ಇದಕ್ಕೂ ಮುನ್ನ ಅಗ್ರಹಾರದ ನೂರೊಂದು ಗಣಪತಿ ಸೇರಿದಂತೆ ಇತರೆ ದೇಗುಲಗಳನ್ನು ತೆರವುಗೊಳಿಸುವ ದಿನಾಂಕವನ್ನು ಗೊತ್ತುಪಡಿಸಿ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇಗುಲ ತೆರವಾದ ನಂತರ ಪ್ರತಿರೋಧ ಎದುರಾಯಿತು. ಸುಪ್ರೀಂಕೋರ್ಟ್ ಆದೇಶವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳದೇ ತೆರವು ಮಾಡಲಾಗುತ್ತಿದೆ ಎಂಬ ಟೀಕೆಗಳೂ ಬಂದಿದ್ದವು. ಇದರಿಂದ ಮತ್ತೊಮ್ಮೆ ಪಟ್ಟಿಯನ್ನು ಮರುಸಮೀಕ್ಷೆ ಮಾಡಲು ಪಾಲಿಕೆ ನಿರ್ಧರಿಸಿದೆ.