<p><strong>ಮೈಸೂರು:</strong> ನಗರ ಅಪರಾಧ ದಾಖಲಾತಿ ಘಟಕದ (ಸಿಸಿಆರ್ಬಿ) ಹೆಡ್ಕಾನ್ಸ್ಟೆಬಲ್ ವನಜಾಕ್ಷಿ ಅವರ ನಿವಾಸದಲ್ಲಿ ಸೋಮವಾರ ರಾತ್ರಿ 2 ಕೆ.ಜಿ ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.</p>.<p>ವನಜಾಕ್ಷಿ ಅವರು ತಮ್ಮ ಪತಿ ಉದ್ಯಮಿ ವಿಜಯಕುಮಾರ್ ಅವರೊಂದಿಗೆ ತಮ್ಮ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ 15 ವರ್ಷದ ಪುತ್ರಿ ಒಬ್ಬರೇ ಮಲಗಿದ್ದರು. ರಾತ್ರಿ 3 ಗಂಟೆಗೆ ವಾಪಸ್ ಬಂದು ನೋಡುವಾಗ ತಮ್ಮ ರೂಮಿನಲ್ಲಿದ್ದ ಡ್ರಾಯರ್ ಮತ್ತು ಲಾಕರ್ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ನಂತರ, ಪರಿಶೀಲನೆ ನಡೆಸಿದಾಗ ಬಾಲ್ಕನಿಯ ಬಾಗಿಲನ್ನು ಹೊರಗಿಂದ ಚಿಲಕ ಹಾಕಿರುವುದು ಗೊತ್ತಾಗಿದೆ.</p>.<p>ಆದರೆ, ಕಳ್ಳರು ಮನೆಯನ್ನು ಪ್ರವೇಶಿಸಿದ್ದು ಹೇಗೆ, ಒಳಗಿನಿಂದ ಚಿಲಕ ಹಾಕಿದ್ದ ಬಾಗಿಲನ್ನು ತೆರೆದಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳೂ ನಿಗೂಢವಾಗಿಯೇ ಉಳಿದಿವೆ.</p>.<p>ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ಬಂದು ಪರಿಶೀಲನೆ ನಡೆಸಿದರೂ, ಯಾವುದೇ ಸುಳಿವು ದೊರೆಯಲಿಲ್ಲ. ರಾತ್ರಿ ಸುರಿಯುತ್ತಿದ್ದ ಭಾರಿ ಮಳೆಯ ವೇಳೆ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.</p>.<p>ಮನೆ ದುರಸ್ತಿ ಕಾರ್ಯ ನಡೆಯುತ್ತಿದ್ದುದ್ದರಿಂದ ಸಂಬಂಧಿಕರು ಅರ್ಧ ಕೆ.ಜಿ ಚಿನ್ನಾಭರಣವನ್ನು ಇಟ್ಟಿರುವಂತೆ ನೀಡಿದ್ದು, ಅದೂ ಕಳವಾಗಿರುವ ಆಭರಣಗಳಲ್ಲಿ ಸೇರಿದೆ. ಇತ್ತೀಚೆಗಷ್ಟೇ ವಿಜಯಕುಮಾರ್ ಅವರು ಬ್ಯಾಂಕಿನ ಲಾಕರ್ನಲ್ಲಿ ಇಟ್ಟಿದ್ದ ಚಿನ್ನವನ್ನು ಮನೆಗೆ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ಗೌಡ, ಗೀತಾ, ಕೆ.ಆರ್.ವಿಭಾಗದ ಎಸಿಪಿ ಪೂರ್ಣಚಂದ್ರ, ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ವಿಜಯ್ ಕುಮಾರ್, ಸಬ್ಇನ್ಸ್ಪೆಕ್ಟರ್ ಭವ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರ ಅಪರಾಧ ದಾಖಲಾತಿ ಘಟಕದ (ಸಿಸಿಆರ್ಬಿ) ಹೆಡ್ಕಾನ್ಸ್ಟೆಬಲ್ ವನಜಾಕ್ಷಿ ಅವರ ನಿವಾಸದಲ್ಲಿ ಸೋಮವಾರ ರಾತ್ರಿ 2 ಕೆ.ಜಿ ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.</p>.<p>ವನಜಾಕ್ಷಿ ಅವರು ತಮ್ಮ ಪತಿ ಉದ್ಯಮಿ ವಿಜಯಕುಮಾರ್ ಅವರೊಂದಿಗೆ ತಮ್ಮ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ರಾತ್ರಿ 10 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ 15 ವರ್ಷದ ಪುತ್ರಿ ಒಬ್ಬರೇ ಮಲಗಿದ್ದರು. ರಾತ್ರಿ 3 ಗಂಟೆಗೆ ವಾಪಸ್ ಬಂದು ನೋಡುವಾಗ ತಮ್ಮ ರೂಮಿನಲ್ಲಿದ್ದ ಡ್ರಾಯರ್ ಮತ್ತು ಲಾಕರ್ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು. ನಂತರ, ಪರಿಶೀಲನೆ ನಡೆಸಿದಾಗ ಬಾಲ್ಕನಿಯ ಬಾಗಿಲನ್ನು ಹೊರಗಿಂದ ಚಿಲಕ ಹಾಕಿರುವುದು ಗೊತ್ತಾಗಿದೆ.</p>.<p>ಆದರೆ, ಕಳ್ಳರು ಮನೆಯನ್ನು ಪ್ರವೇಶಿಸಿದ್ದು ಹೇಗೆ, ಒಳಗಿನಿಂದ ಚಿಲಕ ಹಾಕಿದ್ದ ಬಾಗಿಲನ್ನು ತೆರೆದಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳೂ ನಿಗೂಢವಾಗಿಯೇ ಉಳಿದಿವೆ.</p>.<p>ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ಬಂದು ಪರಿಶೀಲನೆ ನಡೆಸಿದರೂ, ಯಾವುದೇ ಸುಳಿವು ದೊರೆಯಲಿಲ್ಲ. ರಾತ್ರಿ ಸುರಿಯುತ್ತಿದ್ದ ಭಾರಿ ಮಳೆಯ ವೇಳೆ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.</p>.<p>ಮನೆ ದುರಸ್ತಿ ಕಾರ್ಯ ನಡೆಯುತ್ತಿದ್ದುದ್ದರಿಂದ ಸಂಬಂಧಿಕರು ಅರ್ಧ ಕೆ.ಜಿ ಚಿನ್ನಾಭರಣವನ್ನು ಇಟ್ಟಿರುವಂತೆ ನೀಡಿದ್ದು, ಅದೂ ಕಳವಾಗಿರುವ ಆಭರಣಗಳಲ್ಲಿ ಸೇರಿದೆ. ಇತ್ತೀಚೆಗಷ್ಟೇ ವಿಜಯಕುಮಾರ್ ಅವರು ಬ್ಯಾಂಕಿನ ಲಾಕರ್ನಲ್ಲಿ ಇಟ್ಟಿದ್ದ ಚಿನ್ನವನ್ನು ಮನೆಗೆ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ಗೌಡ, ಗೀತಾ, ಕೆ.ಆರ್.ವಿಭಾಗದ ಎಸಿಪಿ ಪೂರ್ಣಚಂದ್ರ, ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ವಿಜಯ್ ಕುಮಾರ್, ಸಬ್ಇನ್ಸ್ಪೆಕ್ಟರ್ ಭವ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>