<p><strong>ಮೈಸೂರು</strong>: ‘ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ... ಶಾಲೆ ಕೆಡವಿ ಸ್ಮಾರಕ ನಿರ್ಮಿಸುವ ಸಂಚನ್ನು ಆಶ್ರಮ ಹಿಂಪಡೆಯಲಿ... ಆಶ್ರಮದ ವ್ಯಾಪ್ತಿಗೆ ಸೇರಿರುವ 60 ಎಕರೆ ಭೂಮಿಯಲ್ಲೇ ವಿವೇಕಾನಂದರ ಸ್ಮಾರಕ ನಿರ್ಮಿಸಲಿ...’</p>.<p>ಮಹಾರಾಣಿ ಮಾದರಿ (ಎನ್ಟಿಎಂ) ಶಾಲೆ ಉಳಿಸಿ ಒಕ್ಕೂಟದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು. ಪ್ರತಿಭಟನಕಾರರು ಆಶ್ರಮದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು.</p>.<p>ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಸಂಚಾಲಕ ಪಾ.ತಿ.ಕೃಷ್ಣೇಗೌಡ ಮಾತನಾಡಿ, ‘ಆಂಗ್ಲರ ಆಡಳಿತದಲ್ಲೇ ಕನ್ನಡ ಶಿಕ್ಷಣಕ್ಕೆ ಮಾನ್ಯತೆಯಿತ್ತು. 1831ರಲ್ಲಿ ವಾಲ್ಟರ್ ಎಂಬ ಆಂಗ್ಲ ಅಧಿಕಾರಿ ಧಾರವಾಡದಲ್ಲಿ ಕನ್ನಡ ಶಾಲೆ ತೆರೆಯುತ್ತಾನೆ. ಆ ಶಾಲೆ ಇಂದಿಗೂ ಕನ್ನಡ ಶಾಲೆಯಾಗಿಯೇ ಇದೆ. ಆಂಗ್ಲರಿಗೆ ಕನ್ನಡದ ಒಲವು ಇತ್ತೆಂದರೇ, ಕನ್ನಡನಾಡಿನಲ್ಲಿರುವವರಿಗೆ ಕನ್ನಡ ಶಾಲೆಯ ಮೇಲೆ ಏಕೆ ಒಲವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಕನ್ನಡ ಶಾಲೆಯನ್ನು ಕೆಡವಿ, ಸ್ಮಾರಕ ನಿರ್ಮಿಸಿ ಎನ್ನುವವರು ಕನ್ನಡ ದ್ರೋಹಿಗಳು. ಇಂತಹವರು ಕ್ಷಮೆಗೆ ಆರ್ಹರಲ್ಲ. ಹಾ.ಮಾ.ನಾಯಕರಂತಹ ಕನ್ನಡಿಗರಿದ್ದರೆ, ಈ ಹೋರಾಟಕ್ಕಾಗಿ ಬೀದಿಗಿಳಿಯುತ್ತಿದ್ದರು’ ಎಂದರು.</p>.<p>ಶಾಲೆ ಉಳಿಸಿ ಒಕ್ಕೂಟದ ಸದಸ್ಯೆ ಯಮುನಾ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಮೈಲಳ್ಳಿ ರೇವಣ್ಣ, ಕಮಲಮ್ಮ, ರಂಗನಾಥ್, ಶಿವಕುಮಾರ್, ಡಾ.ಪಿ.ಗೌರೀಶ್, ಗೋಪಿನಾಥ್, ಶ್ರೀನಿವಾಸ್, ನಿಂಗರಾಜು ಚಿತ್ತಣ್ಣನವರ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಶಾಲೆಯೂ ಉಳಿಯಲಿ, ಸ್ಮಾರಕವೂ ಆಗಲಿ... ಶಾಲೆ ಕೆಡವಿ ಸ್ಮಾರಕ ನಿರ್ಮಿಸುವ ಸಂಚನ್ನು ಆಶ್ರಮ ಹಿಂಪಡೆಯಲಿ... ಆಶ್ರಮದ ವ್ಯಾಪ್ತಿಗೆ ಸೇರಿರುವ 60 ಎಕರೆ ಭೂಮಿಯಲ್ಲೇ ವಿವೇಕಾನಂದರ ಸ್ಮಾರಕ ನಿರ್ಮಿಸಲಿ...’</p>.<p>ಮಹಾರಾಣಿ ಮಾದರಿ (ಎನ್ಟಿಎಂ) ಶಾಲೆ ಉಳಿಸಿ ಒಕ್ಕೂಟದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು. ಪ್ರತಿಭಟನಕಾರರು ಆಶ್ರಮದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು.</p>.<p>ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಸಂಚಾಲಕ ಪಾ.ತಿ.ಕೃಷ್ಣೇಗೌಡ ಮಾತನಾಡಿ, ‘ಆಂಗ್ಲರ ಆಡಳಿತದಲ್ಲೇ ಕನ್ನಡ ಶಿಕ್ಷಣಕ್ಕೆ ಮಾನ್ಯತೆಯಿತ್ತು. 1831ರಲ್ಲಿ ವಾಲ್ಟರ್ ಎಂಬ ಆಂಗ್ಲ ಅಧಿಕಾರಿ ಧಾರವಾಡದಲ್ಲಿ ಕನ್ನಡ ಶಾಲೆ ತೆರೆಯುತ್ತಾನೆ. ಆ ಶಾಲೆ ಇಂದಿಗೂ ಕನ್ನಡ ಶಾಲೆಯಾಗಿಯೇ ಇದೆ. ಆಂಗ್ಲರಿಗೆ ಕನ್ನಡದ ಒಲವು ಇತ್ತೆಂದರೇ, ಕನ್ನಡನಾಡಿನಲ್ಲಿರುವವರಿಗೆ ಕನ್ನಡ ಶಾಲೆಯ ಮೇಲೆ ಏಕೆ ಒಲವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಕನ್ನಡ ಶಾಲೆಯನ್ನು ಕೆಡವಿ, ಸ್ಮಾರಕ ನಿರ್ಮಿಸಿ ಎನ್ನುವವರು ಕನ್ನಡ ದ್ರೋಹಿಗಳು. ಇಂತಹವರು ಕ್ಷಮೆಗೆ ಆರ್ಹರಲ್ಲ. ಹಾ.ಮಾ.ನಾಯಕರಂತಹ ಕನ್ನಡಿಗರಿದ್ದರೆ, ಈ ಹೋರಾಟಕ್ಕಾಗಿ ಬೀದಿಗಿಳಿಯುತ್ತಿದ್ದರು’ ಎಂದರು.</p>.<p>ಶಾಲೆ ಉಳಿಸಿ ಒಕ್ಕೂಟದ ಸದಸ್ಯೆ ಯಮುನಾ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆ ಗೆಳೆಯರ ಬಳಗದ ಮೈಲಳ್ಳಿ ರೇವಣ್ಣ, ಕಮಲಮ್ಮ, ರಂಗನಾಥ್, ಶಿವಕುಮಾರ್, ಡಾ.ಪಿ.ಗೌರೀಶ್, ಗೋಪಿನಾಥ್, ಶ್ರೀನಿವಾಸ್, ನಿಂಗರಾಜು ಚಿತ್ತಣ್ಣನವರ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>