<p><strong>ಮಂಡ್ಯ: </strong>‘ಕೋವಿಡ್– 19ನಿಂದ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್ ಹುಸೇನ್ ಸಿದ್ದಿಕಿ ಹಾಗೂ ನಾಗಮಂಗಲ ಮಹಿಳೆ ಒಂದೇ ವಿಮಾನದಲ್ಲಿ ಪ್ರಮಾಣ ಮಾಡಿಲ್ಲ. ಟಿಕೆಟ್ ಹಾಗೂ ಇತರ ದಾಖಲಾತಿ ಪರಿಶೀಲನೆಯ ನಂತರ ಸತ್ಯ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಂಗಳವಾರ ಸ್ಪಷ್ಟಪಡಿಸಿದರು.</p>.<p>‘ಮಹಿಳೆ ಹಾಗೂ ಆಕೆಯ ಕುಟುಂಬದ ಇತರ ಆರು ಮಂದಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ್ದರು. ಸಿದ್ದಿಕಿ ಫೆ.29ರಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆದರೆ ಆ ವಿಮಾನದಲ್ಲಿ ನಾಗಮಂಗಲದ ಮಹಿಳೆ ಇರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಫಲಿತಾಂಶ ನೆಗೆಟಿವ್: ‘ಜರ, ನೆಗಡಿ, ಕಫದಿಂದ ಬಳಲುತ್ತಿದ್ದ ನಾಗಮಂಗಲ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರ ಮಾದರಿ ಫಲಿತಾಂಶ ಬಂದಿದ್ದು ಕೋವಿಡ್ 19 ಪತ್ತೆಯಾಗಿಲ್ಲ, ನೆಗೆಟಿವ್ ವರದಿ ಬಂದಿದೆ. ವಿದೇಶದಿಂದ ಬಂದಿರುವ ಜಿಲ್ಲೆಯ 30 ಮಂದಿಯ ಮೇಲೆ ನಿಗಾ ವಹಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>‘ಕೋವಿಡ್– 19ನಿಂದ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್ ಹುಸೇನ್ ಸಿದ್ದಿಕಿ ಹಾಗೂ ನಾಗಮಂಗಲ ಮಹಿಳೆ ಒಂದೇ ವಿಮಾನದಲ್ಲಿ ಪ್ರಮಾಣ ಮಾಡಿಲ್ಲ. ಟಿಕೆಟ್ ಹಾಗೂ ಇತರ ದಾಖಲಾತಿ ಪರಿಶೀಲನೆಯ ನಂತರ ಸತ್ಯ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಂಗಳವಾರ ಸ್ಪಷ್ಟಪಡಿಸಿದರು.</p>.<p>‘ಮಹಿಳೆ ಹಾಗೂ ಆಕೆಯ ಕುಟುಂಬದ ಇತರ ಆರು ಮಂದಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ್ದರು. ಸಿದ್ದಿಕಿ ಫೆ.29ರಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆದರೆ ಆ ವಿಮಾನದಲ್ಲಿ ನಾಗಮಂಗಲದ ಮಹಿಳೆ ಇರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಫಲಿತಾಂಶ ನೆಗೆಟಿವ್: ‘ಜರ, ನೆಗಡಿ, ಕಫದಿಂದ ಬಳಲುತ್ತಿದ್ದ ನಾಗಮಂಗಲ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರ ಮಾದರಿ ಫಲಿತಾಂಶ ಬಂದಿದ್ದು ಕೋವಿಡ್ 19 ಪತ್ತೆಯಾಗಿಲ್ಲ, ನೆಗೆಟಿವ್ ವರದಿ ಬಂದಿದೆ. ವಿದೇಶದಿಂದ ಬಂದಿರುವ ಜಿಲ್ಲೆಯ 30 ಮಂದಿಯ ಮೇಲೆ ನಿಗಾ ವಹಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>