‘ಧೃತರಾಷ್ಟ್ರನಿಗೆ ವಿದುರ ಹೇಳಿದಂತೆ, ನಾನು ಯಡಿಯೂರಪ್ಪನಿಗೆ ಪುತ್ರ ವ್ಯಾಮೋಹ ಬಿಡಿ ಎಂದೇಳಿರುವೆ. ಶಕುನಿಗಳನ್ನು, ಮೆಚ್ಚಿಸುವವರ ಮಾತು ನಂಬಬೇಡಿ ಎಂದಿದ್ದೇನೆ. ಖಡಕ್ ಆಗಿ ಅಧಿಕಾರ ನಡೆಸಿ ಎನ್ನುವುದೇ ತಪ್ಪಾ? ಮೈಸೂರು–ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಾಯಿ ಮುಚ್ಚಿಕೊಂಡು ನಿಮ್ಮ ಕೆಲಸ ಮಾಡಿ ಎಂದು ಹೇಳುವ ಅಧಿಕಾರವೂ ಸಿಎಂಗಿಲ್ಲವಾ?’ ಎಂದು ವಿಶ್ವನಾಥ್ ಮತ್ತೊಮ್ಮೆ ಚಾಟಿ ಬೀಸಿದರು.