ಇವರ ಮನವಿ ಮೇರೆಗೆ ತಾರಕ ಹಿನ್ನೀರಿನ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಕಾರ್ಯ ಹೆಚ್ಚಿಸಿದರು. ಮೀನು ಹಿಡಿಯುವ ಬಲೆಗಳನ್ನು ಸುಟ್ಟು ಹಾಕತೊಡಗಿದರು. ಮಂಗಳವಾರ ಮೀನು ಹಿಡಿಯುತ್ತಿದ್ದ ನಾಲ್ವರು ಆದಿವಾಸಿಗಳನ್ನು ಇವರು ಹಿಡಿದು, ಶಿಬಿರಕ್ಕೆ ಕರೆದೊಯ್ಯುವಾಗ ಇಬ್ಬರು ತಪ್ಪಿಸಿಕೊಂಡು ಇನ್ನಷ್ಟು ಜನರೊಂದಿಗೆ ಶಿಬಿರದ ಮೇಲೆ ದಾಳಿ ನಡೆಸಿದರು. ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಬಂದೂಕು ಹಾಗೂ ದಾಖಲಾತಿಗಳನ್ನು ತೆಗೆದುಕೊಂಡು ಹೋದರು ಎಂದು ವಲಯ ಅರಣ್ಯಾಧಿಕಾರಿ ಸಂತೋಷ್ ತಿಳಿಸಿದ್ದಾರೆ.