ಶ್ರೀರಾಮ ಸೀತಾಮಾತೆ ಜತೆ ವನವಾಸ ಮಾಡಿರುವ ಕುರುಹು ಇರುವ ಚುಂಚನಕಟ್ಟೆ ಗ್ರಾಮದಲ್ಲಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ವಿಶೇಷ ಸ್ಥಳ ಎಂದರೆ ‘ಧನುಷ್ಕೋಟಿ ಜಲಪಾತ’. ವನವಾಸದ ದಿನಗಳಲ್ಲಿ ಸೀತಾಮಾತೆ ನೀರು ಬೇಕು ಎಂದಾಗ ಶ್ರೀರಾಮ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ‘ಧನುಷ್ಕೋಟಿ’ ಎಂದು ಕರೆಯುತ್ತಾರೆ. ಇಲ್ಲಿ ಧುಮ್ಮಿಕ್ಕುವ ಕಾವೇರಿ ಅರಿಶಿಣ, ಸೀಗೆ ಮಿಶ್ರಿತ ಬಣ್ಣದಿಂದ ಕಾಣುವ ಜತೆಗೆ ಹಾಲಿನಂತೆ ನೊರೆಯಾಗಿ ಬೀಳುವುದನ್ನು ನೋಡುವುದೇ ಒಂದು ಸೊಬಗು.