<p><strong>ಮೈಸೂರು: </strong>ತೌತೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಾದ್ಯಂತ ಚೆದುರಿದಂತೆ ಸಾಧಾರಣ ಮಳೆಯಾಗಿದೆ. ಎರಡ್ಮೂರು ದಿನದಿಂದ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣವಿರುವುದು ಕೃಷಿಕ ಸಮುದಾಯದ ಖುಷಿ ಹೆಚ್ಚಿಸಿದೆ.</p>.<p>ಭರಣಿ ಮಳೆ ಧರಣಿಗೆ ಬೀಳದಿದ್ದರಿಂದ ಈ ವರ್ಷದ ಮುಂಗಾರು ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಭೂಮಿಗೆ ಬಿತ್ತಿದ್ದ ಬೀಜವು ಮೊಳಕೆಯೊಡೆದು ಚಿಗುರಿದ್ದರೂ, ಮಳೆಯಿಲ್ಲದೆ ಬಿಸಿಲ ಝಳಕ್ಕೆ ಬಾಡುತ್ತಿತ್ತು. ಇದೀಗ ಮೂರ್ನಾಲ್ಕು ದಿನದ ವಾತಾವರಣ ಕೃಷಿ ಚಿತ್ರಣವನ್ನೇ ಬದಲಿಸಿದೆ.</p>.<p>ಒಣಗುತ್ತಿದ್ದ ಚೋಟುದ್ದ ಪೈರು ಹಸಿರಿನಿಂದ ನಳನಳಿಸುತ್ತಿದೆ. ಬಿತ್ತನೆಗೆ ಸಿದ್ದ ಮಾಡಿದ್ದ ಹೊಲ–ಗದ್ದೆಗೆ, ಬೆಳೆದಿದ್ದ ಪೈರಿಗೆ ರೈತರು ಗೊಬ್ಬರ ಚೆಲ್ಲುವ ಚಟುವಟಿಕೆ ಜಿಲ್ಲೆಯಾದ್ಯಂತ ಚುರುಕಿನಿಂದ ನಡೆದಿದೆ.</p>.<p>ಕೃತ್ತಿಕಾ ಮಳೆಯ ಕೃಪೆಯಿಂದ ಖುಷಿಯಾಗಿರುವ ಕೃಷಿಕ ಸಮೂಹ, ಕೊಂಚ ವಿಳಂಬವಾದರೂ ಹತ್ತಿ, ಹೆಸರು, ಉದ್ದು, ಅಲಸಂದೆ ಬಿತ್ತನೆಗೆ ಸಿದ್ಧತೆ ನಡೆಸಿಕೊಂಡಿದೆ. ಹಲವರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ ಬಿತ್ತನೆಯತ್ತಲೂ ತಮ್ಮ ಒಲವು ತೋರುತ್ತಿದ್ದಾರೆ ಎಂಬುದು ಕೃಷಿ ಇಲಾಖೆಯ ಮೂಲಗಳಿಂದ ಖಚಿತ ಪಟ್ಟಿದೆ.</p>.<p>ಶನಿವಾರದಿಂದಲೂ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವದಿಂದ ವರ್ಷಧಾರೆಯಾಗಿದ್ದು, ಸೋಮವಾರ ದಿನವಿಡಿ ಮೋಡ ಕವಿದ ವಾತಾವರಣವಿತ್ತು. ಹಲವರು ಇದೇ ಸಮಯವನ್ನು ಹೊಲ–ಗದ್ದೆಗೆ ಗೊಬ್ಬರ ಚೆಲ್ಲಲು ಬಳಸಿಕೊಂಡಿದ್ದು ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಗೋಚರಿಸಿತು.</p>.<p>ಮಳೆ ಬಿಡುವು ನೀಡಿದರೆ ಮಂಗಳವಾರದಿಂದಲೇ ಅಸಂಖ್ಯಾತ ರೈತರು ಮೆಕ್ಕೆಜೋಳ, ಹೈಬ್ರಿಡ್ ಜೋಳ, ಹೆಸರು, ಉದ್ದು, ಅಲಸಂದೆ, ರಾಗಿ, ಸೂರ್ಯಕಾಂತಿ, ನೆಲಗಡಲೆ, ಎಳ್ಳು, ಹತ್ತಿ, ತಂಬಾಕಿನ ನಾಟಿ ನಡೆಸಲಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈಗ ಸುರಿದ ವರ್ಷಧಾರೆಗೆ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಸರಗೂರು ತಾಲ್ಲೂಕು ಸೇರಿದಂತೆ ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕಿನ ಕೆಲ ಭಾಗದಲ್ಲಿ ತಂಬಾಕು ಸಸಿ ನಾಟಿಯ ಕೆಲಸ ವೇಗ ಪಡೆದುಕೊಳ್ಳಲಿದೆ.</p>.<p>ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕು ಸೇರಿದಂತೆ ಕೆ.ಆರ್.ನಗರ, ಎಚ್.ಡಿ.ಕೋಟೆ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಹೆಸರು, ಅಲಸಂದೆ, ಉದ್ದಿನ ಫಸಲಿಗೆ ಮಳೆ ಸಹಕಾರಿಯಾಗಿದೆ.</p>.<p>ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ತಾಲ್ಲೂಕಿನಲ್ಲಿ ಈಗಾಗಲೇ ಬಿತ್ತನೆಯಾಗಿದ್ದ ಮೆಕ್ಕೆಜೋಳ, ನಂಜನಗೂಡು ಸೇರಿದಂತೆ ತಿ.ನರಸೀಪುರ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಸೂರ್ಯಕಾಂತಿ ಬೆಳೆಗೆ ಇದೀಗ ಸುರಿದ ಮಳೆ ಜೀವ ಕಳೆ ತುಂಬಿದೆ.</p>.<p>ಸಕಾಲಕ್ಕೆ ಭರಣಿ ಮಳೆ ಬಾರದಿದ್ದದ್ದು ಮುಂಗಾರು ಚಟುವಟಿಕೆಗೆ ಹಿನ್ನಡೆಯಾಗಿತ್ತು. ಇದೀಗ ಮಳೆಯಾಗಿರುವುದರಿಂದ ಬಹುತೇಕ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿಯನ್ನು ಹೆಚ್ಚಾಗಿ ಬಿತ್ತಲಿದ್ದಾರೆ ಎಂದು ಮಹಾಂತೇಶಪ್ಪ ಮಾಹಿತಿ ನೀಡಿದರು.</p>.<p class="Briefhead"><strong>ಮಂಗಳವಾರವೂ ತೌತೆ ಪ್ರಭಾವ</strong></p>.<p>ತೌತೆ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಮಂಗಳವಾರವೂ ಮುಂದುವರೆಯಲಿದೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ಮುನ್ಸೂಚನಾ ವಿಭಾಗ ತಿಳಿಸಿದೆ.</p>.<p>‘ಸಾಧಾರಣ, ಹೆಚ್ಚು ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವೂ ಹೆಚ್ಚಿರಲಿದೆ. ಗುಡುಗು, ಮಿಂಚು, ಸಿಡಿಲು ಯಾವಾಗ ಬೇಕಾದರೂ ಅಬ್ಬರಿಸಬಹುದು. ಆದ್ದರಿಂದ ರೈತರು ಹವಾಮಾನ ಮುನ್ಸೂಚನೆ ಗಮನಿಸಿ ಕೃಷಿ ಚಟುವಟಿಕೆ ನಡೆಸುವುದು ಒಳ್ಳೆಯದು’ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.