‘ಸುಮಾರು ಎರಡು ಸಾವಿರ ಬಾಳೆ ಗಿಡಗಳು ಕಟಾವಿಗೆ ಬಂದಿದ್ದವು. ಶುಂಠಿ 3 ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಜಮೀನಿಗೆ ಅಳವಡಿಸಿದ್ದ ಸೋಲಾರ್ ಬೇಲಿಯನ್ನು ಹಾನಿಮಾಡಿವೆ. ಪಕ್ಕದ ಜಮೀನಿನ ಗುಡಿಸಲನ್ನು ಬೀಳಿಸಿದೆ. ಆನೆಗಳನ್ನು ಓಡಿಸುವುದು ಕಷ್ಟ. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ’ ಎಂದು ರೈತ ಟಿ.ಲೋಕೇಶ್ ತಿಳಿಸಿದರು.