ಕಾಶ್ಮೀರಕ್ಕೆ 370ನೇ ವಿಧಿಯನ್ನು ನೀಡುವ ಕುರಿತು ಅಂಬೇಡ್ಕರ್ ವಿರೋಧಿಸಿದ್ದರು. ಅವರೇ ನೀಡಿದ ಸಂವಿಧಾನದ ಅಡಿ, ಸಂಸತ್ತಿನ ಸಾರ್ವಭೌಮತ್ವದ ಅವಕಾಶದಡಿ ಕೇಂದ್ರ ಸರ್ಕಾರ ಈ ನಿಯಮಗಳನ್ನು ರದ್ದುಪಡಿಸಿತು. ಇದನ್ನು ವಿರೋಧಿಸುವುದು ಸ್ಪಷ್ಟವಾಗಿ ಅಂಬೇಡ್ಕರ್ ಅವರಿಗೆ ಮಾಡುವ ಅವಮಾನ ಎಂದು ಅವರು ಹೇಳಿದ್ದಾರೆ. ಜತೆಗೆ, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.