ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ಸಿದ್ದಿಕಿ ಜೊತೆ ಮಹಿಳೆ ಪ್ರಯಾಣ ಮಾಡಿಲ್ಲ: ಜಿಲ್ಲಾಧಿಕಾರಿ

Last Updated 17 ಮಾರ್ಚ್ 2020, 12:59 IST
ಅಕ್ಷರ ಗಾತ್ರ

ಮಂಡ್ಯ: ‘ಕೋವಿಡ್‌– 19ನಿಂದ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್‌ ಹುಸೇನ್‌ ಸಿದ್ದಿಕಿ ಹಾಗೂ ನಾಗಮಂಗಲ ಮಹಿಳೆ ಒಂದೇ ವಿಮಾನದಲ್ಲಿ ಪ್ರಮಾಣ ಮಾಡಿಲ್ಲ. ಟಿಕೆಟ್‌ ಹಾಗೂ ಇತರ ದಾಖಲಾತಿ ಪರಿಶೀಲನೆಯ ನಂತರ ಸತ್ಯ ಗೊತ್ತಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಂಗಳವಾರ ಸ್ಪಷ್ಟಪಡಿಸಿದರು.

‘ಮಹಿಳೆ ಹಾಗೂ ಆಕೆಯ ಕುಟುಂಬದ ಇತರ ಆರು ಮಂದಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ್ದರು. ಸಿದ್ದಿಕಿ ಫೆ.29ರಂದು ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆದರೆ ಆ ವಿಮಾನದಲ್ಲಿ ನಾಗಮಂಗಲದ ಮಹಿಳೆ ಇರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ ನೆಗೆಟಿವ್‌: ‘ಜರ, ನೆಗಡಿ, ಕಫದಿಂದ ಬಳಲುತ್ತಿದ್ದ ನಾಗಮಂಗಲ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಬ್ಬರ ಮಾದರಿ ಫಲಿತಾಂಶ ಬಂದಿದ್ದು ಕೋವಿಡ್‌ 19 ಪತ್ತೆಯಾಗಿಲ್ಲ, ನೆಗೆಟಿವ್‌ ವರದಿ ಬಂದಿದೆ. ವಿದೇಶದಿಂದ ಬಂದಿರುವ ಜಿಲ್ಲೆಯ 30 ಮಂದಿಯ ಮೇಲೆ ನಿಗಾ ವಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT