ಕಳ್ಳ ಮೀನುಗಾರರ ಉಪಟಳ: ‘ಕಬಿನಿ ಜಲಾಶಯದ ಮೀನುಗಾರಿಕೆಯನ್ನು ಟೆಂಡರ್ ಪ್ರಕ್ರಿಯೆಗೆ ಒಳಪಡಿಸಿದ ನಂತರ ಕೆಲವರು ಅಕ್ರಮವಾಗಿ ಮೀನು ಹಿಡಿಯತೊಡಗಿದರು. ಇವರಿಗೂ, ಟೆಂಡರ್ ಪಡೆದವರಿಗೂ ಹಲವು ಬಾರಿ ಸಂಘರ್ಷಗಳಾಗಿದ್ದು, ಐದು ವರ್ಷಗಳಲ್ಲಿ ಮೂರು ಕೊಲೆಗಳೂ ನಡೆದಿವೆ. ಹೀಗಾಗಿ, ಪ್ರಕರಣದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುವವರ ಪಾತ್ರವನ್ನು ನಿರಾಕರಿಸುವಂತಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆಯ ಮತ್ತೊಬ್ಬ ಅಧಿಕಾರಿ.