ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್‌ಗೆ ಸನ್ಮಾನ

Last Updated 3 ನವೆಂಬರ್ 2020, 1:59 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಿಂಗ್‌ರಸ್ತೆಯಲ್ಲಿರುವ ಜಿಎಲ್‌ಎನ್‌ ಕಲಾಮಂಟಪದಲ್ಲಿ ಸೋಮವಾರ ಬೋಗಾದಿಯ ಎನ್.ರಶ್ಮಿ ಹಾಗೂ ನವೀನ್‌ ಅವರ ವಿವಾಹದಲ್ಲಿ 108 ಮಂದಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.

15 ಮಂದಿ ಪೌರಕಾರ್ಮಿಕರು, 3 ಅಂಗನವಾಡಿ ಕಾರ್ಯಕರ್ತೆಯರು, 6 ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಅಂಚೆ ಇಲಾಖೆಯ 7 ಮಂದಿ ಸಿಬ್ಬಂದಿ, 11 ಮಂದಿ ಶುಶ್ರೂಷಕರು, 26 ಮಂದಿ ವೈದ್ಯಕೀಯ ಸಿಬ್ಬಂದಿ, 32 ಮಂದಿ ಪೋಲಿಸರು, 4 ಮಂದಿ ಯೋಧರು ಹಾಗೂ 11 ಮಂದಿ ಮಾಧ್ಯಮದವರಿಗೆ ಭಗವಾನ್‌ ಬುದ್ಧನ ವಿಗ್ರಹ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಕೋಟೆ ಶಿವಣ್ಣ, ಎ.ಆರ್.ಕೃಷ್ಣಮೂರ್ತಿ, ಕೆ.ಮರೀಗೌಡ, ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT