<p><strong>ಮೈಸೂರು: </strong>ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುತ್ತಾ ಬರುವವರ ಮೇಲೆಯೂ ದಂಡ ವಿಧಿಸಲು ಪೊಲೀಸರು ಆರಂಭಿಸಿದ್ದಾರೆ. </p>.<p>ಮಹದೇಶ್ವರ ಬಡಾವಣೆಯ ಹೈಟೆನ್ಷನ್ ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮಾಸ್ಕ್ ಧರಿಸದೇ ಉಗುಳುತ್ತ ಬರುತ್ತಿದ್ದ ಸುಭಾಷ್ ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. </p>.<p>ಕೋವಿಡ್ನಿಂದ ಮೃತಪಟ್ಟ ದೇಹದ ಅಂತಿಮ ದರ್ಶನಕ್ಕೆ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ಸೇರಿದ್ದ 30 ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.</p>.<p>ಹೆಬ್ಬಾಳದ ಹಂಪಿ ವೃತ್ತದ ಬಸ್ನಿಲ್ದಾಣದ ಬಳಿ ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಕುಳಿತಿದ್ದ ಪ್ರವೀಣ್ ಹಾಗೂ ಷಣ್ಮುಗಂ ಎಂಬುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.</p>.<p>ಇದಲ್ಲದೇ ಕೋವಿಡ್ ಮಾರ್ಗಸೂಚಿಯಂತೆ ನಿಗದಿತ ವೇಳೆಗೆ ಬಾಗಿಲು ಮುಚ್ಚದ ನಜರ್ಬಾದ್, ದೇವರಾಜ, ವಿಜಯನಗರ, ನರಸಿಂಹರಾಜ ಠಾಣಾ ವ್ಯಾಪ್ತಿಗಳಲ್ಲಿ ಹಲವು ಅಂಗಡಿಗಳ ಮೇಲೆ ಪ್ರಕರಣ ದಾಖಲಾಗಿದೆ.</p>.<p>ರಸ್ತೆಯಲ್ಲಿ ಉಗುಳುವುದು ಕೋವಿಡ್ ಪ್ರಸರಣವನ್ನು ಹೆಚ್ಚಿಸುತ್ತದೆ. ಮಾಸ್ಕ್ ಹಾಕದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕವಾಗಿ ಕುಳಿತುಕೊಳ್ಳುವುದೂ ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಜತೆಗೆ, ಕೋವಿಡ್ನಿಂದ ಮೃತಪಟ್ಟವರ ಅಂತಿಮ ದರ್ಶನಕ್ಕೆ ಜನ ಸೇರುವುದೂ ಸಹ ಉಲ್ಲಂಘನೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕೋವಿಡ್ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುವುದಕ್ಕಾಗಿಯೇ ನಿಯೋಜಿಸಲಾಗಿರುವ 3 ವಾಹನಗಳಲ್ಲಿ ಪೊಲೀಸರು ನಿತ್ಯ ಗಸ್ತು ತಿರುಗುತ್ತಿದ್ದು, ನಿಯಮ ಉಲ್ಲಂಘನೆಯ ವಿಡಿಯೊ ಮಾಡಿಕೊಳ್ಳುತ್ತಾರೆ. ನಂತರ, ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುತ್ತಾ ಬರುವವರ ಮೇಲೆಯೂ ದಂಡ ವಿಧಿಸಲು ಪೊಲೀಸರು ಆರಂಭಿಸಿದ್ದಾರೆ. </p>.<p>ಮಹದೇಶ್ವರ ಬಡಾವಣೆಯ ಹೈಟೆನ್ಷನ್ ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮಾಸ್ಕ್ ಧರಿಸದೇ ಉಗುಳುತ್ತ ಬರುತ್ತಿದ್ದ ಸುಭಾಷ್ ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. </p>.<p>ಕೋವಿಡ್ನಿಂದ ಮೃತಪಟ್ಟ ದೇಹದ ಅಂತಿಮ ದರ್ಶನಕ್ಕೆ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ಸೇರಿದ್ದ 30 ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.</p>.<p>ಹೆಬ್ಬಾಳದ ಹಂಪಿ ವೃತ್ತದ ಬಸ್ನಿಲ್ದಾಣದ ಬಳಿ ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಕುಳಿತಿದ್ದ ಪ್ರವೀಣ್ ಹಾಗೂ ಷಣ್ಮುಗಂ ಎಂಬುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.</p>.<p>ಇದಲ್ಲದೇ ಕೋವಿಡ್ ಮಾರ್ಗಸೂಚಿಯಂತೆ ನಿಗದಿತ ವೇಳೆಗೆ ಬಾಗಿಲು ಮುಚ್ಚದ ನಜರ್ಬಾದ್, ದೇವರಾಜ, ವಿಜಯನಗರ, ನರಸಿಂಹರಾಜ ಠಾಣಾ ವ್ಯಾಪ್ತಿಗಳಲ್ಲಿ ಹಲವು ಅಂಗಡಿಗಳ ಮೇಲೆ ಪ್ರಕರಣ ದಾಖಲಾಗಿದೆ.</p>.<p>ರಸ್ತೆಯಲ್ಲಿ ಉಗುಳುವುದು ಕೋವಿಡ್ ಪ್ರಸರಣವನ್ನು ಹೆಚ್ಚಿಸುತ್ತದೆ. ಮಾಸ್ಕ್ ಹಾಕದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕವಾಗಿ ಕುಳಿತುಕೊಳ್ಳುವುದೂ ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಜತೆಗೆ, ಕೋವಿಡ್ನಿಂದ ಮೃತಪಟ್ಟವರ ಅಂತಿಮ ದರ್ಶನಕ್ಕೆ ಜನ ಸೇರುವುದೂ ಸಹ ಉಲ್ಲಂಘನೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕೋವಿಡ್ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುವುದಕ್ಕಾಗಿಯೇ ನಿಯೋಜಿಸಲಾಗಿರುವ 3 ವಾಹನಗಳಲ್ಲಿ ಪೊಲೀಸರು ನಿತ್ಯ ಗಸ್ತು ತಿರುಗುತ್ತಿದ್ದು, ನಿಯಮ ಉಲ್ಲಂಘನೆಯ ವಿಡಿಯೊ ಮಾಡಿಕೊಳ್ಳುತ್ತಾರೆ. ನಂತರ, ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>