</p>.<p>ಮುಂದಿನ ಐದು ದಿನದ ಹವಾಮಾನ ಮುನ್ಸೂಚನೆ ಮಂಗಳವಾರ ಪ್ರಕಟಗೊಳ್ಳಲಿದೆ.</p>.<p class="Briefhead"><strong>ಮೈಸೂರು ಜಿಲ್ಲೆಯ ಕೃಷಿ ಚಿತ್ರಣ</strong></p>.<p>3,95,774:ಹೆಕ್ಟೇರ್ನಲ್ಲಿ ಮುಂಗಾರು ಬಿತ್ತನೆಯ ಗುರಿ</p>.<p>54,205:ಹೆಕ್ಟೇರ್ನಲ್ಲಿ ಇದೂವರೆಗಿನ ಬಿತ್ತನೆ</p>.<p>7,635:ಹೆಕ್ಟೇರ್ನಲ್ಲಿ ಹೈಬ್ರಿಡ್ ಜೋಳ, ಮುಸುಕಿನ ಜೋಳ, ರಾಗಿ ಬಿತ್ತನೆ</p>.<p>18,950:ಹೆಕ್ಟೇರ್ನಲ್ಲಿ ಹೆಸರು, ಉದ್ದು, ಅಲಸಂದೆ ಬಿತ್ತನೆ</p>.<p>2621:ಹೆಕ್ಟೇರ್ನಲ್ಲಿ ಸೂರ್ಯಕಾಂತಿ, ನೆಲಗಡಲೆ, ಎಳ್ಳು ಬಿತ್ತನೆ</p>.<p>12 ಸಾವಿರ: ಹೆಕ್ಟೇರ್ನಲ್ಲಿ ತಂಬಾಕು ಸಸಿ ನಾಟಿ</p>.<p>11 ಸಾವಿರ:ಹೆಕ್ಟೇರ್ನಲ್ಲಿ ಹತ್ತಿ</p>.<p>2 ಸಾವಿರ:ಹೆಕ್ಟೇರ್ನಲ್ಲಿ ಕಬ್ಬು ನಾಟಿ, ಕೂಳೆ</p>.<p><strong>ಆಧಾರ: ಕೃಷಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ತೌತೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಾದ್ಯಂತ ಚೆದುರಿದಂತೆ ಸಾಧಾರಣ ಮಳೆಯಾಗಿದೆ. ಎರಡ್ಮೂರು ದಿನದಿಂದ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣವಿರುವುದು ಕೃಷಿಕ ಸಮುದಾಯದ ಖುಷಿ ಹೆಚ್ಚಿಸಿದೆ.</p>.<p>ಭರಣಿ ಮಳೆ ಧರಣಿಗೆ ಬೀಳದಿದ್ದರಿಂದ ಈ ವರ್ಷದ ಮುಂಗಾರು ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಭೂಮಿಗೆ ಬಿತ್ತಿದ್ದ ಬೀಜವು ಮೊಳಕೆಯೊಡೆದು ಚಿಗುರಿದ್ದರೂ, ಮಳೆಯಿಲ್ಲದೆ ಬಿಸಿಲ ಝಳಕ್ಕೆ ಬಾಡುತ್ತಿತ್ತು. ಇದೀಗ ಮೂರ್ನಾಲ್ಕು ದಿನದ ವಾತಾವರಣ ಕೃಷಿ ಚಿತ್ರಣವನ್ನೇ ಬದಲಿಸಿದೆ.</p>.<p>ಒಣಗುತ್ತಿದ್ದ ಚೋಟುದ್ದ ಪೈರು ಹಸಿರಿನಿಂದ ನಳನಳಿಸುತ್ತಿದೆ. ಬಿತ್ತನೆಗೆ ಸಿದ್ದ ಮಾಡಿದ್ದ ಹೊಲ–ಗದ್ದೆಗೆ, ಬೆಳೆದಿದ್ದ ಪೈರಿಗೆ ರೈತರು ಗೊಬ್ಬರ ಚೆಲ್ಲುವ ಚಟುವಟಿಕೆ ಜಿಲ್ಲೆಯಾದ್ಯಂತ ಚುರುಕಿನಿಂದ ನಡೆದಿದೆ.</p>.