ಈ ಸಂಪರ್ಕ ಸಾಧನದಿಂದ ಶಿರಸಿ, ಬನವಾಸಿ ಮತ್ತು ಕೊಲ್ಲೂರು ಯಾತ್ರಾ ಸ್ಥಳಗಳ ಜೊತೆಗೆ ಹುಬ್ಬಳ್ಳಿಯಿಂದ ದಕ್ಷಿಣ ಕನ್ನಡ ಸಂಪರ್ಕ ಮಾರ್ಗ ತುಂಬಾ ಹತ್ತಿರವಾಗುತ್ತಿದೆ. ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದಲ್ಲಿ ಬರುವ ಇಲ್ಲಿನ ಮಾರ್ಗದ ಬಗ್ಗೆ ವನ್ಯಜೀವಿ ಅಭಯಾರಣ್ಯ ಇಲಾಖೆಯವರು ಆರಂಭದಲ್ಲಿ ತಕರಾರು ಸಲ್ಲಿಸಿದ್ದರೂ ಪ್ರಸಕ್ತ ಘಟ್ಟದಲ್ಲಿ ಸಹಕಾರ ನೀಡುತ್ತಿರುವುದರಿಂದ ಈ ಹಾದಿ ಸುಗುಮವಾಗಿ ಸಾಗುತ್ತಿದೆ.