ಸ್ನಾತಕೋತ್ತರ ಪದವಿಯಲ್ಲಿ ಗೋಡಂಬಿ ಬೇಸಾಯ ಕುರಿತು ಪ್ರಬಂಧ ಬರೆದಿರುವ ಗ್ರೀಷ್ಮಾ ಅವರು, ‘ಸಮಗ್ರ ಬೇಸಾಯದಿಂದ ಕೃಷಿಯಲ್ಲಿ ಯಾರಿಗೂ ನಷ್ಟ ಎಂಬುದಿಲ್ಲ. ಹೈನುಗಾರಿಕೆ, ಅಣಬೆ ಬೇಸಾಯ, ಮೀನು, ಕುರಿ, ಕೋಳಿ ಸಾಕಾಣಿಕೆಯನ್ನು ರೈತರು ಕೃಷಿಯೊಂದಿಗೆ ಜೋಡಿಸಿಕೊಂಡಲ್ಲಿ ಆದಾಯ ನಿರಂತರವಾಗಿರುತ್ತದೆ’ ಎಂದು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.