<p>ಕೃತ್ತಿಕಾ ಮಳೆಯ ಕೃಪೆಯಿಂದ ಖುಷಿಯಾಗಿರುವ ಕೃಷಿಕ ಸಮೂಹ, ಕೊಂಚ ವಿಳಂಬವಾದರೂ ಹತ್ತಿ, ಹೆಸರು, ಉದ್ದು, ಅಲಸಂದೆ ಬಿತ್ತನೆಗೆ ಸಿದ್ಧತೆ ನಡೆಸಿಕೊಂಡಿದೆ. ಹಲವರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ ಬಿತ್ತನೆಯತ್ತಲೂ ತಮ್ಮ ಒಲವು ತೋರುತ್ತಿದ್ದಾರೆ ಎಂಬುದು ಕೃಷಿ ಇಲಾಖೆಯ ಮೂಲಗಳಿಂದ ಖಚಿತ ಪಟ್ಟಿದೆ.</p>.<p>ಶನಿವಾರದಿಂದಲೂ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವದಿಂದ ವರ್ಷಧಾರೆಯಾಗಿದ್ದು, ಸೋಮವಾರ ದಿನವಿಡಿ ಮೋಡ ಕವಿದ ವಾತಾವರಣವಿತ್ತು. ಹಲವರು ಇದೇ ಸಮಯವನ್ನು ಹೊಲ–ಗದ್ದೆಗೆ ಗೊಬ್ಬರ ಚೆಲ್ಲಲು ಬಳಸಿಕೊಂಡಿದ್ದು ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಗೋಚರಿಸಿತು.</p>.<p>ಮಳೆ ಬಿಡುವು ನೀಡಿದರೆ ಮಂಗಳವಾರದಿಂದಲೇ ಅಸಂಖ್ಯಾತ ರೈತರು ಮೆಕ್ಕೆಜೋಳ, ಹೈಬ್ರಿಡ್ ಜೋಳ, ಹೆಸರು, ಉದ್ದು, ಅಲಸಂದೆ, ರಾಗಿ, ಸೂರ್ಯಕಾಂತಿ, ನೆಲಗಡಲೆ, ಎಳ್ಳು, ಹತ್ತಿ, ತಂಬಾಕಿನ ನಾಟಿ ನಡೆಸಲಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈಗ ಸುರಿದ ವರ್ಷಧಾರೆಗೆ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಸರಗೂರು ತಾಲ್ಲೂಕು ಸೇರಿದಂತೆ ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕಿನ ಕೆಲ ಭಾಗದಲ್ಲಿ ತಂಬಾಕು ಸಸಿ ನಾಟಿಯ ಕೆಲಸ ವೇಗ ಪಡೆದುಕೊಳ್ಳಲಿದೆ.</p>.<p>ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕು ಸೇರಿದಂತೆ ಕೆ.ಆರ್.ನಗರ, ಎಚ್.ಡಿ.ಕೋಟೆ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಹೆಸರು, ಅಲಸಂದೆ, ಉದ್ದಿನ ಫಸಲಿಗೆ ಮಳೆ ಸಹಕಾರಿಯಾಗಿದೆ.</p>.<p>ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ತಾಲ್ಲೂಕಿನಲ್ಲಿ ಈಗಾಗಲೇ ಬಿತ್ತನೆಯಾಗಿದ್ದ ಮೆಕ್ಕೆಜೋಳ, ನಂಜನಗೂಡು ಸೇರಿದಂತೆ ತಿ.ನರಸೀಪುರ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಸೂರ್ಯಕಾಂತಿ ಬೆಳೆಗೆ ಇದೀಗ ಸುರಿದ ಮಳೆ ಜೀವ ಕಳೆ ತುಂಬಿದೆ.</p>.<p>ಸಕಾಲಕ್ಕೆ ಭರಣಿ ಮಳೆ ಬಾರದಿದ್ದದ್ದು ಮುಂಗಾರು ಚಟುವಟಿಕೆಗೆ ಹಿನ್ನಡೆಯಾಗಿತ್ತು. ಇದೀಗ ಮಳೆಯಾಗಿರುವುದರಿಂದ ಬಹುತೇಕ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿಯನ್ನು ಹೆಚ್ಚಾಗಿ ಬಿತ್ತಲಿದ್ದಾರೆ ಎಂದು ಮಹಾಂತೇಶಪ್ಪ ಮಾಹಿತಿ ನೀಡಿದರು.</p>.<p class="Briefhead"><strong>ಮಂಗಳವಾರವೂ ತೌತೆ ಪ್ರಭಾವ</strong></p>.<p>ತೌತೆ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಮಂಗಳವಾರವೂ ಮುಂದುವರೆಯಲಿದೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ಮುನ್ಸೂಚನಾ ವಿಭಾಗ ತಿಳಿಸಿದೆ.</p>.<p>‘ಸಾಧಾರಣ, ಹೆಚ್ಚು ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವೂ ಹೆಚ್ಚಿರಲಿದೆ. ಗುಡುಗು, ಮಿಂಚು, ಸಿಡಿಲು ಯಾವಾಗ ಬೇಕಾದರೂ ಅಬ್ಬರಿಸಬಹುದು. ಆದ್ದರಿಂದ ರೈತರು ಹವಾಮಾನ ಮುನ್ಸೂಚನೆ ಗಮನಿಸಿ ಕೃಷಿ ಚಟುವಟಿಕೆ ನಡೆಸುವುದು ಒಳ್ಳೆಯದು’ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.</p>.<p>ಮುಂದಿನ ಐದು ದಿನದ ಹವಾಮಾನ ಮುನ್ಸೂಚನೆ ಮಂಗಳವಾರ ಪ್ರಕಟಗೊಳ್ಳಲಿದೆ.</p>.<p class="Briefhead"><strong>ಮೈಸೂರು ಜಿಲ್ಲೆಯ ಕೃಷಿ ಚಿತ್ರಣ</strong></p>.<p>3,95,774:ಹೆಕ್ಟೇರ್ನಲ್ಲಿ ಮುಂಗಾರು ಬಿತ್ತನೆಯ ಗುರಿ</p>.<p>54,205:ಹೆಕ್ಟೇರ್ನಲ್ಲಿ ಇದೂವರೆಗಿನ ಬಿತ್ತನೆ</p>.<p>7,635:ಹೆಕ್ಟೇರ್ನಲ್ಲಿ ಹೈಬ್ರಿಡ್ ಜೋಳ, ಮುಸುಕಿನ ಜೋಳ, ರಾಗಿ ಬಿತ್ತನೆ</p>.<p>18,950:ಹೆಕ್ಟೇರ್ನಲ್ಲಿ ಹೆಸರು, ಉದ್ದು, ಅಲಸಂದೆ ಬಿತ್ತನೆ</p>.<p>2621:ಹೆಕ್ಟೇರ್ನಲ್ಲಿ ಸೂರ್ಯಕಾಂತಿ, ನೆಲಗಡಲೆ, ಎಳ್ಳು ಬಿತ್ತನೆ</p>.<p>12 ಸಾವಿರ: ಹೆಕ್ಟೇರ್ನಲ್ಲಿ ತಂಬಾಕು ಸಸಿ ನಾಟಿ</p>.<p>11 ಸಾವಿರ:ಹೆಕ್ಟೇರ್ನಲ್ಲಿ ಹತ್ತಿ</p>.<p>2 ಸಾವಿರ:ಹೆಕ್ಟೇರ್ನಲ್ಲಿ ಕಬ್ಬು ನಾಟಿ, ಕೂಳೆ</p>.<p><strong>ಆಧಾರ: ಕೃಷಿ ಇಲಾಖೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>