ಕೆ.ಹೊನ್ನಲಗೆರೆ ಮಾರ್ಗವಾಗಿ ವಿವಿಧ ಹಳ್ಳಿಗಳಲ್ಲಿ ಯಶ್ ಪ್ರಚಾರ ನಡೆಸಿ ಚಂದೂಪುರಕ್ಕೆ ಬಂದರು. ಗ್ರಾಮದ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು. ಸುಮಲತಾ ಪರ ಭಾರಿ ಸಂಖ್ಯೆಯ ಬೆಂಬಲಿಗರು ಸೇರಿದದ್ದರು. ಯಶ್ ಭಾಷಣ ಆರಂಭಿಸುತ್ತಿದ್ದಂತೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗ, ಕೆ.ಹಾಗಲಹಳ್ಳಿ ಗ್ರಾಮದ ಸ್ವಾಮಿ ‘ದೇವೇಗೌಡರ ಕುಟುಂಬ ಕುರಿತು ಏನನ್ನೂ ಮಾತನಾಡಬೇಡಿ’ ಎಂದು ಕೂಗಿದರು.