆ ಆಡಳಿತ ಮಂಡಳಿಯು ಕಾರ್ಖಾನೆಗೆ ಮುಂಗಡವಾಗಿ ₹ 20 ಕೋಟಿ ಹಣ ಪವಾತಿಸಬೇಕಾಗಿತ್ತು, ಭದ್ರತಾ ಠೇವಣಿಯಾಗಿ ₹ 5 ಕೋಟಿ ಇಡಬೇಕಾಗಿತ್ತು. ಈ ಹಣದಿಂದ 2017ರಿಂದ ನೌಕರರ ಬಾಕಿ ವೇತನ, ಭವಿಷ್ಯ ನಿಧಿ ಪಾವತಿ ಹಾಗೂ ಕಾರ್ಖಾನೆಯ ಸಾಲ ತೀರಿಸಬೇಕಾಗಿತ್ತು. ಗುತ್ತಿಗೆ ಪಡೆದು ವರ್ಷ ಕಳೆದರೂ ಮುಂಗಡ ಹಣ, ಠೇವಣಿ ಹಣ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ.