<p><strong>ಮೈಸೂರು:</strong> ಸಾಹಿತ್ಯ ವಿಮರ್ಶೆ ಈಗಾಗಲೇ ಹಳಿ ತಪ್ಪಿದೆ ಎಂದು ಮೈಸೂರು ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಬುಧವಾರ ಇಲ್ಲಿ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ತಮ್ಮದೇ ಆದ ಧೋರಣೆಯಲ್ಲಿ, ರಾಜಕೀಯ ಸಿದ್ಧಾಂತದಡಿಯಲ್ಲಿ ವಿಮರ್ಶೆ ನಡೆಸುವುದು ಒಂದು ರೀತಿಯಲ್ಲಿ ‘ಸೂಸೈಡ್’ ಎಂದು ವ್ಯಾಖ್ಯಾನಿಸಿದ ಅವರು, ಈಗ ವಿಮರ್ಶಕರೇ ಇಲ್ಲ. ಏನಿದ್ದರೂ ಇದು ಚಿಂತಕರು, ಸಂಸ್ಕೃತಿ ಚಿಂತಕರ ಕಾಲ ಎಂದು ಹರಿಹಾಯ್ದರು.</p>.<p>ಕಾವ್ಯವೇ ಇಲ್ಲದೇ ತಮ್ಮದೇ ಭ್ರಮಾತ್ಮಕ ಪ್ರಪಂಚದಲ್ಲಿ ಮೌಲ್ಯವೊಂದನ್ನು ಸೃಷ್ಟಿಸಿಕೊಂಡು ವಿಮರ್ಶೆ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.</p>.<p>ವಿಮರ್ಶೆಯು ಯಾವಾಗಲೂ ಕಾವ್ಯದಲ್ಲಿರುವ ಒಳನೋಟಗಳನ್ನು ಹೇಳುವಂತಿರಬೇಕು, ಭಾಷೆ ಪೆಡುಸಾಗಿರಬಾರದು, ಶಿಕ್ಷಿತನಲ್ಲದ ಓದುಗನಿಗೂ, ಸೃಜನಶೀಲ ಕ್ರಿಯೆಯಲ್ಲಿ ಆಗತಾನೆ ತೊಡಗಿದವರಿಗೂ ಅರ್ಥವಾಗುವಂತಿಬೇಕು ಎಂದು ಹೇಳಿದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ‘ಅಕಾಡೆಮಿಯ ಅಧ್ಯಕ್ಷನಾದ ಮೇಲೆ ನಾನೆಷ್ಟು ಸಣ್ಣವನು ಎಂಬುದು ಗೊತ್ತಾಯಿತು. ದೊಡ್ಡವನಾಗುವ ಪ್ರಯತ್ನವನ್ನು ನಡೆಸುತ್ತೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸಾಹಿತ್ಯ ವಿಮರ್ಶೆ ಈಗಾಗಲೇ ಹಳಿ ತಪ್ಪಿದೆ ಎಂದು ಮೈಸೂರು ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಬೇಸರ ವ್ಯಕ್ತಪಡಿಸಿದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಬುಧವಾರ ಇಲ್ಲಿ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ತಮ್ಮದೇ ಆದ ಧೋರಣೆಯಲ್ಲಿ, ರಾಜಕೀಯ ಸಿದ್ಧಾಂತದಡಿಯಲ್ಲಿ ವಿಮರ್ಶೆ ನಡೆಸುವುದು ಒಂದು ರೀತಿಯಲ್ಲಿ ‘ಸೂಸೈಡ್’ ಎಂದು ವ್ಯಾಖ್ಯಾನಿಸಿದ ಅವರು, ಈಗ ವಿಮರ್ಶಕರೇ ಇಲ್ಲ. ಏನಿದ್ದರೂ ಇದು ಚಿಂತಕರು, ಸಂಸ್ಕೃತಿ ಚಿಂತಕರ ಕಾಲ ಎಂದು ಹರಿಹಾಯ್ದರು.</p>.<p>ಕಾವ್ಯವೇ ಇಲ್ಲದೇ ತಮ್ಮದೇ ಭ್ರಮಾತ್ಮಕ ಪ್ರಪಂಚದಲ್ಲಿ ಮೌಲ್ಯವೊಂದನ್ನು ಸೃಷ್ಟಿಸಿಕೊಂಡು ವಿಮರ್ಶೆ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.</p>.<p>ವಿಮರ್ಶೆಯು ಯಾವಾಗಲೂ ಕಾವ್ಯದಲ್ಲಿರುವ ಒಳನೋಟಗಳನ್ನು ಹೇಳುವಂತಿರಬೇಕು, ಭಾಷೆ ಪೆಡುಸಾಗಿರಬಾರದು, ಶಿಕ್ಷಿತನಲ್ಲದ ಓದುಗನಿಗೂ, ಸೃಜನಶೀಲ ಕ್ರಿಯೆಯಲ್ಲಿ ಆಗತಾನೆ ತೊಡಗಿದವರಿಗೂ ಅರ್ಥವಾಗುವಂತಿಬೇಕು ಎಂದು ಹೇಳಿದರು.</p>.<p>ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ‘ಅಕಾಡೆಮಿಯ ಅಧ್ಯಕ್ಷನಾದ ಮೇಲೆ ನಾನೆಷ್ಟು ಸಣ್ಣವನು ಎಂಬುದು ಗೊತ್ತಾಯಿತು. ದೊಡ್ಡವನಾಗುವ ಪ್ರಯತ್ನವನ್ನು ನಡೆಸುತ್ತೇನೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>