ಮೈಸೂರು: ‘ಒಕ್ಕಲಿಗ ಸಮುದಾಯವನ್ನು ಎಚ್.ಡಿ.ಕುಮಾರಸ್ವಾಮಿ ಗುತ್ತಿಗೆಗೆ ಪಡೆದಿದ್ದಾರೆದ್ದಾರೆಯೇ? ಒಕ್ಕಲಿಗರಲ್ಲಿಬೇರೆ ಮುಖಂಡರು ಬೆಳೆಯಲು ಅವಕಾಶವಿಲ್ಲವೇ?’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹರಿಹಾಯ್ದರು.
‘ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಟ್ವೀಟ್ಗಳನ್ನು ನೋಡಿದರೆ, ಅವರಿಗೆ ಮಾನಸಿಕ ಸಮತೋಲನ ತಪ್ಪಿದೆ ಎಂದೆನಿಸುತ್ತದೆ. ಅವರು ಕೀಳುಮಟ್ಟದ ಭಾಷೆ ಬಳಸುತ್ತಿರುವುದು ಸರಿಯಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
‘ಕುಮಾರಸ್ವಾಮಿ ಅವರೇ, ನಿಮ್ಮನ್ನು ನೀವು ಒಕ್ಕಲಿಗರ ಚಾಂಪಿಯನ್ ಅಂದುಕೊಂಡಿದ್ದರೆ ಆ ಭಾವನೆಯಿಂದ ಹೊರಬನ್ನಿ. ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಒಕ್ಕಲಿಗ ಸಮುದಾಯದ ಮುಖಂಡರೇ ನಿಮ್ಮ ಪಕ್ಷ ತೊರೆದು ಬರುತ್ತಿದ್ದಾರೆ’ ಎಂದರು.