ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು; ಅರ್ಧಗಂಟೆ ನಿಂತ ಗರ್ಭಿಣಿ ಇದ್ದ ಆಂಬುಲೆನ್ಸ್

Last Updated 19 ಜನವರಿ 2022, 14:56 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಚಕ್ರಗಳಿಗೆ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಅರ್ಧಗಂಟೆಗೂ ಹೆಚ್ಚು ಕಾಲ, ರಸ್ತೆಯಲ್ಲಿಯೇ ನಿಂತಿತು. ಇದರಿಂದ ಆಂಬುಲೆನ್ಸ್‌ನಲ್ಲಿದ್ದ ತರದೆಲೆ ಗ್ರಾಮದ ಗರ್ಭಿಣಿ ಪ್ರೇಮಾ ಹೆರಿಗೆ ನೋವಿನಿಂದ ಬಳಲಿದರು.

ಹುರುಳಿ ಸೊಪ್ಪು ಚಕ್ರಗಳಿಗೆ ಸಿಲುಕಿದ್ದರಿಂದ ವಾಹನ ಚಲಿಸಲಾಗದೇ ಚಾಲಕ ಸೊಪ್ಪನ್ನು ಬಿಡಿಸುವುದರಲ್ಲಿ ನಿರತರಾದರು. ಇವರ ಜತೆಗೆ ಸುತ್ತಮುತ್ತಲಿದ್ದ ರೈತರೂ ಸಹಕರಿಸಿದರು. ನಂತರ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ವಾರವಷ್ಟೇ ತಾಲ್ಲೂಕಿನ ದೇವನೂರು– ಬದನವಾಳು ಮಾರ್ಗದಲ್ಲಿ ಹುರುಳಿಸೊಪ್ಪು ಸಿಲುಕಿ ಓಮ್ನಿ ಕಾರು ಭಸ್ಮಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT